ಬೇಸಿಗೆ ಹೊಡೆತದಿಂದ ತಪ್ಪಿಸಿಕೊಳ್ಳಲು ಸುಲಭ ಟಿಪ್ಸ್ ಗಳು
ಬೇಸಿಗೆಯ ಹೊಡೆತದಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ತಿಳಿಯುವುದಕ್ಕೆ ಇಲ್ಲಿ ಸರಳವಾದ ಟಿಪ್ಸ್ ಗಳಿವೆ. ಸೂರ್ಯನ ಪ್ರಖರತೆಯಿಂದ ಬಚಾವಾಗಲು ಇವು ಖಂಡಿತಾ ಸಹಾಯ ಮಾಡುತ್ತವೆ
ಬೆಂಗಳೂರು, ಏಪ್ರಿಲ್ 18: ಬೇಸಿಗೆಯ ಹೊಡೆತಕ್ಕೆ ಮೈ ಚರ್ಮ ಕಪ್ಪಾಗುತ್ತಿದೆ. ರಸ್ತೆಗೆ ಬಂದರೆ ಸ್ವಲ್ಪ ಹೊತ್ತಿಗೆ ಸುಸ್ತಾಗಿ ಎಲ್ಲಾದರೂ ನೆರಳಿರುವ ಜಾಗದಲ್ಲಿ ಕೂರೋಣ ಅನಿಸುತ್ತದೆ. ಎಷ್ಟು ನೀರು ಕುಡಿದರೂ ಸಾಕಾಗುತ್ತಿಲ್ಲ. ಮಜ್ಜಿಗೆ, ತಂಪು ಪಾನೀಯ, ಐಸ್ ಕ್ರೀಂ ಎಲ್ಲವೂ ಕೆಲ ನಿಮಿಷದ ತಾತ್ಕಾಲಿಕ ಶಮನವೇ ವಿನಾ ಅವುಗಳಿಂದ ಹೆಚ್ಚಿನ ಪ್ರಯೋಜನ ಆಗುತ್ತಿಲ್ಲ.
ಕರ್ನಾಟಕದ ಯಾವ ಜಿಲ್ಲೆ, ದೇಶದ ಯಾವುದೇ ರಾಜ್ಯದಲ್ಲೂ ಬಿಸಿಲಿನ ತಾಪವೇ ಮುಖ್ಯ ಸುದ್ದಿಯಾಗುತ್ತಿದೆ. ಬಿಸಿಲ ಶಾಖ ಮತ್ತೂ ಹೆಚ್ಚಾಗಿ, ದೇಹದ ಮೇಲೆ ಪರಿಣಾಮ ಬೀರಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಇಂಥ ಸಂದರ್ಭದಲ್ಲಿ ಕೆಲವು ಸಲಹೆಗಳನ್ನು ಇಲ್ಲಿ ಕೊಡಲಾಗಿದೆ. ಪಾಲಿಸಿದರೆ ಅಷ್ಟರ ಮಟ್ಟಿಗೆ ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಬಹುದು.[ಭೀಕರ ಬಿಸಿಲು : ಇತರ ನಗರಗಳೊಂದಿಗೆ ಕಲಬುರಗಿ ಪೈಪೋಟಿ]

* ಮಧ್ಯಾಹ್ನ 12ರಿಂದ 3ರವರೆಗೆ ಮನೆಯಿಂದ ಆಚೆ ಹೋಗದಿರುವುದು ಉತ್ತಮ.
* ಬಾಯಾರಿಕೆ ಆಗದಿದ್ದರೂ ಪರವಾಗಿಲ್ಲ, ಆಗಾಗ ನೀರು ಕುಡಿಯಿರಿ. ಸನ್ ಗ್ಲಾಸ್ ಹಾಕಿಕೊಳ್ಳಿ. ಛತ್ರಿ, ಟೋಪಿ, ಶೂ ಅಥವಾ ಚಪ್ಪಲಿ ಹಾಕಿಕೊಳ್ಳಿ

* ಪ್ರಯಾಣದ ಸಂದರ್ಭದಲ್ಲಿ ನೀರು ತೆಗೆದುಕೊಂಡು ಹೋಗಿ
* ಮದ್ಯಪಾನ, ಕಾಫಿ-ಟೀ ಸೇವನೆ ಹಾಗೂ ಕಾರ್ಬೊನೇಟಡ್ ತಪ್ಪು ಪಾನೀಯ ಸುತಾರಾಂ ಬೇಡ[ಬಿಸಿಲ ಹೊಡೆತದಿಂದ ತಪ್ಪಿಸಿಕೊಳ್ಳುವುದು ಹೇಗೆ?]

* ಹೆಚ್ಚು ಪ್ರೋಟೀನ್ ಯಿರುವ ಆಹಾರ ಸೇವಿಸಬೇಡಿ. ತಂಗಳು ಆಹಾರ ಪದಾರ್ಥ ತಿನ್ನಬೇಡಿ
* ಪಾರ್ಕಿಂಗ್ ಮಾಡಿದ ವಾಹನದೊಳಗೆ ಮಕ್ಕಳನ್ಣಾಗಲೀ ಸಾಕು ಪ್ರಾಣಿಗಳನ್ಣಾಗಲೀ ಬಿಡಬೇಡಿ
* ಸ್ವಲ್ಪ ಅಸ್ವಸ್ಥತೆ ಕಂಡುಬಂದರೂ, ಸುಸ್ತೆನಿಸಿದರೂ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ
* ಒಆರ್ ಎಸ್, ಲಸ್ಸಿ, ಅನ್ನದ ಗಂಜಿ, ನಿಂಬೆಹಣ್ಣಿನ ಪಾನಕ, ಮಜ್ಜಿಗೆ.. ಹೀಗೆ ದೇಹಕ್ಕೆ ನೀರಿನಂಶ ಪೂರೈಸುವ ಪಾನೀಯವನ್ನು ಕುಡಿಯಿರಿ

* ಮನೆಯಲ್ಲಿ ಸಾಕಿರುವ ಪ್ರಾಣಿಗಳನ್ನು ನೆರಳಿನಲ್ಲೇ ಕಟ್ಟಿ ಹಾಕಿ, ಅವುಗಳಿಗೆ ಅಗತ್ಯಪ್ರಮಾಣದ ನೀರು ಪೂರೈಸಿ
* ಮನೆಯನ್ನು ತಂಪಾಗಿ ಇರುವಂತೆ ನೋಡಿಕೊಳ್ಳಿ. ಕರ್ಟನ್ ಬಳಸಿ, ಸೂರ್ಯನ ಕಿರಣಗಳು ನೇರ ತಗುಲದಂತೆ ವ್ಯವಸ್ಥೆ ಮಾಡಿ. ರಾತ್ರಿ ವೇಳೆ ಕಿಟಕಿ ಬಾಗಿಲನ್ನು ತೆರೆದಿಡಿ.

* ಫ್ಯಾನ್ ಬಳಸಿ. ಆಗಾಗ ತಣ್ಣೀರಿನಲ್ಲಿ ಸ್ನಾನ ಮಾಡಿ
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
High Speed Rail: ಬೆಂಗಳೂರು ಸೇರಿ 3 ಹೈಸ್ಪೀಡ್ ರೈಲು ಕಾರಿಡಾರ್ ಡಿಪಿಆರ್ 2027ಕ್ಕೆ ಪೂರ್ಣ, ವಿವರ -
ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು? -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಬಿಸಿಲಿನ ತಾಪಕ್ಕೆ ಕಳೆಗುಂದಿದೆಯೇ ಮುಖದ ಕಾಂತಿ? ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿವೆ 12 ಸರಳ ಸೂತ್ರ -
Summer Gardening: ಸುಡು ಬಿಸಿಲಲ್ಲೂ ನಿಮ್ಮ ಕೈತೋಟದ ಹಸಿರಾಗಿರಲಿ: ಗಿಡಗಳ ರಕ್ಷಣೆಗೆ ಇಲ್ಲಿವೆ ಸರಳ ಸೂತ್ರಗಳು -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ












Click it and Unblock the Notifications