ಕೆಲಸಕ್ಕೆಂದು ಹೊರಟವರು ಮಸಣ ಸೇರಿದರು
ಬೆಂಗಳೂರು,
ನ.16:
ಮುಂಜಾನೆ
ಕೆಲಸಕ್ಕೆಂದು
ಹೊರಟಿದ್ದ
ಕಾರ್ಮಿಕರಿಬ್ಬರನ್ನು
ವೇಗವಾಗಿ
ಬರುತ್ತಿದ್ದ
ಖಾಸಗಿ
ಸಂಸ್ಥೆ
ಬಸ್
ಮಸಣ
ಸೇರಿಸಿದೆ.
ಬೆಳಗ್ಗೆ
ಸುಮಾರು
7
ಗಂಟೆ
ಸಮಯಕ್ಕೆ
ಇಬ್ಬರು
ಕಾರ್ಮಿಕರು
ಬೊಮ್ಮಸಂದ್ರ
ಕೈಗಾರಿಕಾ
ಪ್ರದೇಶದಿಂದ
ಬೈಕ್ನಲ್ಲಿ
ಹೋಗುವಾಗ
ಬಸ್
ಡಿಕ್ಕಿ
ಹೊಡೆದು
ಸ್ಥಳದಲ್ಲೇ
ಮೃತಪಟ್ಟ
ಘಟನೆ
ಹೆಬ್ಬಗೋಡಿ
ಪೊಲೀಸ್
ಠಾಣೆ
ವ್ಯಾಪ್ತಿಯಲ್ಲಿ
ನಡೆದಿದೆ.
ಅಮಾಯಕ ಬೈಕ್ ಸವಾರರ ಸಾವಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಆನೇಕಲ್ ತಾಲೂಕಿನ ಬೊಮ್ಮಸಂದ್ರ ಲಿಂಕ್ ರಸ್ತೆಯಲ್ಲಿ ನಡೆದ ದುರಂತದಲ್ಲಿ ತಮಿಳುನಾಡು ಮೂಲದ ಅರವಿಂದ್(25) ಮತ್ತು ಗಣೇಶ್(26) ಮೃತರಾಗಿದದ್ದಾರೆ. ಇವರು ಜಿಗಣಿ ಕೈಗಾರೀಕಾ ಪ್ರದೇಶದಲ್ಲಿರುವ ಬಿಲ್ ಫೋರ್ಜ್ ಪ್ರೈ.ಲಿಮಿಟೆಡ್ ಕಂಪನಿಯ ನೌಕರರಾಗಿದ್ದು, ಭಾನುವಾರ ಮುಂಜಾನೆ ಕೆಲಸಕ್ಕೆಂದು ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಎಪಿಸಿ ಕಂಪನಿಯ ಬಸ್ ನಿಲ್ಲಿಸಿದ್ದ ಕಂಟೇನರ್ ವೊಂದನ್ನು ಓವರ್ ಟೇಕ್ ಮಾಡಲು ಹೋಗಿದೆ, ಈ ಸಮಯದಲ್ಲಿ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದು ಸವಾರಿಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆ ನಂತರ ಬಸ್ ಚಾಲಕ ಪರಾರಿಯಾಗಿದ್ದಾನೆ.
'ಎಪಿಸಿ'
ಕಂಪನಿ
ಬಸ್
ಚಾಲಕರ
ಅಜಾಗರೂಕತೆಯಿಂದ
ಈ
ಹಿಂದೆ
ಕೂಡ
ಇಂಥದ್ದೇ
ಹಲವು
ರಸ್ತೆ
ಅವಘಡಗಳನ್ನು
ಸಂಭವಿಸಿವೆ
ಕಂಪನಿ
ಮ್ಯಾನೇಜರ್
ಮತ್ತು
ಬಸ್
ಚಾಲಕನನ್ನು
ಬಂಧಿಸಬೇಕೆಂದು
ಬಿಲ್
ಫೋರ್ಜ್
ಕಾರ್ಖಾನೆಯ
ಎರಡು
ಘಟಕ
(ಜಿಗಣಿ
ಹಾಗೂ
ಬೊಮ್ಮಸಂದ್ರ)
ನೌಕರರು
ಹೆಬ್ಬಗೋಡಿ
ಪೊಲೀಸ್
ಠಾಣೆ
ಮುಂಭಾಗ
ಪ್ರತಿಭಟನೆ
ನಡೆಸಿದರು.
ಇದರಿಂದಾಗಿಬೊಮ್ಮಸಂದ್ರ ಮುಖ್ಯರಸ್ತೆಯಲ್ಲಿ ಕೆಲಕಾಲ ಬಿಗುವಿವ ವಾತಾವರಣ ಸೃಷ್ಟಿಯಾಗಿತ್ತು. ಆರೋಪಿಗಳನ್ನು ಕೂಡಲೇ ಬಂಧಿಸದಿದ್ದರೆ ಹೆದ್ದಾರಿ ತಡೆಯುವುದಾಗಿ ಎಚ್ಚರಿಕೆ ಕೂಡ ನೀಡಿದರು. ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.[ಚಿತ್ರಗಳು: ಮಾಲ ಎಂ, ಎಲೆಕ್ಟ್ರಾನಿಕ್ ಸಿಟಿ]