Breaking: ಬಿಬಿಎಂಪಿ ಕಮೀಷನರ್ ನೈಟ್ರೌಂಡ್ಸ್: ರಸ್ತೆ ಗುಂಡಿ ಪರಿಶೀಲನೆ
ಬೆಂಗಳೂರು, ಜೂ, 2: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ(ಬಿಬಿಎಂಪಿ)ಗೆ ಶಾಪವಾಗಿ ಕಾಡುವುದು ಎಂದರೆ ಅದು ರಸ್ತೆ ಗುಂಡಿಗಳು , ಬಿಬಿಎಂಪಿ ರಸ್ತೆಗುಂಡಿಗಳಿಗೆ ತೇಪೆ ಹಾಕುವ ಕೆಲಸವನ್ನು ಮಾಡಿದರೇ ಕೆೆಲದಿನಗಳಲ್ಲೇ ಕಿತ್ತುಹೋಗುತ್ತದೆ. ಮತ್ತದೇ ರಸ್ತೆಗುಂಡಿಗಳ ಹಾವಳಿ ಬೆಂಗಳೂರಿಗರನ್ನು ಹೈರಾಣಾಗಿಸಿದೆ. ಇದೀಗ ಮತ್ತೆ ರಸ್ತೆಗುಂಡಿ ಮುಚ್ಚುವ ಕಾಮಗಾರಿ ಪ್ರಾರಂಭವಾಗಿದ್ದು ಇಂದು (ಜೂ.2) ರಾತ್ರಿ 11ಗಂಟೆಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳ ತಂಡದೊಂದಿಗೆ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಲಿದ್ದಾರೆ.
ಮಳೆಗಾಲ ಪ್ರಾರಂಭವಾದ ಬಳಿಕ ಬಿಬಿಎಂಪಿ ರಸ್ತೆಗಳ ಗುಂಡಿಯನ್ನು ಮುಚ್ಚುವ ಕೆಲಸವನ್ನು ಮಾಡುತ್ತಿದೆ. ಗಾದೆ ಮಾತಿನಂತೆ ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುತ್ತಿದ್ದರು ಎನ್ನುವ ಸ್ಥಿತಿ ಬಿಬಿಎಂಪಿಯದ್ದು. ಮಳೆಗಾಲದಲ್ಲಿ ಸಮರೋಪಾದಿಯಲ್ಲಿ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳುವ ಯತ್ನವನ್ನು ಮಾಡುತ್ತಿದ್ದಾರೆ. ಮಳೆಗಾಲಕ್ಕೂ ಮೊದಲು ಸಾಕಷ್ಟು ಸಮಯಾವಕಾಶವಿದ್ದರು ರಸ್ತೆಗುಂಡಿಯನ್ನು ಮುಚ್ಚದೇ ಸೋಮಾರಿಯಾಗಿದ್ದ ಬಿಬಿಎಂಪಿ ದಿಡೀರಾಗಿ ರಸ್ತೆಗುಂಡಿಗೆ ಮುಕ್ತಿ ಕೊಡುತ್ತಿದೆ.

Recommended Video
ಇನ್ನು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದ್ದು. ರಸ್ತೆಗುಂಡಿ ಮುಚ್ಚುವ ಕಾರ್ಯವನ್ನು ಮುಖ್ಯ ಆಯುಕ್ತರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.












Click it and Unblock the Notifications