FAR Bill: ಮಸೂದೆ ಜಾರಿ: ಸರ್ಕಾರ ಆದಾಯ ಗಳಿಕೆಗೆ ಹೊಸ ದಾರಿ ಹುಡುಕಿತೇ?
ಬೆಂಗಳೂರು, ಫೆಬ್ರವರಿ 22: ಜಂಟಿ ಅಧಿವೇಶನ ನಡೆಸುತ್ತಿರುವ ರಾಜ್ಯ ಸರ್ಕಾರ ಬುಧವಾರ, ವಿಧಾನಸಭೆಯಲ್ಲಿ ಪ್ರೀಮಿಯಂ ಫ್ಲೋರ್ ಏರಿಯಾ (FAR) ಮಸೂದೆಯನ್ನು ಅಂಗೀಕರಿಸಿದೆ. ಈ ಮೂಲಕ ಅಧಿಕ ಆದಾಯ ಸಂಗ್ರಹ ದಾರಿಯನ್ನು ಸರ್ಕಾರ ಹುಡುಕಿಕೊಂಡಿದೆ.
ಈ ಮಸೂದೆಯು ಒಟ್ಟು ಪ್ಲಾಟ್ ಪ್ರದೇಶದ ಒಟ್ಟು ಕಟ್ಟಡ ಪ್ರದೇಶಕ್ಕೆ ಅನುಪಾತ, ಡೆವಲಪರ್ಗಳು ಪ್ರೀಮಿಯಂ ಪಾವತಿಸಿದ ನಂತರ ಹೆಚ್ಚುವರಿ ಬಿಲ್ಟ್-ಅಪ್ ಪ್ರದೇಶವನ್ನು ನಿರ್ಮಿಸಲು ಸಹಾಯಕ್ಕೆ ಬರುತ್ತದೆ. ಈ ಮಸೂದೆಯು ಬಿಜೆಪಿ ಶಾಸಕರ ವಿರೋಧದ ನಡುವೆ ಅಂಗೀಕಾರಗೊಂಡಿತು.

ಪ್ರೀಮಿಯಂ (ಐಶಾರಾಮಿ ಪ್ರದೇಶ) ನೆಲದಲ್ಲಿ ವಿಸ್ತೀರ್ಣ ಅನುಪಾತಗಳನ್ನು ಅನುಮತಿಸಬಹುದಾದ ಪ್ರದೇಶಗಳನ್ನು ಗುರುತಿಸಲು ಸ್ಥಳೀಯ ಯೋಜನಾ ಅಧಿಕಾರಿಗಳಿಗೆ ಕಾಯ್ದೆ ಹೆಚ್ಚು ಸಹಾಯಕ್ಕೆ ಬರುತ್ತದೆ. ಅಲ್ಲದೇ ಸರ್ಕಾರಕ್ಕೆ ಪ್ರೀಮಿಯಂ ಅನುಪಾತಗಳಿಗೆ ಶುಲ್ಕವನ್ನು ಲೆಕ್ಕಾಚಾರ ವಿಚಾರದಲ್ಲಿ ಅಸ್ಪಷ್ಟತೆಯ ಸಮಸ್ಯೆ ಇನ್ನುಮುಂದೆ ನಿವಾರಣೆ ಮಾಡಲಿದೆ.
ಕರಾವಳಿಯಲ್ಲಿ ಈಗಾಗಲೇ ಎಫ್ಎಆರ್ ಜಾರಿ
ಅಂಗೀಕಾರ ಬಳಿಕ ಕಲಾಪದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಕರಾವಳಿ ಭಾಗವಾದ ಮಂಗಳೂರಿನಲ್ಲಿ ಈಗಾಗಲೇ ಪ್ರೀಮಿಯಂ ಫ್ಲೋರ್ ಏರಿಯಾ ಅನುಪಾತ ಒದಗಿಸಲಾಗುತ್ತಿದೆ. ಪ್ರೀಮಿಯಂ ಫ್ಲೋರ್ ಏರಿಯಾ ಅನುಪಾತದಿಂದ ಉತ್ಪತ್ತಿಯಾಗುವ ಹಣವು ಅಭಿವೃದ್ಧಿ ಚಟುವಟಿಕೆಗಳಿಗೆ ನಿಧಿಗೆ ಸಹಾಯ ಮಾಡಲಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಕರಾವಳಿ ನಗರದಲ್ಲಿ ಸುಮಾರು 2,000 ಕೋಟಿ ರೂ. ಇದನ್ನು ಈಗ ಇತರ ನಗರಗಳಿಗೂ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿ ಅವರು ವಿಧೇಯಕವನ್ನು ಪ್ರಾಯೋಗಿಕವಾಗಿ ಮಂಡಿಸಿದರು.

ಬಿಲ್ಗೆ ಬೊಮ್ಮಾಯಿ ಆಕ್ಷೇಪ: ವಿವರಿಸಿದ್ದೇನು?
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಸೂದೆಗೆ ಅಂತೀಕಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಒಳಚರಂಡಿ ಮತ್ತು ನೀರು ಪೂರೈಕೆಯಂತಹ ಸಾಕಷ್ಟು ಮೂಲಸೌಕರ್ಯಗಳನ್ನು ಒದಗಿಸದೆ ಹೆಚ್ಚುವರಿ ನೆಲದ ವಿಸ್ತೀರ್ಣ ಅನುಪಾತವನ್ನು ಅನುಮತಿಸುವುದು ಹಾಲಿ ವ್ಯವಸ್ಥೆಗೆ ಹೊರೆ ಆಗಲಿದೆ ಎಂದು ವಿವರಿಸಿದರು.
ಮಸೂದೆ ಪ್ರಕಾರ, ಕಟ್ಟಡದ ಅಭಿವೃದ್ಧಿಯ ಪ್ರಸ್ತಾಪ ಇರುವ ಸ್ಥಳದಲ್ಲಿ ಅಭಿವೃದ್ಧಿಪಡಿಸಿದ ಭೂಮಿ ಇಲ್ಲವೇ ಸೈಟ್ಗಾಗಿ "ಮಾರ್ಗಸೂಚಿಗಳ ಮೌಲ್ಯದ 40% ಗಿಂತ ಕಡಿಮೆ ಇಲ್ಲದಂತೆ ಕಟ್ಟಡದ ಹೆಚ್ಚುವರಿ ಪ್ರದೇಶಕ್ಕೆ ಪ್ರೀಮಿಯಂ ಶುಲ್ಕ ಪಾವತಿಸಬೇಕಾಗುತ್ತಿದೆ. ಇದು ಹೊರಯಾಗುತ್ತದೆ ಎಂದರು.
ಇದರ ಹಣ ಮೂಲ ಸೌಕರ್ಯಕ್ಕಷ್ಟೇ ಬಳಕೆ
ಸರ್ಕಾರ ಸಾಫ್ಟ್ವೇರ್ ಬಳಸಿ ಪ್ರೀಮಿಯಂ ನೆಲದ ವಿಸ್ತೀರ್ಣ ಅನುಪಾತದ ವಿತರಣೆ ಮತ್ತು ನಿರ್ವಹಣೆಯನ್ನು ವ್ಯವಸ್ಥಿತಗೊಳಿಸಲು ಗುರಿ ಹೊಂದಿದ್ದು, ಅದಕ್ಕಾಗಿ ಬಿಲ್ ಜಾರಿಗೆ ತರಲಾಗಿದೆ. ಆದರೆ ಸಂಗ್ರಹಿಸಿದ ಮೊತ್ತವನ್ನು ಸ್ಥಳೀಯ ಯೋಜನಾ ಪ್ರದೇಶದೊಳಗೆ ಮಾತ್ರ ಭೂಮಿ, ಸಾರ್ವಜನಿಕ ಮೂಲಸೌಕರ್ಯದಂತಹ ಉದ್ದೇಶಗಳಿಗೆ ಮಾತ್ರವೇ ಬಳಸಿಕೊಳ್ಳಲಾಗುವುದು ಎಂದು ಸದ್ಯ ರಾಜ್ಯ ಸರ್ಕಾರ ಭರವಸೆ ನೀಡಿದೆ.
-
Karnataka Weather: ಮಾರ್ಚ್ 12ರ ವರೆಗೆ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುನ್ಸೂಚನೆ -
ಬೆಂಗಳೂರು, ವಿದ್ಯಾಕಾಶಿ ಧಾರವಾಡದಲ್ಲಿ "ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್" ಆರಂಭ: ಬಜೆಟ್ನಲ್ಲಿ ಘೋಷಣೆ -
Karnataka Highways: 1846 ಕಿಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 5000 ಕೋಟಿ ರೂ ಘೋಷಣೆ -
ಕರ್ನಾಟಕದ 66 ಆರ್ಟಿಓಗಳಲ್ಲಿ ಡಿಜಿಟಲ್ ವ್ಯವಸ್ಥೆ: ವಾಹನ ತೋರಿಸಿದರಷ್ಟೇ ಫಿಟ್ನೆಸ್ ಪ್ರಮಾಣಪತ್ರ, ಏನಿದು? -
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು? -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್












Click it and Unblock the Notifications