ನಾಳೆ ನಾಟಕ ಪ್ರದರ್ಶನ : ರಂಗಭೂಮಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೇಳುವ 'ಸರ್ಗ'
ರಂಗಭೂಮಿ ಅಂದರೆ ಏನು?, ಇಂದಿನ ರಂಗಭೂಮಿಯಲ್ಲಿ ಎಲ್ಲವೂ ಸರಿ ಇದೆಯೇ?, ಚಿತ್ರರಂಗಕ್ಕೆ ಹೋಗಬೇಕು ಎನ್ನುವ ಉದ್ದೇಶಕ್ಕೆ ರಂಗಭೂಮಿಯನ್ನು ಬಳಸಿಕೊಳ್ಳುವುದು ಸರಿಯೇ?, ರಂಗಭೂಮಿಯೇ ತನ್ನ ಜೀವ ಎಂದು ನಂಬಿಕೊಂಡಿರುವ ಕಲಾವಿದ, ಅದರಿಂದಲೇ ಜೀವನ ಮಾಡಲು ಸಾಧ್ಯವೇ? ಹೀಗೆ ರಂಗಭೂಮಿಯ ಬಗ್ಗೆ ಇರುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕು ಎಂದರೆ 'ಸರ್ಗ' ನಾಟಕ ನೋಡಿ.
ನಾಟಕ : ಸರ್ಗ
ರಚನೆ, ನಿರ್ದೇಶನ: ಭರತ್ ಸ ಜಗ್ಗನ್ನಾಥ್
ಯಾವಾಗ : ನಾಳೆ (ಶನಿವಾರ) ಸಂಜೆ : 4:30 ಹಾಗೂ 7:30ಕ್ಕೆ (ಎರಡು ಪ್ರದರ್ಶನ)
ಸ್ಥಳ : ಕೆ.ಹೆಚ್ ಕಲಾ ಸೌಧ, ಬೆಂಗಳೂರು
'ಸರ್ಗ' ಇದು ಸೈಡ್ ವಿಂಗ್ ಬೆಂಗ್ಳೂರ್ ರಂಗ ತಂಡದ ಹೆಮ್ಮೆಯ ನಾಟಕ. ಭರತ್ ಸ ಜಗ್ಗನ್ನಾಥ್ ಈ ನಾಟಕದ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ಇದೊಂದು ಪ್ರಯೋಗಾತ್ಮಕ ನಾಟಕ ಆಗಿದೆ. ನಾಟಕದ ಒಳಗಡೆ ಒಂದು ನಾಟಕ ನಡೆಯುತ್ತಿರುತ್ತದೆ. ಅದರ ಮೂಲಕ ಪ್ರಸ್ತುತ ರಂಗಭೂಮಿಯಲ್ಲಿ ನಡೆಯುವ ವಿದ್ಯಮಾನವನ್ನು ಪರಿಣಾಮಕಾರಿ ಹೇಳಲಾಗಿದೆ.

ಈ ನಾಟಕ ನೋಡಿದವರಿಗೆ ರಂಗಭೂಮಿ ಬಗ್ಗೆ ಗೌರವ ಮೂಡುತ್ತದೆ. ಅದ್ಭುತ ವಿಷಯವನ್ನು ಸಾಕಷ್ಟು ಮನರಂಜನೆ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಅಂದಹಾಗೆ, ಈಗಾಗಲೇ ಆರು ಯಶಸ್ಸಿ ಪ್ರದರ್ಶನ ಕಂಡಿರುವ ಈ ನಾಟಕದ ಏಳನೇ ಮತ್ತು ಎಂಟನೇ ಪ್ರದರ್ಶನ ಈ ಶನಿವಾರ ಅಂದರೆ ನಾಳೆ ಬೆಂಗಳೂರಿನ ಹನುಮಂತ ನಗರದ ಕೆ ಹೆಚ್ ಕಲಾ ಸೌಧದಲ್ಲಿ 4:30 ಹಾಗೂ 7:30ಕ್ಕೆ (ಎರಡು ಪ್ರದರ್ಶನ) ನಡೆಯಲಿದೆ. 'ಒಂದಲ್ಲಾ ಎರಡಲ್ಲಾ' ಸಿನಿಮಾ ಖ್ಯಾತಿಯ ನಟ ಹಾಗೂ ರಂಗಭೂಮಿ ಕಲಾವಿದ ಆನಂದ್ ತುಮಕೂರು ನಾಟಕ ನೋಡಲು ಬರುತ್ತಿದ್ದಾರೆ.
ಅಂದಹಾಗೆ, ಎಂ ಎಂ ಶೈಲೇಶ್ ಕುಮಾರ್, ಕೃಷ್ಣಾನಂದ, ಲತಾ ಸರ್ವೇಶ್, ವಸಂತ್, ಆದಿತ್ಯ ಭಾರದ್ವಾಜ್, ಅಶ್ವಿತಾ ಹೆಗ್ಡೆ, ಸಿಂಚನ ಶೈಲೇಶ್, ವಿಶ್ವತಾ ಹೆಗ್ಡೆ, ಶಿಶಿರ್, ದಯಾನಂದ್ ಸಾಗರ್, ಗುರು ಪ್ರಸಾದ್, ನಿಶ್ಚಲ್ ಮುಧೋಳ್, ನಾಗರಾಜ್, ಚಿರಾಗ್ ಚಂದ್ರಶೇಖರ್ ಹಾಗೂ ನವೀನ್ ನಾಟಕದಲ್ಲಿ ನಟಿಸಿದ್ದಾರೆ.

ಸೈಡ್ ವಿಂಗ್ ಬೆಂಗ್ಳೂರ್ ರಂಗ ತಂಡದ ಈಗಾಗಲೇ 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್' 'ಇಲ್ಲ ಅಂದ್ರೆ ಇದೆ', 'ಸಡನ್ನಾಗ್ ಸತ್ತೋದ್ರೆ??' 'ನಾಯೀಕತೆ' ಸೇರಿದಂತೆ ಅನೇಕ ಒಳ್ಳೆ ಒಳ್ಳೆಯ ನಾಟಕಗಳನ್ನು ಮಾಡಿದೆ. ಈ ಎಲ್ಲ ನಾಟಕಗಳನ್ನು ಎಂ ಶೈಲೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ.
ಸೈಡ್ ವಿಂಗ್ ಬೆಂಗ್ಳೂರ್ ರಂಗತಂಡದ ಮುಂದಿನ ನಾಟಕ ಗಿರೀಶ್ ಕಾರ್ನಾಡರ 'ರಾಕ್ಷಸ ತಂಗಡಿ' ಆಗಿದ್ದು, ಈ ನಾಟಕ ಡಿಸೆಂಬರ್ ನಲ್ಲಿ ಪ್ರದರ್ಶನ ಆಗಲಿದೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications