ಕಾವೇರಿ ಎಕ್ಸ್ ಪ್ರೆಸ್ ಜನರಲ್ ಬೋಗಿಯಲ್ಲಿ ಪ್ರಯಾಣಿಸಿದ ಪಿಯೂಶ್ ಗೊಯಲ್
ಬೆಂಗಳೂರು, ಫೆಬ್ರವರಿ 20: ರೈಲ್ವೇ ಸ್ಥಿತಿಗತಿಯ ಬಗ್ಗೆ ತಿಳಿಯಲು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ನಿನ್ನೆ(ಫೆ.19) ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸಿದರು.
ಕಾವೇರಿ ಎಕ್ಸ್ ಪ್ರೆಸ್ ನ ಜನರಲ್ ಕೋಚಿನಲ್ಲಿ ಸಾಮಾನ್ಯ ಪ್ರಯಾಣಿಕರೊಂದಿಗೆ ಪ್ರಯಾಣಿಸಿದ ಪಿಯೂಶ್ ಗೋಯಲ್ ಸಹ ಪ್ರಯಾಣಿಕರ ಬಳಿ ರೈಲ್ವೆ ವ್ಯವಸ್ಥೆಯ ಕುಂದು-ಕೊರತೆಗಳನ್ನು ಚರ್ಚಿಸಿದರು.
ಮೈಸೂರುರ ರೈಲ್ವೇ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೊಸ ಎಕ್ಸ್ ಪ್ರೆಸ್ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಅವರು ಕಾರ್ಯಕ್ರಮದ ನಂತರ ರೈಲಿನ ಮೂಲಕವೇ ಬೆಂಗಳೂರು ತಲುಪಿದ್ದು ವಿಶೇಷವಾಗಿತ್ತು.

ಫೆ.19 ರಂದು ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ಯಾಲೆಸ್ ಕ್ವೀನ್ ಹಂಸಫರ್ ರೈಲನ್ನು ಉದ್ಘಾಟಿಸಿದ್ದರು.












Click it and Unblock the Notifications