ಬೆಳಿಗ್ಗೆ 4.30ಕ್ಕೆ ಕಂಡ ಪೌರ ಕಾರ್ಮಿಕನಿಗೆ ಭೇಷ್ ಎಂದ ಸುರೇಶ್ ಕುಮಾರ್
Recommended Video
ಬೆಂಗಳೂರು, ಮೇ 08: ಧಾರಾಕಾರ ಮಳೆ ಬಂದು ವಾತಾವರಣ ಶಾಂತವಾಗಿರುವಾಗ ನಾವೆಲ್ಲ ನಿದ್ರಾದೇವಿಯ ಸೆರಗಲ್ಲಿ ಬಂಧಿಯಾಗಿದ್ದರೆ ಕೆಲವರು ನಸುಕಲ್ಲೇ ಎದ್ದು ನಗರದ ಸ್ವಚ್ಛತೆಗೆ ಟೊಂಕಕಟ್ಟಿ ನಿಲ್ಲುತ್ತಾರೆ.

ಅವರು ಪೌರ ಕಾರ್ಮಿಕರು! ಅಂಥ ಪೌರ ಕಾರ್ಮಿಕರನ್ನು ರಾಜಾಜೀನಗರ ಶಾಸಕ ಸುರೇಶ್ ಕುಮಾರ್ 'ಸ್ವಚ್ಛತಾ ವೈದ್ಯ'ರೆಂದು ಕರೆಯುತ್ತಾರೆ. ಪೌರ ಕಾರ್ಮಿಕರಿಗೆ ಸ್ವಚ್ಛತಾ ವೈದ್ಯರೆಂಬ ಬಿರುದು ನೀಡಿದ್ದು ಏಕೆ ಎಂಬುದನ್ನು ಅವರೇ ವಿವರಿಸಿದ್ದಾರೆ. ಇಂದು ಬೆಳಿಗ್ಗೆ 4:30 ರ ಸುಮಾರಿಗೆ ಶಾಸಕರಿಗೆ ಸಿಕ್ಕ ನರಸಿಂಹ ಎಂಬ ಪೌರ ಕಾರ್ಮಿಕನ ಬಗ್ಗೆ ಅವರು ಮೆಚ್ಚುಗೆಯ ಮಾತನ್ನಾಡಿದ್ದಾರೆ. ಈ ಕುರಿತು ಅವರು ಫೇಸ್ ಬುಕ್ ನಲ್ಲಿ ಹಾಕಿದ ಸ್ಟೇಟಸ್ ನ ಯಥಾವತ್ ರೂಪ ಇಲ್ಲಿದೆ ನೋಡಿ...
"ಬೆಳಿಗ್ಗೆ 4.30 ಗಂಟೆಗೇ ಬಸವೇಶ್ವರನಗರ ಎಂಟನೇ ಮುಖ್ಯರಸ್ತೆಯನ್ನು ಗುಡಿಸುತ್ತಿದ್ದ ಬಿಬಿಎಂಪಿ ಪೌರಕಾರ್ಮಿಕ ನರಸಿಂಹನನ್ನು ಕಂಡೆ.
ಇಷ್ಟು ಬೆಳಿಗ್ಗೆಯೇ ಕಸ ಗುಡಿಸಲು ಬಂದಿರುವ ಕಾರಣ ಕೇಳಿದಾಗ ನರಸಿಂಹ ಹೇಳಿದ್ದು
"ಸರ್. ನಿನ್ನೆ ರಾತ್ರಿಮಳೆ ಬಂದಿದೆ. ಕಸ ಹೆಚ್ಚು ಸೇರಿರುತ್ತೆ. ಇನ್ನು ಸ್ವಲ್ಪ ಹೊತ್ತಾದರೆ ಗಾಡಿಗಳು ನಿಲ್ಲುವುದು, ಓಡಾಡುವುದು ಪ್ರಾರಂಭವಾಗುತ್ತದೆ.ಅದಕ್ಕೇ ಈಗಲೇ ಬಂದು ಗುಡಿಸುವುದು ಒಳ್ಳೇದು". ಎಂದು.
ಅದಕ್ಕೇ ನಗರದ ಪೌರ ಕಾರ್ಮಿಕರನ್ನು ನಾನು ಯಾವಾಗಲೂ ನಗರದ ಸ್ವಚ್ಛತಾ ವೈದ್ಯರೆಂದು ಕರೆಯುವುದು. ನಮಗೆ ಅನೇಕ ಕಾಯಿಲೆಗಳು ಬರದಂತೆ ಅವರು ಎಷ್ಟು ಶ್ರಮ ವಹಿಸುತ್ತಾರೆ. ಆದರೆ ಅವರನ್ನು ಗುರುತಿಸುವುದು, ಮೆಚ್ಚುಗೆ ವ್ಯಕ್ತ ಪಡಿಸುವುದು, ಬೆನ್ನು ತಟ್ಟುವುದು ಕಡಿಮೆಯೇ.
ನರಸಿಂಹ ಬಸವಣ್ಣ ನವರ ವಚನ ಬಹುಶಃ ಓದಿಲ್ಲ. ಆದರೆ ತನ್ನ ಕಾಯಕದ ಮಹತ್ವ ಈತನಿಗೆ ಗೊತ್ತುಂಟು.
ಬಸವಜಯಂತಿಯ ಮಾರನೆಯ ದಿನ ಬೆಳಿಗ್ಗೆ 4.30 ಗಂಟೆಗೇ ತನ್ನ ಕಾಯಕದಲ್ಲಿ ತೊಡಗಿರುವ ನರಸಿಂಹನಿಗೊಂದು ನಮ್ಮೆಲ್ಲರ ಮೆಚ್ಚುಗೆಯ ಭೇಷ್ ಅನ್ನೋಣವೇ?"
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ












Click it and Unblock the Notifications