ಸಿದ್ದರಾಮಯ್ಯ ರಿಜೆಕ್ಟೆಡ್ ಗೂಡ್ಸ್ : ಸದಾನಂದ ಗೌಡ

Recommended Video

      ಸಿದ್ದರಾಮಯ್ಯನನ್ನು ಮೈಸೂರು ಜನ ಓಡಿಸಿದ್ದಾರೆ..! ಬಾದಾಮಿ ಜನ ಬಾಡಿಗೆ ಮನೆ ಕೊಡುತ್ತಿಲ್ಲ..!

      ಬೆಂಗಳೂರು, ಏಪ್ರಿಲ್ 06 : 'ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಜೆಕ್ಟೆಡ್ ಗೂಡ್ಸ್. ಕಾಂಗ್ರೆಸ್‍ನಲ್ಲೇ ಅವರನ್ನು ಯಾರೂ ಕ್ಯಾರೇ ಎನ್ನುತ್ತಿಲ್ಲ. ಉತ್ತರ ನೀಡಲೂ ಅವರು ಅರ್ಹರಲ್ಲ' ಎಂದು ಡಿ.ವಿ.ಸದಾನಂದ ಗೌಡ ಟೀಕಿಸಿದರು.

      ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ವಾಕ್ಸಮರ ನಡೆಯುತ್ತಿದೆ. 'ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲಾ ಹಳದಿಯಾಗಿ ಕಾಣಿಸುತ್ತದೆ' ಎಂದು ಸದಾನಂದ ಗೌಡರು ಕುಟುಕಿದ್ದಾರೆ.

      'ನಾನು ಈ ಕ್ಷೇತ್ರದವನಲ್ಲ ಎಂದು ಹೋದಲ್ಲೆಲ್ಲಾ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕಾಂಗ್ರೆಸ್‍ನಲ್ಲೇ ಅವರನ್ನು ಯಾರೂ ಕ್ಯಾರೇ ಎನ್ನುತ್ತಿಲ್ಲ. ಉತ್ತರ ನೀಡಲೂ ಅವರು ಅರ್ಹರಲ್ಲ' ಎಂದು ಟೀಕಿಸಿದರು.

      Sadananda Gowda

      'ಸಿದ್ದರಾಮಯ್ಯ ಈಗ ಸಿಎಂ ಆಗಿಲ್ಲ. ಪ್ರತಿಪಕ್ಷ ನಾಯಕರಲ್ಲ. ಅವರಿಗೆ ಗೂಟದ ಕಾರಿನ ಮೇಲೆ ಬಹಳ ಆಸಕ್ತಿ. ಪೊಲೀಸ್ ಜೀಪ್‍ಗಳು ಹಿಂಬಾಲಿಸಬೇಕು ಎಂದು ಬಯಸುತ್ತಾರೆ. ಈಗ ಅವರ ಬಳಿ ಇದ್ಯಾವುದೂ ಇಲ್ಲ. ಅದಕ್ಕಾಗಿ ಭ್ರಮನಿರಸನಗೊಂಡು ಬಾಯಿಗೆ ಬಂದಂತೆ ಮಾತನಾಡುತ್ತಾರೆ' ಎಂದು ಲೇವಡಿ ಮಾಡಿದರು.

      'ನನ್ನ ಪ್ರಗತಿ ವರದಿ ಅವರಿಗೆ ಕಳುಹಿಸೋಣ ಎಂದರೆ ಜನರು ಸಿದ್ದರಾಮಯ್ಯ ಅವರನ್ನು ಮೈಸೂರಿನಿಂದ ಓಡಿಸಿದ್ದಾರೆ. ವಿಧಾನಸೌಧದಲ್ಲೂ ಅವರಿಗೆ ಅಡ್ರೆಸ್ ಇಲ್ಲ. ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಯಾರೂ ಬಾಡಿಗೆ ಮನೆ ಕೊಡುತ್ತಿಲ್ಲ' ಎಂದು ವ್ಯಂಗ್ಯವಾಡಿದರು.

      'ಸಿದ್ದರಾಮಯ್ಯ ಅವರ ಬಾಡಿ ಲಾಂಗ್ವೇಜ್ ಏನು ಎಂದು ನಾಡಿನ ಜನರಿಗೆ ಗೊತ್ತಿದೆ. ಸಮ್ಮಿಶ್ರ ಸರಕಾರ ಉರುಳಿದರೆ ಸಾಕು ಎಂದು ಕಾಯುತ್ತಿದ್ದಾರೆ. ಅಂತಹವರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ' ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+