ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ತಂಡ ಪ್ರವಾಹ ಪೀಡಿತ ಕೊಡಗಿಗೆ
ಬೆಂಗಳೂರು, ಆಗಸ್ಟ್ 22: ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಆಗಸ್ಟ್ 23ರಂದು ಕೊಡಗು ಪ್ರವಾಸ ತೆರಳಲಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳನ್ನು ವೀಕ್ಷಿಸಿ ವರದಿ ಪಡೆಯಲಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮಡಿಕೇರಿ ಪ್ರವಾಸ ಕೈಗೊಂಡಿದ್ದಾರೆ, ಸಚಿವ ಸಾ.ರಾ. ಮಹೇಶ್ ಕೂಡಾ ಮಡಿಕೇರಿಯಲ್ಲಿಯೇ ಉಳಿದುಕೊಂಡಿದ್ದಾರೆ, ಲೋಕೋಪಯೋಗಿ ಸಚಿವ ರೇವಣ್ಣ ಪ್ರವಾಹ ಸಂತ್ರಸ್ತರ ಕಷ್ಟ ಆಲಿಸುತ್ತಿದ್ದಾರೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಕಂದಾಯ ಸಚಿವ ಆರ್ವಿ ದೇಶಪಾಂಡೆ, ಯುಟಿ ಖಾದರ್ ಕೂಡ ಪ್ರವಾಸ ಕೈಗೊಂಡಿದ್ದರು, ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರವಾಹ ಪೀಡಿತ ಕೊಡಗಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತೆರಳಲಿದ್ದಾರೆ, ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸೂಚನೆಯಂತೆ ಕಾಂಗ್ರೆಸ್ ನಾಯಕರು ಪ್ರವಾಸ ಕೈಗೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಕೊಡಗಿನಲ್ಲಿ ಸಂಭವಿಸಿದ ಅನಾಹುತಗಳು, ಪರಿಹಾರ ಕ್ರಮಗಳ ಕುರಿತು ವರದಿ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ನೀಡಲಿದ್ದಾರೆ.
ಕೊಡಗಿನಲ್ಲಿ ಮೃತದೇಹಗಳ ಶೋಧಕಾರ್ಯ ಆರಂಭ
ಕೊಡಗಿನಲ್ಲಿ ಕೊಚ್ಚಿಹೋಗಿರುವ ಮೃತದೇಹಗಳ ಶೋಧಕಾರ್ಯ ಆರಂಭ,ವಾಗಿದೆ, ಕೊಚ್ಚಿ ಹೋಗಿರುವ ತಾಯಿ-ಮಗನಿಗಾಗಿಸೇನಾಪಡೆಯ 15 ಜನರ ತಂಡದಿಂದ ಶೋಧಕಾರ್ಯ ನಡೆಯುತ್ತಿದೆ. ಸುಮಾರು ಐದಾರು ಕಿಲೋಮೀಟರ್ ಕೊಚ್ಚಿಹೋಗಿರುವ ಸಾಧ್ಯತೆ, ಶೋಧಕಾರ್ಯಕ್ಕೆ ಸೇನಾಪಡೆಯ ಜೊತೆಗೆ ಸ್ಥಳೀಯರು ಸಾಥ್ ನೀಡುತ್ತಿದ್ದಾರೆ.
ಪ್ರವಾಹಕ್ಕೆ ಕಾರಣವಾದ ಸೋಮಾಲಿ ಜೆಟ್ ಚಂಡ ಮಾರುತ ಎಂದರೇನು?
ಕೊಡಗು- ಹಾಸನ ಗಡಿ ಭಾಗದಲ್ಲಿ ಭೂಕುಸಿತ
ಕೊಡಗಿನಲ್ಲಿ ಪ್ರವಾಹ ನಿಂತರೂ ಅನಾಹುತ ಮಾತ್ರ ತಪ್ಪಲಿಲ್ಲ, ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ಭೂಮಿ ಜಾರುತ್ತಿದೆ,ಮಾರನ ಬೆಟ್ಟ ಎರಡು ಬದಿಯಲ್ಲಿ ಭೂ ಸ್ಫೋಟ ಉಂಟಾಗಿದೆ, ಇದರಿಂದ 2 ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ. ಮಲ್ಲಳ್ಳಿ ಜಲಪಾತದ ಬೆಟ್ಟದಲ್ಲಿ ಮಣ್ಣು ಜಾರುತ್ತಿದೆ. ಮಲ್ಲಳ್ಳಿ ಗ್ರಾಮದ 7.8 ಎಕರೆ ಜಮೀನಿಲ್ಲ ಕುಸಿತ ಉಂಟಾಗಿದೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ವಿದ್ಯಾರ್ಥಿಗಳ ಭವಿಷ್ಯ ದುಸ್ತರ
ಪ್ರಕೃತಿಯ ಮುನಿಸಿಗೆ ಕೊಡಗಿನ ವಿದ್ಯಾರ್ಥಿಗಳ ಭವಿಷ್ಯ ದುಸ್ಥರವಾಗಿದೆ, ಕಂಡು ಕೇಳರಿಯದ ಪ್ರವಾಹಕ್ಕೆ ಕೊಡಗು ತ್ತರಿಸಿದ್ದು, ಕಳೆದ 12ದಿನಗಳಿಂದ ಶಾಲಾ ಕಾಲೇಜುಗಳಿಗೆ ರಜ ಘೋಷಿಸಲಾಗಿದೆ. ಸರ್ಕಾರಿ ಶಾಲೆಗಳು ಸಂತ್ರಸ್ತರ ಕೇಂದ್ರವಾಗಿ ಮಾರ್ಪಟ್ಟಿದೆ.
ಕೊಡಗು ವಿದ್ಯಾರ್ಥಿಗಳಿಗೆ ಹೊಸ ಅಂಕಪಟ್ಟಿ ನೀಡಲು ಸರ್ಕಾರ ಸೂಚನೆ
ವಿದ್ಯುತ್ ಪೂರೈಕೆ ದುರಸ್ಥಿ ಕಾರ್ಯ ಚುರುಕು
ಪ್ರವಾಹ ಪೀಡಿತ ಮಡಿಕೇರಿಯಲ್ಲಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸುವ ಕಾರ್ಯ ಚುರುಕುಗೊಂಡಿದೆ. ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿದ್ದವು. ಮಡಿಕೇರಿಯಿಂದ ತಾಳಕಮನೆಗೆ ಸಂಪರ್ಕಿಸುವ ಏರಿಯಾದಲ್ಲಿ ಹೊಸದಾಗಿ ವಿದ್ಯುತ್ ಕಂಬ ಸ್ಥಾಪನೆ ಮಾಡಲಾಗಿದೆ. ಕತ್ತಲಲ್ಲಿ ಮುಳುಗಿದ್ದ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.