ಬೆಂಗಳೂರು: ಈ ವಾರಾಂತ್ಯದಲ್ಲಿ ಹಲವು ಕಡೆ ವಿದ್ಯುತ್ ಕಡಿತ; ನಿಮ್ಮ ಏರಿಯಾ ಇದೆಯಾ ಪರಿಶೀಲಿಸಿ
ಬೆಂಗಳೂರು, ಜೂನ್. 23: ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಟಿಪಿಸಿಎಲ್) ತ್ರೈಮಾಸಿಕ ನಿರ್ವಹಣಾ ಕಾರ್ಯಗಳ ಕಾರಣದಿಂದ ಬೆಂಗಳೂರು ನಗರದಲ್ಲಿ ಈ ವಾರಾಂತ್ಯದಲ್ಲಿ, ಅಂದರೆ ಶನಿವಾರ ಮತ್ತು ಭಾನುವಾರದಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವ ನಿರೀಕ್ಷೆಯಿದೆ.
ಬೆಸ್ಕಾಂನ ವೆಬ್ಸೈಟ್ಗೆ ಅಪ್ಲೋಡ್ ಮಾಡಿರುವ ಮಾಹಿತಿಯ ಪ್ರಕಾರ ಈ ವಿದ್ಯುತ್ ವ್ಯತ್ಯಯ ಬೆಳಗ್ಗೆ 10 ರಿಂದ ಸಂಜೆ 5 ರ ನಡುವೆ ನಡೆಯಬಹುದು ಎಂದು ಸೂಚಿಸಿದೆ. ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರದೇಶಗಳ ಪಟ್ಟಿ ಹೀಗಿದೆ.

ಶನಿವಾರ (ಜೂನ್ 24)
ಮಂಜುನಾಥನಗರ, ಪ್ರಕಾಶ್ ನಗರ, ಸುಬ್ರಹ್ಮಣ್ಯನಗರ, ವಿಜಯನಗರ, ರಾಜಾಜಿನಗರ 2ನೇ ಬ್ಲಾಕ್, 6ನೇ ಬ್ಲಾಕ್, ಅಮರಜ್ಯೋತಿ ನಗರ, ಸರಸ್ವತಿ ನಗರ, ವಿನಾಯಕ ಲೇಔಟ್, ಅಗ್ರಹಾರ, ದಾಸರಹಳ್ಳಿ, ಇಂದಿರಾನಗರ, ಶಂಕರಮಾತಾ ಫಿಡೆಲಿಟಿ, ಐಬಿಎಂ, ಸೀಮೆನ್ಸ್, ಮಾನ್ಯತಾ ರೆಸಿಡೆನ್ಸಿ, B.T.S ಲುಸೆಂಟ್, ಗೋದ್ರೇಜ್ ಅಪಾರ್ಟ್ಮೆಂಟ್, ಹೆಬ್ಬಾಳ, ಕೆಂಪಾಪುರ, ವಿನಾಯಕ ಲೇಔಟ್, ಚಿರಂಜೀವಿ ಲೇಔಟ್, ವೆಂಕಟೇಗೌಡ ಲೇಔಟ್, ನೋಕಿಯಾ ಬ್ಲಾಕ್, ಮಧುವನ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್, ರಾಯಲ್ ಎನ್ಕ್ಲೇವ್, ಮೇಸ್ತ್ರಿ ಪಾಳ್ಯ, ಥಣಿಸಂದ್ರ, ಎಸ್ಎನ್ಎನ್ ಕ್ಲರ್ಮಾಂಟ್ ಅಪಾರ್ಟ್ಮೆಂಟ್, ಬಿಡಿಎಸ್ ಲೇಔಟ್, ಮಂತ್ರಿ ಲಿಥೋಸ್, ಕಾಫಿ ಬೋರ್ಡ್ ಲೇಔಟ್, ಫಾತಿಮಾ ಬಡಾವಣೆ, ಮರಿಯಣ್ಣ ಪಾಳ್ಯ, ತಾಳಿಕೊಪ್ಪ, ನಲ್ಲೂರು, ಕೊಡಿಯಾಲ, ಅಂಕಸಂದ್ರ ಪಂಚಾಯಿತಿ ವ್ಯಾಪ್ತಿಯ ಬ್ಯಾಡರಹಳ್ಳಿ, ಬಸವಪುರ, ಮತ್ತಿಕೆರೆ, ಕೋಡಿಹಳ್ಳಿ, ಕಡಬ, ಬೈಲಹಳ್ಳಿ, ಎಚ್ಎಎಲ್ ನೀರು ಸರಬರಾಜು, ಹೊಸೂರು, ಮಧುಗಿರಿ, ಕೊರಟಗೆರೆ, ಸಿದ್ದಾಪುರ, ರಂಗಾಪುರ, ಜಯನಗರ (ಅಗ್ರಿ), ಜೆವಿಎನ್ ಪಾಳ್ಯ, ಚಂದ್ರಗಿರಿ, ಚಂದ್ರಭಾವಿ, ಹನುಮಂತಪುರ, ಲಕ್ಷ್ಮೀಪುರ, ಯರಗುಂಟೆ, ಚಿಕ್ಕಮಲೂರು, ದಾಸರಹಳ್ಳಿ, ಕತ್ರಿಗುಪ್ಪೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಭಾನುವಾರ (ಜೂನ್ 25)
ಗಾಂಧಿನಗರ, ಚಿಕ್ಕಪೇಟೆ, ಆನಂದ ರಾವ್ ವೃತ್ತ, ಪೀಣ್ಯ 3ನೇ ಹಂತ, ಪೀಣ್ಯ 4ನೇ ಹಂತ, 4ನೇ ಮುಖ್ಯ, 8ನೇ ಕ್ರಾಸ್, ಮಾರುತಿ ಲೇಔಟ್, ರಾಜಗೋಪಾಲ ನಗರ, ಗಣಪತಿನಗರ ಮುಖ್ಯರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ, MEC ಲೇಔಟ್, ಮಲಯಾಳಿ ಅತಿಥಿ ಗೃಹ ರಸ್ತೆ, KHB ಲೇಔಟ್, ರಾಜೇಶ್ವರಿನಗರ, ಆಕಾಶ್ ಥಿಯೇಟರ್ ರಸ್ತೆ, ಫ್ರೆಂಡ್ಸ್ ಸರ್ಕಲ್, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ, ಭೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, ವಿಧಾನಸೌಧ ಲೇಔಟ್, ಮುನೇಶ್ವರ ಲೇಔಟ್, ಕೆ.ಜಿ.ಲೇಔಟ್, ರಾಜೀವ್ ಗಾಂಧಿ ನಗರ, ಚೌಡೇಶ್ವರಿ ನಗರ, ಲಗ್ಗೆರೆ ಹಳೆ ಗ್ರಾಮ, ಗೊರಗುಂಟೆಪಾಳ್ಯ, ತರೀಕೆರೆ, ಮೋದೂರು, ಜಿಗಣಿ, ಗೊಲ್ಲಹಳ್ಳಿ, ವಿವೇಕಾನಂದ ಯೋಗಾಶ್ರಮ, ತಾವರೆಕೆರೆ, ಕೊಡಿಗೇಹಳ್ಳಿ, ದಾಬಸ್ಪೇಟೆ, ನೆಲಮಂಗಲ, ಬೇಗೂರು, ಹಿರೇಹಳ್ಳಿ, ಚೇಳೂರು ಮತ್ತು ಹೊಸಕೆರೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕಾಗಿ ಇಲಾಖೆ ಮನವಿ ಮಾಡಿದೆ.












Click it and Unblock the Notifications