ಕಲಾಸೌಧದಲ್ಲಿ ತಪ್ಪದೇ ನೋಡಿ : ಕೈಲಾಸಂ ನಾಟಕ ಸತ್ತವನ ಸಂತಾಪ
ಬೆಂಗಳೂರು, ಡಿ. 07: ಬಹುತೇಕ ಹೊಸಬರೇ ಸೇರಿ, ರಂಗಭೂಮಿಯ ಒಲವಿಗಾಗಿ ಒಟ್ಟುಗೂಡಿ "ಜ್ಯೋತಿರ್ಮೇಘ" ಎಂಬ ಪುಟ್ಟ ತಂಡವೊಂದನ್ನು ಕಟ್ಟಿಕೊಂಡು ಮೊಟ್ಟ ಮೊದಲ ಬಾರಿಗೆ ಪ್ರಯೋಗಿಸುತ್ತಿರುವ ನಾಟಕ ಟಿ.ಪಿ. ಕೈಲಾಸಂ ಅವರ "ಸತ್ತವನ ಸಂತಾಪ". ತಪ್ಪದೇ ನೋಡಿ
ಬೆಂಗಳೂರು ವಿಶ್ವವಿದ್ಯಾಲಯದ ಥಿಯೇಡರ್ ಆರ್ಟ್ ನಲ್ಲಿ ಮಾಸ್ಟರ್ ಮಾಡಿರುವ ಪ್ರಭುರಾಜ್ ಅವರಿಂದ ಐದು ದಿನಗಳ ಕಾರ್ಯಗಾರದೊಂದಿಗೆ ಈ ನಾಟಕಕ್ಕೆ ತಯಾರಿ ಆರಂಭವಾಯಿತು.
ಬಹುತೇಕ ಎಲ್ಲ ಕೈಲಾಸಂ ನಾಟಕಗಳಂತೆ, ಸತ್ತವನ ಸಂತಾಪ ನಾಟಕವು ಈಗಿನ ಸಾಮಾಜಿಕ ಸ್ಥತಿಗೆ ತುಂಬ
ಹತ್ತಿರ. ಈ ನಾಟಕವು ಹೆಂಡತಿಯನ್ನು ತನ್ನ ತಂದೆಯಿಂದ ಹಣ ಕೇಳಲು ಪದೇ ಪದೇ ಸತಾಯಿಸುವ ನರಸಿಂಹಯ್ಯ ಎಂಬ
ವ್ಯಕ್ತಿಯ ಸುತ್ತ ನಡೆಯುತ್ತದೆ. ತಂದೆಗೆ ಹಣಕ್ಕಾಗಿ ಪತ್ರ ಬಾರೆಯಲು ನಿರಾಕರಿಸುವ ಹೆಂಡತಿಗೆ ತನ್ನ ಬೆಲೆ ತಿಳಿಸಬೇಕು
ಎಂದು ತಾನು ಕೆರೆಗೆ ಬಿದ್ದು ಸತ್ತಂತೆ ನಟಿಸುತ್ತಾನೆ, ನರಸಿಂಹಯ್ಯ.

ನರಸಿಂಹಯ್ಯನ ಸಾವನ್ನು ಊರಿನ ಶ್ಯಾನುಭೋಗರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ಕೊನೆಗೆ ನರಸಿಂಹಯ್ಯನ ಬೆಲೆ ತನ್ನ ಹೆಂಡತಿಗೆ ಗೊತ್ತಾಗುತ್ತದೋ ಅಥವ ಅವನ ಹೆಂಡತಿಗೆ ತನ್ನ ಗಂಡನ ಬೆಲೆ ಗೊತ್ತಾಗುತ್ತೋ, ಅಥವ ಯಾರ ಬೆಲೆ ಮತ್ತು
ಯೋಗ್ಯತೆಗಳು ಯಾರಿಗೆ ಅರಿವಾಗುತ್ತೆ ಎಂಬುದು ಈ ನಾಟಕದ ಕಥಾ ವಸ್ತು.
ನಾಟಕದ ಹೆಸರು: ಸತ್ತವನ ಸಂತಾಪ
ತಂಡ: ಜ್ಯೋತಿರ್ಮೇಘ
ನಿರ್ದೇಶನ: ಕಿರಣ್ ಪ್ರಭು
ಸಹ ನಿರ್ದೇಶನ: ಅಜಯ್ ನಾಯಕ್
ಸಂಗೀತ: ಶಶಾಂಕ್ ಪ್ರಣವ್
ಬೆಳಕು: ಮನಸ್ ಸಂಪತ್
ರಂಗ ಸಜ್ಜಿಕೆ: ಮಂಜು ಬಿ.ಎಂ.

ಪ್ರದರ್ಶನದ ಸ್ಥಳ: ಕೆ.ಹೆಚ್. ಕಲಾಸೌಧ
ದಿನಾಂಕ: ಡಿಸೆಂಬರ್ 9, 2015.
ಸಮಯ: ಸಂಜೆ 7.30
ಟಿಕೆಟ್ ದರ: 100 /
ಟಿಕೆಟುಗಳು ಫಿಲ್ಮೀ ಸ್ಪಿಯರ್ ನಲ್ಲಿ ಲಭ್ಯ
ಪಾತ್ರವರ್ಗ
1. ಕಿರಣ್ ಚನ್ನವೀರ್ (ನರಸಿಂಹಯ್ಯ)
2. ಸಿಂಧು ಪುರೋಹಿತ್ (ಲಕ್ಷಮ್ಮ)
3. ಅಲ್ತಾಫ್ (ಶ್ಯಾನುಭೋಗ)
4. ಅಶ್ವಿನಿ (ಕೆಂಪಮ್ಮ)
5. ಪ್ರವೀಣ್ (ಧರಣ್ಣಯ್ಯ)
6. ನಿಖಿಲ್ ವಾಯ್ಕರ್ (ಸದಾಶಿವಯ್ಯ)
7. ಅರ್ಜುನ್ ಕುಮಾರ್ (ವೆಂಕಟರಮಣ ಶೆಟ್ರು)
8. ಪವನ್ ಕುಮಾರ್ ಎ (ಪೊಲೀಸ್ ಇನ್ಸ್ಪೆಕ್ಟರ್)
9. ಆಕಾಶ (ಪೊಲೀಸ್ ಪೇದೆ)
10. ಅನಿರುಧ್ಧ ರಮೇಶ, ಶ್ರೀನಿಧಿ, ಚೇತನ್ ಕ.ಜೆ, ವರುಣ್ (ದನಕಾಯುವವರು)
ಸಹಕಾರ: ಅವಿನಾಶ ಶಾಸ್ತ್ರಿ, ವರ್ಷ ವ.ಕೆ. ರಾವ್, ಧೀರಜ್, ವಿನಯ್, ಮನೋಜ್ ಎನ್.
Our Facebook page: http://facebook.com/jyotirmegha
Food partner: South Kitchen
Online partner: One India
Ticketing partner: Filmy sphere
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications