ಊಬರ್ ಕ್ಯಾಬ್ ಚಾಲಕರನ್ನು ಟಾರ್ಗೆಟ್ ಮಾಡ್ತಿದ್ದ ನಾಲ್ವರು ದರೋಡೆಕೋರರ ಸೆರೆ
ಬೆಂಗಳೂರು, ಏ. 16: ಉಬರ್ ಕ್ಯಾಬ್ ಚಾಲಕನನ್ನು ಕರೆಸಿಕೊಂಡು ದರೋಡೆ ಮಾಡಿದ್ದ ನಾಲ್ವರು ದರೋಡೆಕೋರರ ಗ್ಯಾಂಗ್ ನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹೃತಿಕ್ ಗೌಡ, ನಿತಿನ್ ಗೌಡ, ದರ್ಶನ್ ಹಾಗೂ ಸುಮಂತ್ ಬಂಧಿತರು. ಇವರಿಂದ ಮಾರುತಿ ಸ್ವಿಫ್ಟ್ ಕಾರು, ಚಿನ್ನದ ಸರ, ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ನಂದಿನಿ ಬಡಾವಣೆ ಲಕ್ಷ್ಮೀದೇವಿ ನಗರ ನಿವಾಸಿ ಹೃತಿಕಗೌಡ, ಹಾಗೂ ಸಂಪಿಗೆಹಳ್ಳಿ ವೆಂಕಟೇಶ್ವರ ನಗರ ನಿವಾಸಿ ನಿತನ್ ಗೌಡ ಪರಸ್ಪರ ಸ್ನೇಹಿತರು. ಇವರೊಂದಿಗೆ ನಾಗಮಂಗಲ ತಾಲೂಕಿನ ಸಮಂತ್ ಮತ್ತು ದರ್ಶನ್ ನಾಲ್ವರು ಸೆರಿಕೊಂಡು ಐಶಾರಾಮಿ ಜೀವನಕ್ಕೆ ಜೋತು ಬಿದ್ದು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದರು.
ಕಳೆದ ಏ. 1 ರಂದು ರಾತ್ರಿ ವೆಂಕಟೇಶ್ವರ ಗರ ಸಮೀಪದ ಶಿವರಾಮಕಾರಂತ ನಗರ ಕ್ಲಬ್ ಬಳಿ ಉಬರ್ ಕ್ಯಾಬ್ ಬುಕ್ ಮಾಡಿ ಕರೆಸಿಕೊಂಡಿದ್ದಾರೆ. ಈ ವೇಳೆ ಕ್ಯಾಬ್ ಚಾಲಕನಿಗೆ ನಾಲ್ವರು ಅರೋಪಿಗಳು ಚಾಕು ತೋರಿಸಿ ಹೆದರಿಸಿದ್ದು, ನಗದು ಹಣ, ಮೊಬೈಲ್ ಪೋನ್, ಹಾಗೂ ಕ್ಯಾಬ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಕ್ಯಾಬ್ ಚಾಲಕ ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದರು.
ದರೋಡೆ ಮಾಡಿದ್ದ ಕ್ಯಾಬ್ ನ ಜಾಡು ಹಿಡಿದು ತನಿಖೆ ನಡೆಸಿದ ಸಂಪಿಗೆಹಳ್ಳಿ ಪೊಲೀಸರು ಹೃತಿಕ ಗೌಡನನ್ನು ಬಂಧಿಸಿದ್ದು, ಆತ ನೀಡಿದ ಮಾಹಿತಿ ಮೇರೆಗೆ ಇತರೆ ಮೂವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ದೊಡ್ಡಬಳ್ಳಾಪುರ ಸೇರಿದಂತೆ ವಿವಿಧ ಕಡೆ ಅಪರಾಧ ಕೃತ್ಯಗಳು ಎಸಗಿರುವುದು ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡಿಸಿಪಿ ಅನೂಪ್ ಶೆಟ್ಟಿ ನೇತೃತ್ವದಲ್ಲಿ ಈ ಪ್ರಕರಣ ಪತ್ತೆ ಮಾಡಲಾಗಿದೆ.
ಉಬರ್ ಚಾಲಕರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗುತ್ತಿದೆ.
Recommended Video