Get Updates
Get notified of breaking news, exclusive insights, and must-see stories!

ಜಯನಗರದಲ್ಲಿ ಪುರಂದರೋತ್ಸವ-2015, ಸಂಗೀತ ನೃತ್ಯೋತ್ಸವ

ಬೆಂಗಳೂರು, ಅಕ್ಟೋಬರ್, 10 : ಕರ್ನಾಟಕ ಸಂಗೀತ ಪಿತಾಮಹ, ದಾಸ ಸಾಹಿತ್ಯದ ಮೇರು ದಿಗ್ಗಜ ಪುರಂದರದಾಸರ 450ನೇ ಜನ್ಮೋತ್ಸವದ ಪ್ರಯುಕ್ತ ಸಂಗೀತ ಸಂಭ್ರಮ ಸಂಸ್ಥೆಯು ಅಕ್ಟೋಬರ್ 10ರ ಶನಿವಾರ ಮತ್ತು 11ರ ಭಾನುವಾರದಂದು ಜಯನಗರದ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ ಪುರಂದರೋತ್ಸವ-2015 ಹಮ್ಮಿಕೊಂಡಿದೆ.

ಸತತವಾಗಿ ಎರಡು ದಿನ ನಡೆಯುವ ಪುರಂದರೋತ್ಸವ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಜರುಗಲಿದ್ದು, ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಸಂಗೀತ ಸಂಭ್ರಮದ ನಿರ್ದೇಶಕಿಯಾದ ಪಿ. ರಮಾ ವಹಿಸಿಕೊಂಡಿದ್ದಾರೆ.[ಕ್ಯಾನ್ಸರಿಗೆ ಬಲಿಯಾದ ವೇಣು ವಾದಕ ಎನ್ ರಮಣಿ]

Sangeeta Sambrama organize Purandarotsava-2015 on Saturday and Sunday

ಪುರಂದರೋತ್ಸವದ ಮೊದಲ ದಿನ ಅಕ್ಟೋಬರ್ 10ರ ಶನಿವಾರದಂದು ನವರತ್ನ ಮಾಲಿಕಾ ತಂಡದ 2000 ಕಲಾವಿದರು ಕರೌಕೆ (karaoke) ಸಂಗೀತದಲ್ಲಿ ಶ್ರೀನಿವಾಸ ಕಲ್ಯಾಣ ಕಥೆಯನ್ನು ಪ್ರಸ್ತುತ ಪಡಿಸಲಿದ್ದಾರೆ. ಎರಡನೇ ದಿನವಾದ ಭಾನುವಾರದಂದು 60 ಮಂದಿ ನೃತ್ಯ ಕಲಾವಿದರಿಂದ 6 ನೃತ್ಯಗಳು ಜರುಗಲಿದ್ದು, ಇವರು ಪ್ರಸಿದ್ಧ ಸಂಗೀತಗಾರರ ದನಿಗೆ ಹೆಜ್ಜೆ ಹಾಕಲಿದ್ದಾರೆ.

ಈ ನೃತ್ಯ ಸಂಭ್ರಮದಲ್ಲಿ ನೃತ್ಯಾಂತರ ತಂಡದ ಕಲಾವಿದರು ಒಡಿಸ್ಸಿ ನೃತ್ಯ ಪ್ರದರ್ಶಿಸಲಿದ್ದು, ಎರಡು ದಿನದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಧುಲಿತಾ ಮಹೋಪಾತ್ರ 9972530600 ಸಂಪರ್ಕಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+