ರಾಜ್ಯ ಸಚಿವರ ಪ್ರಯಾಣದ ಮೊತ್ತ ಎಷ್ಟು ಗೊತ್ತೆ?
ಬೆಂಗಳೂರು, ಜುಲೈ, 30 : ನಮ್ಮ ರಾಜಕಾರಣಿಗಳ ಪ್ರಯಾಣದರ ವರ್ಷಕ್ಕೆ ಎಷ್ಟಾಗಬಹುದೆಂದು ನೀವು ಯಾರಾದರೂ ಬಲ್ಲೀರಾ? ಗೊತ್ತಿಲ್ವಾ....ಊಹಿಸಲಿಕ್ಕೆ ಹೋಗಿಲ್ವಾ? ಹಾಗಾದರೆ ಇದನ್ನು ಓದಿ....
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಸಚಿವರು ನಿತ್ಯ ಯಾವುದಾದರೂ ಕಾರ್ಯಕ್ರಮಕ್ಕೆ ಹಾಜರಾಗಲು ಊರಿಂದ ಊರಿಗೆ ಹೋಗ್ತಾನೇ ಇರ್ತಾರೆ. ಇವರಿಗೆ ಹೋಗೋದಕ್ಕೆ ಬರೋದಕ್ಕೆ ಪ್ರಯಾಣ ದರ ಎಂಬ ಹೆಸರಿನಲ್ಲಿ ಸರ್ಕಾರ 2 ವರ್ಷಗಳಿಂದ ಬರೋಬ್ಬರಿ 7.89 ಕೋಟಿ ಹಣವನ್ನು ಖರ್ಚು ಮಾಡಿದೆ.[ರೊಚ್ಚಿಗೆದ್ದು ಬಜೆಟ್ ಪುಸ್ತಕ ಎಸೆದ ಸಿದ್ದರಾಮಯ್ಯ!]

ಯಾರಿಗುಂಟು ಯಾರಿಗಿಲ್ಲ...ಪುಕ್ಕಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡಾ ಅನ್ನೋ ಹಾಗೆ ಸಚಿವರು ಜನರ ಹಣವನ್ನು ಇತಿಮಿತಿಯಿಲ್ಲದೇ 2 ವರ್ಷದಲ್ಲಿ ಕೋಟಿಗಟ್ಟಲೇ ಖರ್ಚು ಮಾಡಿರುವುದನ್ನು ಆರ್ಟಿಐ (Right to Information) ಅಧಿಕಾರಿಗಳು Department of Personnel and Administrative Reforms (DPAR) ಈ ಸಂಸ್ಥೆಯಿಂದ ಮಾಹಿತಿ ಕಲೆಹಾಕಿದ್ದಾರೆ.
ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಳಿದ ಎಲ್ಲಾ ಸಚಿವರನ್ನೊಳಗೊಂಡಂತೆ, ಪ್ರಯಾಣದರ ಹೊರತು ಪಡಿಸಿ ವೇತನಕ್ಕಾಗಿ ಸುಮಾರು 13.8 ಕೋಟಿ ಹಣವನ್ನು ಖರ್ಚು ಮಾಡುತ್ತದೆ.
ಆರ್ಟಿಐ ಅಧಿಕಾರಿ ಭೀಮಪ್ಪ ಗುಂಡಪ್ಪ ಗದಗ ಅವರು ಮಾಹಿತಿ ಸಂಗ್ರಹಿಸಿರುವ ಪ್ರಕಾರ ಕೆಲವು ಸಚಿವರು ತಮ್ಮ ಪ್ರತಿಷ್ಠೆಯ ನಿಮಿತ್ತ ಬಳಸುವ ಹೈಫೈ ಕಾರಿನಿಂದಾಗಿ ಕಿಲೋಮೀಟರ್ಗೆ 15ರೂ ಕೊಡುವ ಬದಲು 20ರಿಂದ 30 ರೂಗಳನ್ನು ಒಂದು ಕಿ.ಮೀಗೆ ಕೊಡಲಾಗುತ್ತಿದೆ.
ಪ್ರಯಾಣಕ್ಕಾಗಿ ಯಾರು ಎಷ್ಟು ಖರ್ಚು ಮಾಡಿದರು?
ನಗರಾಭಿವೃದ್ಧಿ ಸಚಿವ ವಿನಯ ಸೊರಕೆ ಕಳೆದ ಎರಡು ವರ್ಷಗಳಿಂದ ಪ್ರಯಾಣದರ 56.62 ಲಕ್ಷ ಸೇರಿದಂತೆ ಒಟ್ಟು 79.42 ಲಕ್ಷ ಖರ್ಚು ಮಾಡಿದ್ದಾರೆ. ನಂತರ ಟೆಕ್ಸ್ ಟೈಲ್ಸ್ ಸಚಿವ ಬಾಬುರಾವ್ ಚಿಂಚನ್ಸರ್ 44.63 ಪ್ರಯಾಣ ದರ ಒಳಗೊಂಡಂತೆ 76.29 ಲಕ್ಷ, ಆರೋಗ್ಯ ಸಚಿವ ಯು.ಟಿ ಖಾದರ್ ಪ್ರಯಾಣದರ 54.42 ಸೇರಿದಂತೆ 74.09 ಲಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ 36 ಲಕ್ಷ ಹಾಗೂ ಕಂದಾಯ ಸಚಿವ ವಿ ಶ್ರೀನಿವಾಸ್ ಪ್ರಸಾದ್ 22.96 ಲಕ್ಷ ಪಡೆದುಕೊಂಡಿದ್ದಾರೆ.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಕನ್ನಡಿಗರಿಗಿಂತ ಕೇರಳದವರೇ ಅದೃಷ್ಟವಂತರು: ವಯನಾಡಿಗೆ ಸಿದ್ದರಾಮಯ್ಯರಿಂದ 10 ಕೊಟಿ ರೂ ಅನುದಾನ: ಆಕ್ರೋಶ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications