ಹಿರಿಯ ಛಾಯಾಗ್ರಾಹಕರಾದ ಎಸ್ ಸಿ ಶ್ರೀಕಾಂತ್ ಇನ್ನಿಲ್ಲ
ಬೆಂಗಳೂರು, ಮೇ ೮: ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕರಾದ ಎಸ್ ವಿ ಶ್ರೀಕಾಂತ್ ನಿನ್ನೆ ಸಂಜೆ ಬೆಂಗಳೂರಿನ ಅವರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
1960 ರಿಂದ 40 ವರ್ಷಗಳ ಕಾಲ ಅನೇಕ ಡಾ ರಾಜಕುಮಾರ್ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವುದರಲ್ಲಿ ಬಬ್ರುವಾಹನ ಸದಾ ಮನಸಿನಲ್ಲಿ ಉಳಿಯುಯುವುದು. ಗೆಜ್ಜೆ ಪೂಜೆ. ಉಪಾಸನೆ ಹಾಗೂ ಮಾರ್ಗದರ್ಶಿ ಚಿತ್ರಗಳ ಛಾಯಾಗ್ರಹಣಕ್ಕೆ ರಾಜ್ಯ ಪ್ರಶಸ್ತಿ ಸಹ ಪಡೆದವರು.
60 ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಎಸ್ ವಿ ಶ್ರೀಕಾಂತ್ ಛಾಯಾಗ್ರಹಣದ ಚಿತ್ರಗಳು ಸ್ವರ್ಣ ಗೌರಿ, ಪ್ರೇಮಮಯಿ, ಮನಸಿದ್ದರೆ ಮಾರ್ಗ, ಬಹಾದ್ದೂರ್ ಗಂಡು, ನಾ ನಿನ್ನ ಬಿಡಲಾರೆ, ಹಣ್ಣಲೇ ಚಿಗುರಿದಾಗ, ಅದೇ ಕಣ್ಣು, ಶ್ರಾವಣ ಬಂತು, ರಾಣಿ ಮಹಾರಾಣಿ, ವಿಜಯ್ ವಿಕ್ರಮ್, ಎಡಕಲ್ಲು ಗುಡ್ಡದ ಮೇಲೆ ಹಾಗೂ ಇನ್ನಿತರ ಸಿನಿಮಾಗಳು. ಶ್ರೀಕಾಂತ್ ಅವರು ಮಡದಿ ಹಾಗೂ ಪುತ್ರನನ್ನು ಅಗಲಿದ್ದಾರೆ.
Comments
English summary
Senoir Cameraman S C Shrikant Passes Away. hi worked with dr rajkumar and many legedn actors.