ಬೆಂಗಳೂರಿನ ಡಿಫೆನ್ಸ್ ಕಾಲೋನಿಯಲ್ಲಿ ಉದ್ಯಾನಕ್ಕೇ ರಕ್ಷಣೆ ಇಲ್ಲ
ಡಿಫೆನ್ಸ್ ಕಾಲೋನಿಯಲ್ಲಿ ಒಂದಿನ ಬೆಳಗ್ಗೆ ಯಾರೋ ಪಾರ್ಕ್ ನಲ್ಲಿ ತಂತಿ-ಬೇಲಿ ಕಟ್ಟಿದರು. ಈ ಬಗ್ಗೆ ಸ್ಥಳೀಯರು ದೂರೇನೋ ನೀಡಿದ್ದಾರೆ. ಅದರೆ ಫಲಿತಾಂಶ ಏನು?
ಬೆಂಗಳೂರು, ನವೆಂಬರ್ 29: ಬಿಬಿಎಂಪಿಗೆ ಒತ್ತುವರಿ ತೆರವಿನ ಬಗ್ಗೆ ನೆನಪಾಗೋದು ಅಪರೂಪಕ್ಕೆ. ಅದರಲ್ಲೂ ಬಡವರ ಮನೆಗಳು ಅಂದರೆ ಬಲೇ ಅಚ್ಚುಮೆಚ್ಚು- ಇದು ಸಾರ್ವಜನಿಕರದೇ ಮಾತು. ಅದಕ್ಕೆ ಇಲ್ಲೊಂದು ಹೊಸ ಉದಾಹರಣೆ ಸಿಕ್ಕಿದೆ. ವಾರ್ಡ್ 80ರ ಹೊಯ್ಸಳನಗರ ವ್ಯಾಪ್ತಿಯ ಡಿಫೆನ್ಸ್ ಕಾಲೋನಿಯಲ್ಲಿ ಉದ್ಯಾನವನ್ನೇ ಅತಿಕ್ರಮಣ ಮಾಡಿ 15 ದಿನ ಕಳೆದಿದ್ದರೂ ತೆರವಿಗೆ ಈ ವರೆಗೂ ಮುಂದಾಗಿಲ್ಲ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಕ್ಷೆ ಪ್ರಕಾರ ಡಿಫೆನ್ಸ್ ಕಾಲೋನಿಯ ನಾಲ್ಕು ಹಾಗೂ ಆರನೇ ಮುಖ್ಯ ರಸ್ತೆ ಮಧ್ಯೆ ಇರುವ ಜಾಗ ಉದ್ಯಾನಕ್ಕೆ ಅಂತ ಮೀಸಲಾಗಿದೆ. ಈ ಬಗ್ಗೆ ಬಿಡಿಎ ವೆಬ್ ಸೈಟ್ ನಲ್ಲೂ ಅಧಿಕೃತವಾಗಿ ಮಾಹಿತಿ ಇದೆ. ಆದರೆ ನವೆಂಬರ್ 12ರಂದು ಬೆಳಗ್ಗೆ ಕೆಲವರು ಕಲ್ಲನ್ನು ನಿಲ್ಲಿಸಿ, ಬೇಲಿ ಸುತ್ತಿ ಒತ್ತುವರಿ ಮಾಡಿದ್ದಾರೆ.[1000 ಕೋಟಿ ಮೌಲ್ಯದ 189 ಎಕರೆ ಭೂಮಿ ಒತ್ತುವರಿ ತೆರವು]

ಈ ಜಾಗದ ವಿಚಾರವಾಗಿ ಡಿಫೆನ್ಸ್ ಕಾಲೋನಿ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಹಾಗೂ ಬಿಡಿಎ ವಿರುದ್ಧ ಕೆಲವರು ಹೈ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಈ ಪ್ರಕರಣದ ವಿಚಾರಣೆ ಪೂರ್ಣಗೊಂಡು ತೀರ್ಪು ಬರುವವರೆಗೂ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಕೂಡ ಸೂಚಿಸಿದೆ.
ಆದರೆ, ಹೀಗೆ ದಿಢೀರ್ ಎಂದು ಠಿಕಾಣಿ ಹಾಕಿದವರ ಬಳಿ ಯಾವುದೇ ದಾಖಲೆಗಳಿಲ್ಲ. ಜತೆಗೆ ಬಿಡಿಎನಿಂದಲೋ, ಬಿಬಿಎಂಪಿಯಿಂದಲೋ ಯಾವುದೇ ಅನುಮತಿಯನ್ನು ಪಡೆದಿಲ್ಲ. ಪ್ರಕರಣ ಕೋರ್ಟ್ ನಲ್ಲಿದ್ದು, ವಿಚಾರಣೆ ಹಂತದಲ್ಲೇ ಇರುವಾಗ ಯಾವ ಅನುಮತಿ ಪಡೆದು ಈ ಸ್ಥಳದಲ್ಲಿ ಬರಲು ಸಾಧ್ಯ?[ಒತ್ತುವರಿ ತೆರವು, ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ: ಸಿಎಂ]
ಇತ್ತ ಕೋರ್ಟ್ ನಿಂದ ಹೌಸಿಂಗ್ ಸೊಸೈಟಿ ಅವರಿಗೆ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ನೀಡಿದ ಆಜ್ಞೆ ಉಲ್ಲಂಘಿಸಿದಂತಾಗುತ್ತದೆ. ಇನ್ನು ಹಲವು ವರ್ಷಗಳಿಂದ ಇದೇ ಬಡಾವಣೆಯಲ್ಲಿ ಇರುವವರ ಪಾಲಿಗೆ ಈ ಸ್ಥಳ ಆಟದ ಮೈದಾನವಾಗಿತ್ತು. ಈ ಇಡೀ ಪ್ರಕರಣದ ಬಗ್ಗೆ ಸ್ಥಳೀಯರು ಕಾರ್ಪೋರೇಟರ್ ಗೆ ದೂರು ನೀಡಿದ್ದಾರೆ. ಜತೆಗೆ ಪೊಲೀಸ್, ಬಿಬಿಎಂಪಿಗೂ ಕಂಪ್ಲೇಂಟ್ ನೀಡಲಾಗಿದೆ. ಆದರೆ ನಯಾ ಪೈಸೆ ಪ್ರಯೋಜನವಾಗಿಲ್ಲ.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications