ಸಕಲ ಸಂಗೀತಧಾರೆ ಹರಿಸುವ ಅಪ್ಲಿಕೇಷನ್ ಇರಲಿ ನಿಮ್ಹತ್ರ!
ಬೆಂಗಳೂರು, ಸೆ.16: ಸ್ಮಾರ್ಟ್ ಫೋನ್ ನಲ್ಲಿ ಸದಾ ಕಾಲ ನಿಮ್ಮ ನೆಚ್ಚಿನ ಸಂಗೀತ ಕೇಳಲು ನಾನಾ ಬಗೆಯ ಅಪ್ಲಿಕೇಷನ್ ಗಳಿವೆ. ಅದರೆ, ಭಾರತೀಯ ಶುದ್ಧ ಶಾಸ್ತ್ರೀಯ ಸಂಗೀತ ಅಂಗೈಯಲ್ಲೇ ದೊರೆಕುವ ಅಪ್ಸ್ ವಿರಳ. ಇಂಥ ಕೊರಗನ್ನು ಸಾರೆಗಾಮ ಸಂಸ್ಥೆ ಕೊನೆಯಾಗಿಸಿದೆ.
ಕ್ಲಾಸಿಕಲ್ ಅಪ್ ಮೂಲಕ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸೆ. 16ರಂದು ಎಂಎಸ್ ಸುಬ್ಬಲಕ್ಷ್ಮಿ ಹುಟ್ಟುಹಬ್ಬವನ್ನು ಅವರ ಗಾಯನ ಕೇಳುತ್ತಾ ಆಚರಿಸಬಹುದು. ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ, ಫ್ಯೂಷನ್, ಉಪಕರಣಗಳ ಸಂಗೀತ ಸೇರಿದಂತೆ 50ಕ್ಕೂ ಅಧಿಕ ರೇಡಿಯೋ ಸ್ಟೇಷನ್ಸ್, 184ಕ್ಕೂ ಅಧಿಕ ಕಲಾವಿದರ ಗಾಯನ ನಿಮಗೆ ಸಿಗಲಿದೆ.[ಗೋಡ್ಖಿಂಡಿರಿಂದ ವಿಶಿಷ್ಟ ಸಂಗೀತ ಸಾಹಸ ಘೋಷಣೆ]
ಸಂಜೀವ್ ಗೋಯೆಂಕಾ ಸಮೂಹ ಸಂಸ್ಥೆಯ ಸಾರೆಗಾಮಾ ಇಂಡಿಯಾ ಲಿಮಿಟೆಡ್ ಈ ಸಂಗೀತ ಕ್ಲಾಸಿಕಲ್ ಅಪ್ಲಿಕೇಷನ್ ಆಂಡ್ರಾಯ್ಡ್ ಹಾಗೂ ಐ ಓಎಸ್ ಇರುವ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿದ್ದು, ಸುಮಾರು 172 ದೇಶಗಳನ್ನು ತಲುಪಲಿದೆ. ಡೌನ್ ಲೋಡ್ ಲಿಂಕ್ ಇಲ್ಲಿದೆ ಸದ್ಯಕ್ಕೆ 7 ದಿನಗಳ ಟ್ರಯಲ್ ನಲ್ಲಿ ಉಚಿತವಾಗಿ ಕೇಳಬಹುದು. ನಂತರ ಮಾಸಿಕ, ಅರ್ಧ ವಾರ್ಷಿಕ ಹಾಗೂ ವಾರ್ಷಿಕ ಚಂದಾದಾರರಾಗಬಹುದು. ಎಂಎಸ್ ಸುಬ್ಬಲಕ್ಷ್ಮಿ, ಡಾ. ಎಂ ಬಾಲಮುರಳಿಕೃಷ್ಣ, ಶೆಮ್ಮಗುಡಿ ಶ್ರೀನಿವಾಸ ಅಯ್ಯರ್, ಡಿಕೆ ಜಯರಾಮ್, ಲಾಲ್ಗುಡಿ ಜಯರಾಮ್, ಎಂಎಸ್ ಗೋಪಾಲಕೃಷ್ಣನ್, ಮದುರೈ ಮಣಿ ಅಯ್ಯರ್, ಬಾಂಬೆ ಜಯಶ್ರೀ ಸೇರಿದಂತೆ 70ಕ್ಕೂ ಅಧಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜರ ಗಾನ ಸುಧೆ ಲಭ್ಯ. ಉಸ್ತಾದ್ ಬಡೇ ಗುಲಾಮ್ ಅಲಿ ಖಾನ್, ಉಸ್ತಾದ್ ಬಿಸ್ಮಿಲ್ಲಾ ಖಾನ್, ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್, ಬಸವರಾಜ ರಾಜ್ ಗುರು, ಭೀಮ್ ಸೇನ್ ಜೋಶಿ, ಉಸ್ತಾದ್ ಅಲ್ಲಾ ರಖಾ ಸೇರಿದಂತೆ ಹರಿಪ್ರಸಾದ್ ಚೌರಾಸಿಯಾ, ಪಂಡಿತ ಶಿವಕುಮಾರ್ ಶರ್ಮ, ರಷೀದ್ ಖಾನ್ ಅಲ್ಲದೆ ಅಮಾನ್ ಅಲಿ, ಅಯಾನ್ ಅಲಿ, ರಾಹುಲ್ ಶರ್ಮ ಹೀಗೆ ಗಾಯಕ, ವಾದಕರ ಸಮ್ಮಿಶ್ರಣ ಇಲ್ಲಿ ಸಿಗಲಿದೆ. * ಗಾಯಕ/ಕಿಯರ ಹೆಸರು, ರಚನೆ ಮೂಲಕ ಸರ್ಚ್ ಮಾಡಬಹುದು ಅಥವಾ ಭೈರವಿ, ಮೇಘ್ ಮಲ್ಹಾರ್, ಜೋಗ್, ಪೀಲು, ದರ್ಬಾರಿ, ಧನ್ಯಾಸಿ, ಹಂಸಧ್ವನಿ ಹೀಗೆ ರಾಗದ ಹೆಸರಿನಲ್ಲೂ ಸರ್ಚ್ ಲಭ್ಯ.

ಈ App ಉಚಿತವಾಗಿದೆ ಸಿಗುತ್ತದೆಯೇ?
ಸಾರೆಗಾಮ ಕ್ಲಾಸಿಕಲ್ ಆಪ್ ತಿಂಗಳಿಗೆ 99ರು, 3 ತಿಂಗಳಿಗೆ 199ರು, 6 ತಿಂಗಳಿಗೆ 495ರು ಹಾಗೂ ಭಾರತೀಯರಿಗೆ ವಾರ್ಷಿಕವಾಗಿ 890 ರು ಶುಲ್ಕ ಇದೆ. ಯುಎಸ್ ನ ಶೋತೃಗಳಿಗೆ 1.99 ಯುಎಸ್ ಡಾಲರ್ ಪ್ರತಿ ತಿಂಗಳಿಗೆ ಶುಲ್ಕ ವಿಧಿಸಲಾಗಿದೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜರು

ಹಿಂದೂಸ್ತಾನಿ ಗಾಯಕ, ವಾದಕರ ಸಮಾಗಮ

ಚಂದಾದಾರರಿಗೆ ಸೌಲಭ್ಯಗಳು
* ಒಂದು ಬಾರಿ ಚಂದಾದಾರರಾದರೆ 4 ಮೊಬೈಲ್ ಫೋನ್ ಗಳಿಗೆ ಬಳಸಬಹುದು.
* ಚಂದಾದಾರರಾದ ಮೇಲೆ ನವೀಕರಣ ಸ್ವಯಂ ಚಾಲಿತವಾಗಿ ಮಾಡಿಕೊಳ್ಳಬಹುದು
* ಕನ್ನಡ, ತಮಿಳು, ತೆಲುಗು, ಮಲೆಯಾಳಂ ಗಾನಸುಧೆಯೂ ಲಭ್ಯ,
ವಾದ್ಯಗಳಲ್ಲಿ ಪೀಟಿಲು, ವೀಣೆ, ಮ್ಯಾಂಡೋಲಿನ್, ಮೃದಂಗ, ತಬಲಾ, ಗಿಟಾರ್, ಸಾರಂಗಿ, ಕೊಳಲು, ನಾದಸ್ವರ, ಸಿತಾರ್, ಶಹನಾಯಿ ಸಂಗೀತ ಲಭ್ಯ.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ












Click it and Unblock the Notifications