ರವಿ ಬೆಳಗೆರೆ ಬಂಧನ: ಶನಿವಾರದ 9 ಪ್ರಮುಖ ಬೆಳವಣಿಗೆ
ಪತ್ರಕರ್ತ ರವಿ ಬೆಳಗೆರೆ ಅವರ ಮೇಲೆ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪ ಬಂದು, ಶುಕ್ರವಾರ ಅವರನ್ನು ಬಂಧಿಸಲಾಯಿತು. ಆದರೆ ನಿಜವಾದ ಬೆಳವಣಿಗೆಗಳು ಶುರುವಾದದ್ದು ಶನಿವಾರ (ಡಿಸೆಂಬರ್ 9). ಬೆಳಗ್ಗೆಯಿಂದ ರಾತ್ರಿ 8ರ ತನಕ ನಡೆದ ದಿನದ ಪ್ರಮುಖ ವಿದ್ಯಮಾನಗಳ ವಿವರ ಇಲ್ಲಿದೆ.
* ರವಿ ಬೆಳಗೆರೆಯವರನ್ನು ಏತಕ್ಕಾಗಿ ಬಂಧಿಸಿದ್ದಾರೆಂದು ಗೊತ್ತಿಲ್ಲ. ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
* ಅಪ್ಪ ಒಬ್ಬರನ್ನು ಕೊಲ್ಲುವ ನಿರ್ಧಾರಕ್ಕೆ ಹೋಗಿರಲು ಸಾಧ್ಯವಿಲ್ಲ, ಅವರು ಖಂಡಿತ ನಿರಪರಾಧಿ, ನಾನು ಅವರ ಮಗಳು ಅವರ ಪರವಾಗಿಯೇ ನಿಲ್ಲುತ್ತೇನೆ ಎಂದು ಧಾರವಾಡದಲ್ಲಿ ಭಾವನಾ ಬೆಳಗೆರೆ ಹೇಳಿಕೆ
* ಉತ್ತರಕನ್ನಡ ಜಿಲ್ಲೆಯ ಜೋಯಿಡಾದಲ್ಲಿರುವ ರವಿ ಬೆಳಗೆರೆ ಅವರ ಜಂಗಲ್ ಬೋಟ್ ಬರ್ಭುಜಾ ಫಾರ್ಮ್ ಹೌಸ್ ಗೆ ತೆರಳಿದ ಸಿಸಿಬಿ ಪೊಲೀಸರಿಂದ ಪರಿಶೀಲನೆ

* 'ರವಿ ಅಂಕಲ್ ಗೆ, ಅವರ ಅಳಿಯ ಶ್ರೀನಗರ ಕಿಟ್ಟಿಗೆ ಹಾಗೂ ಮಗಳಾದ ಭಾವನಾ ಅವರಿಗೆ ನನ್ನ ಸಹಕಾರ, ಬೆಂಬಲ ಹಾಗೂ ಗುಡ್ ಲಕ್ ಯಾವಾಗಲೂ ಇರುತ್ತದೆ' ಎಂದು ನಟ ಶ್ರೀಮುರಳಿ ವಿಜಯಪುರದಲ್ಲಿ ಹೇಳಿಕೆ
* ಪೊಲೀಸ್ ರಕ್ಷಣೆ ನೀಡುವಂತೆ ಸುನೀಲ್ ಹೆಗ್ಗರವಳ್ಳಿ ಕುಟುಂಬದವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ
* ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರವಿ ಬೆಳಗೆರೆ ಪತ್ನಿ ಲಲಿತಾ
* ರವಿ ಬೆಳಗೆರೆ ಎರಡನೇ ಪತ್ನಿ ಯಶೋಮತಿ ಅವರ ರಾಜರಾಜೇಶ್ವರಿ ನಗರದ ಮನೆಗೆ ಕರೆದುಕೊಂಡು ಹೋಗಿ ಸಿಸಿಬಿ ಪೊಲೀಸರಿಂದ ಪರಿಶೀಲನೆ
* ರಾಜರಾಜೇಶ್ವರಿ ನಗರದಿಂದ ವಾಪಸ್ ಸಿಸಿಬಿ ಕಚೇರಿಗೆ ವಾಪಸ್ ಕರೆತರುವಾಗ ಅಸ್ವಸ್ಥಗೊಂಡ ರವಿ ಬೆಳಗೆರೆ
* ಅಸ್ವಸ್ಥಗೊಂಡ ರವಿಬೆಳಗೆರೆಯವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು.












Click it and Unblock the Notifications