ಶುಕ್ರವಾರದಂದು ದಕ್ಷಿಣ ಬೆಂಗಳೂರಲ್ಲಿ ಕರೆಂಟ್ ಇರಲ್ಲ!
ಬೆಂಗಳೂರು, ಸೆ.02: ನಗರದ ವಿವಿಧೆಡೆ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರುವುದನ್ನೇ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಜನ ಗೊಣಗುತ್ತಿದ್ದಾರೆ. ಈ ನಡುವೆ ಶುಕ್ರವಾರದಂದು ದಕ್ಷಿಣ ಬೆಂಗಳೂರಿನಲ್ಲಿ ಬೆಳಗ್ಗಿನಿಂದ ಸಂಜೆ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಿಸಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯು (ಬೆಸ್ಕಾಂ) 220/66/11 ಕೆ.ವಿ. ಸಾಮರ್ಥ್ಯದ ವೃಷಭಾವತಿ ವಿದ್ಯುತ್ ಸ್ವೀಕಾರ ಕೇಂದ್ರ ಹಾಗೂ 66/11 ಕೆ.ವಿ. ಸಾಮರ್ಥ್ಯದ ಎಂ.ವಿ. ಬಡಾವಣೆ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿದೆ ಹೀಗಾಗಿ ಶುಕ್ರವಾರ (ಸೆಪ್ಟೆಂಬರ್ 04) ದಂದು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಸೆಪ್ಟೆಂಬರ್ 4ರಂದು ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಕಾಮಗಾರಿಯಿಂದಾಗಿ ನಗರದ ಶೇ 30ರಿಂದ 40ರಷ್ಟು ಪ್ರದೇಶಗಳಿಗೆ ವಿದ್ಯುತ್ ಇರುವುದಿಲ್ಲ. ಬಿಬಿಎಂಪಿ ಚುನಾವಣೆಯ ಕಾರಣ ನಿರ್ವಹಣಾ ಕಾಮಗಾರಿಗೆ ಅನುಮತಿ ಸಿಕ್ಕಿರಲಿಲ್ಲ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿದ್ಯುತ್ ಪೂರೈಕೆ ಎಲ್ಲೆಲ್ಲಿ ಇರಲ್ಲ: ಗಿರಿನಗರ, ಬ್ಯಾಂಕ್ ಕಾಲೊನಿ, ವಿನಾಯಕ ನಗರ, ಶ್ರೀನಿವಾಸನಗರ, ಹೊಸಕೆರೆಹಳ್ಳಿ, ಕಾಳಿದಾಸ ನಗರ, ಮೂಕಾಂಬಿಕಾ ನಗರ, ದತ್ತಾತ್ರೇಯ ನಗರ, ಇಟ್ಟಮಡು ಬಿಡಿಎ ಬಡಾವಣೆ, ಕಾಮಾಕ್ಯ, ಚನ್ನಮ್ಮನಕೆರೆ ಅಚ್ಚುಕಟ್ಟು, ಐಟಿಐ ಬಡಾವಣೆ, ವಿನಾಯಕನಗರ, ಕಾವೇರಿನಗರ, ಕೆರೆಹಳ್ಳಿ, ಬಂಗಾರಪ್ಪ ನಗರ, ವೀರಭದ್ರ ನಗರ, ತುರಹಳ್ಳಿ, ಪಿ.ಪಿ. ಲೇಔಟ್, ಉತ್ತರಹಳ್ಳಿ, ಚನ್ನಸಂದ್ರ, ಚನ್ನಸಂದ್ರ ಕಾಲೊನಿ, ದ್ವಾರಕಾನಗರ, ವಡ್ಡರಪಾಳ್ಯ , ಹನುಮಂತನಗರ, ಗವಿಪುರ, ಬಸಪ್ಪ ಬಡಾವಣೆ, ಶ್ರೀನಗರ, ತ್ಯಾಗರಾಜನಗರ, ಬನಶಂಕರಿ,
ಎನ್.ಆರ್.
ಕಾಲೊನಿ,
ನಾಗೇಂದ್ರ
ಬ್ಲಾಕ್,
ಮುನೇಶ್ವರ
ಬ್ಲಾಕ್,
ಅವಲಹಳ್ಳಿ,
ಕೆ.ಆರ್.
ಆಸ್ಪತ್ರೆ
ರಸ್ತೆ,
ಮೈಸೂರು
ರಸ್ತೆ,
ಕನಕಪುರ
ರಸ್ತೆ,
ಬಸವನಗುಡಿ,
ಪಿಇಎಸ್
ಕಾಲೇಜು,
ಸುಬ್ಬಣ್ಣ
ಗಾರ್ಡನ್,
ಶಿವಾನಂದನಗರ,
ಮೂಡಲಪಾಳ್ಯ,
ವೈಯಾಲಿ
ಕಾವಲ್,
ಮಾರುತಿನಗರ.
ಜ್ಯೋತಿನಗರ,
ಗಂಗೊಂಡನಹಳ್ಳಿ
ಕೊಳೆಗೇರಿ,
ಎನ್ಜಿಇಎಫ್
ಬಡಾವಣೆ,
ನಾಗರಭಾವಿ,
ಕೆಂಗುಂಟೆ,
ಐಟಿಐ
ಲೇಔಟ್,
ಮಲ್ಲತ್ತಹಳ್ಳಿ,
ಉಲ್ಲಾಳ
ರಸ್ತೆ,
ಸರ್ಕಾರಿ
ಮುದ್ರಣಾಲಯ
ಬಡಾವಣೆ,
ಐಸೆಕ್,
ರಾಷ್ಟ್ರೀಯ
ಕಾನೂನು
ಶಾಲೆ,
ಸಂಜೀವಿನಿನಗರ,
ಬಿಎಚ್ಇಎಲ್
ಬಡಾವಣೆ,
ಅಭಿಮಾನ್
ಸ್ಟುಡಿಯೊ,
ಕೋಡಿಪಾಳ್ಯ,
ಹೆಮ್ಮಿಗೆಪುರ,
ಗೊಲ್ಲಹಳ್ಳಿ,
ಕುವೆಂಪುನಗರ,
ಬಿಜಿಎಸ್
ಆಸ್ಪತ್ರೆ,
ಅತ್ತಿಗುಪ್ಪೆ,
ಬ್ಯಾಟರಾಯನಪುರ,
ದೀಪಾಂಜಲಿನಗರ,
ಆರ್.ವಿ.
ಕಾಲೇಜು,
ಮೈಲಸಂದ್ರ,
ಕೆಂಗೇರಿ,
ಪಂತರಪಾಳ್ಯ
ಹಾಗೂ
ಸುತ್ತಮುತ್ತಲ
ಪ್ರದೇಶಗಳು.ಮಾರುತಿನಗರ,
ಎಂ.ವಿ.
ಬಡಾವಣೆ,
ದೊಡ್ಡಬಸ್ತಿ,
ಚಿಕ್ಕಬಸ್ತಿ,
ರಾಮಸಂದ್ರ,
ಗಾಯತ್ರಿ
ಬಡಾವಣೆ
ಸೊನ್ನೇನಹಳ್ಳಿ,
ಕೆಪಿಎಸ್ಸಿ
ಬಡಾವಣೆ,
ಅಮ್ಮ
ಆಶ್ರಮ,
ಜ್ಞಾನಭಾರತಿ
ಬಡಾವಣೆ,
ಆರ್.ಆರ್.
ಬಡಾವಣೆ,
ಉಪಾಧ್ಯಾಯ
ಬಡಾವಣೆ,
ಕೊಡಿಗೆಹಳ್ಳಿ,
ಬಿಇಎಲ್
ಎರಡನೇ
ಹಂತ,
ಕನ್ನಹಳ್ಳಿ,
ಸೀಗೆಹಳ್ಳಿ,
ರೈಲ್ವೆ
ಬಡಾವಣೆ,
ರಾಜಾಜಿನಗರ,
ಗವಿಪುರ
ಬಡಾವಣೆ,
ಉಲ್ಲಾಳ
ಮುಖ್ಯರಸ್ತೆ,
ಬಾಲಾಜಿ
ಬಡಾವಣೆ,ಮಲ್ಲತ್ತಹಳ್ಳಿ
ಹಾಗೂ
ಸುತ್ತಮುತ್ತಲ
ಪ್ರದೇಶಗಳು.
(
ಒನ್
ಇಂಡಿಯಾ
ಸುದ್ದಿ)
ಹೆಚ್ಚಿನ
ಮಾಹಿತಿಗೆ
ಬಿಬಿಎಂಪಿ
ಫೇಸ್
ಬುಕ್
ಲಿಂಕ್
ನೋಡಿ,
ಅಥವಾ
1912ಗೆ
ಕರೆ
ಮಾಡಿ