ಸೌಮ್ಯಾ ರೆಡ್ಡಿ ಅವರ ಫ್ಲೆಕ್ಸ್ ತೆರವು ಅಭಿಯಾನದ ರಿಯಾಲಿಟಿ ಚೆಕ್ ಮಾಡಿದಾಗ ಕಂಡದ್ದು ಇದು
Recommended Video

ಬೆಂಗಳೂರು, ಜೂನ್ 19: ಜಯನಗರದ ನೂತನ ಶಾಸಕಿ ಸೌಮ್ಯಾ ರೆಡ್ಡಿ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನವೇ ನಿರ್ಧಾರವನ್ನು ತಳೆದಿದ್ದರು. ತಮ್ಮ ಜಯಕ್ಕೆ ಶುಭಾಶಯ ಕೋರಿದ್ದ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ತೆರವುಗೊಳಿಸುವ ನಿರ್ಧಾರವನ್ನು ಅವರು ತಳೆದಿದ್ದರು.
ಶಾಸಕಿ ಸೌಮ್ಯಾ ರೆಡ್ಡಿ ಅವರ ಈ ನಿರ್ಧಾರಕ್ಕೆ ಪತ್ರಿಕೆಗಳಲ್ಲಿ, ಪೋರ್ಟಲ್ ಗಳಲ್ಲಿ, ಫೇಸ್ ಬುಕ್ ಮತ್ತು ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ಈ ಫ್ಲೆಕ್ಸ್ ತೆರವು ಅಭಿಯಾನ ಕಾರ್ಯರೂಪಕ್ಕೆ ಬಂದಿದೆಯೇ ಇಲ್ಲವೆ ಎಂದು 'ಒನ್ಇಂಡಿಯಾ ಕನ್ನಡ' ರಿಯಾಲಿಟ್ ಚೆಕ್ ಮಾಡಿತು. ಆಗ ಎದುರಾದ ಸತ್ಯವೇ ಬೇರೆ.
ಕ್ಲೀನ್ ಜಯನಗರ ಹೆಸರಿನಲ್ಲಿ ಸೌಮ್ಯಾ ರೆಡ್ಡಿ ಅವರು ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ತೆರವು ಮಾಡುವಂತೆ ಸೂಚಿಸಿದ್ದು ಸರಿಯಷ್ಟೆ. ಆದರೆ ಫ್ಲೆಕ್ಸ್ ಗಳು ತೆರವಾಗಿಬಿಟ್ಟಿದೆಯೇ ಎಂದು ಕೇಳಿದರೆ ಉತ್ತರ ಮಾತ್ರ ಇಲ್ಲ ಎಂದೇ ಹೇಳಬೇಕು. ಮಾಧ್ಯಮದಿಂದ ಪಬ್ಲಿಸಿಟಿ ಪಡೆದುಕೊಳ್ಳಲು ಅವರು ಹೀಗೆ ಮಾಡಿದರೆ? ಉತ್ತರ ಜಯನಗರದ ಶಾಸಕಿಯೇ ನೀಡಬೇಕು.

ಮಯ್ಯಾಸ್ ವೃತ್ತದಲ್ಲಿ ತೆರವು ಮಾಡಿದ್ದರು
ಸೌಮ್ಯಾ ರೆಡ್ಡಿ ಅವರು ಮೊನ್ನೆ ಮಯ್ಯಾಸ್ ವೃತ್ತದಲ್ಲಿ ತಮ್ಮದೇ ಫ್ಲೆಕ್ಸ್ ಬ್ಯಾನರ್ಗಳನ್ನು ತೆರವುಗೊಳಿಸಿದ್ದರು. ಜಯನಗರದಾದ್ಯಂತ ಹಾಕಲಾಕಿರುವ ಅನವಶ್ಯಕ ಫ್ಲೆಕ್ಸ್ಗಳನ್ನು ತೆರವು ಮಾಡುವಂತೆ ಸೂಚಿಸಿದ್ದರು ಆದರೆ ಬಹುತೇಕ ಕಡೆ ಫ್ಲೆಕ್ಸ್ ಬ್ಯಾನರ್ಗಳು ಹಾಗೆಯೇ ಇವೆ.

ದ.ರಾ.ಬೇಂದ್ರೆ ವೃತ್ತದಲ್ಲಿ ನಗುತ್ತಿದ್ದಾರೆ ಸೌಮ್ಯಾ ರೆಡ್ಡಿ
ಜಯನಗರದ ದ.ರಾ.ಬೇಂದ್ರೆ ವೃತ್ತದಲ್ಲಿ ಎರಡು ದೊಡ್ಡ ಫ್ಲೆಕ್ಸ್ ಬ್ಯಾನರ್ನಲ್ಲಿ ಸೌಮ್ಯಾ ರೆಡ್ಡಿ ನಗುತ್ತಿದ್ದಾರೆ. ದೊಡ್ಡ ವೃತ್ತವಾದ ಇಲ್ಲಿ ಸಿಗ್ನಲ್ ದೀಪದ ಪಕ್ಕದಲ್ಲಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷದವರು ಸೌಮ್ಯಾ ರೆಡ್ಡಿಗೆ ಶುಭಾಶಯ ಕೋರಿ ಫ್ಲೆಕ್ಸ್ ಹಾಕಿದ್ದಾರೆ.

ಜಯನಗರ 3ನೇ ಹಂತದಲ್ಲೂ ಇವೆ
ಜಯನಗರ ಮೂರನೇ ಹಂತದ ಸಿಗ್ನಲ್ ಬಳಿ ಸೌಮ್ಯಾ ರೆಡ್ಡಿ ಅವರಿಗೆ ಶುಭಾಷಯ ಕೋರಿ ಉದ್ದನೆಯ ಫ್ಲೆಕ್ಸ್ ಹಾಕಲಾಗಿದೆ. ಇದು ಸಹ ಸಿಗ್ನಲ್ ಬಳಿಯೇ ಇದ್ದು, ಫ್ಲೆಕ್ಸ್ ಹಿಂದೆ ಇರುವ ಅಂಗಡಿಗಳಿಗೆ ಇದರಿಂದ ಕಿರಿ-ಕಿರಿ ಆಗುತ್ತಿದೆ.

ಚೆನ್ನಮ್ಮ ಕ್ರೀಡಾಂಗಣದ ಪಕ್ಕವೂ ಇದೆ
ಜಯನಗರದ ಕಿತ್ತೂರ ಚೆನ್ನಮ್ಮ ಕ್ರೀಡಾಂಗಣದ ಪಕ್ಕ ರಸ್ತೆಯ ತಿರುವಿನಲ್ಲಿ ದೊಡ್ಡ ಫ್ಲೆಕ್ಸ್ ಹಾಕಲಾಗಿದೆ. ಸೌಮ್ಯಾ ರೆಡ್ಡಿ ಮತ್ತು ಅಪ್ಪ ರಾಮಲಿಂಗಾ ರೆಡ್ಡಿ ಅವರು ಫ್ಲೆಕ್ಸ್ನಲ್ಲಿ ರಾರಾಜಿಸುತ್ತಿದ್ದಾರೆ. ರಸ್ತೆಯ ತಿರುವಿನಲ್ಲೇ ಈ ಫ್ಲೆಕ್ಸ್ ಇದ್ದು ವಾಹನ ಸವಾರರ ಗಮನ ಫ್ಲೆಕ್ಸ್ ಕಡೆ ಹೋದರೆ ಬೀಳುವುದು ಗ್ಯಾರೆಂಟಿ.

ಬಿಎಂಟಿಸಿ ಸಂಕೀರ್ಣದ ಬಳಿಯೂ ಇದೆ ಗತಿ
ಜಯನಗರ ಬಿಎಂಟಿಸಿ ಸಂಕೀರ್ಣದ ಬಳಿ ನಾಲ್ಕೈದು ಫ್ಲೆಕ್ಸ್ಗಳು ಒಂದೇ ವೃತ್ತದಲ್ಲಿ ರಾರಾಜಿಸುತ್ತಿವೆ. ಇಲ್ಲಿನ ಒಂದು ಫ್ಲೆಕ್ಸ್ ಅನ್ನಂತೂ ಫುಟ್ಪಾತ್ ಮೇಲೆಯೇ ಹಾಕಲಾಗಿದೆ.

ಸೌಮ್ಯಾ ರೆಡ್ಡಿ ಅವರಲ್ಲಿ ವಿಶ್ವಾಸವಿದೆ
ಸೌಮ್ಯಾ ರೆಡ್ಡಿ ಅವರು ಫ್ಲೆಕ್ಸ್ ತೆರವಿಗೆ ಸೂಚಿಸಿರುವುದು ಸತ್ಯವೇ ಆದರೆ ಕಾರ್ಯ ಪರಿಣಾಮಕಾರಿಯಾಗಿ ಆಗುವಂತೆ ನೋಡಿಕೊಳ್ಳುವುದು ಕೂಡ ಅವರದ್ದೇ ಜವಾಬ್ದಾರಿ. ಉತ್ಸಾಹದ ಚಿಲುಮೆಯಂತಿರುವ ಅವರ ಮೇಲೆ ಜಯನಗರದ ಜನರಿಗೆ ವಿಶ್ವಾಸವಿದೆ. ಆದರೆ ವೀಶ್ವಾಸವನ್ನು ಉಳಿಸಿಕೊಳ್ಳುವ ಬದ್ಧತೆ ಅವರು ಪ್ರದರ್ಶಿಸಬೇಕಿದೆಯಷ್ಟೆ.
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ












Click it and Unblock the Notifications