ಬೆಂಗಳೂರು ವೈದ್ಯರ ನಿರ್ಲಕ್ಷ್ಯ: ಮೂರು ತಿಂಗಳ ಮಗು ಸಾವು
ಬೆಂಗಳೂರು, ನವೆಂಬರ್14 : ಆಸ್ಪತ್ರೆ ವೈದ್ಯರ ನಿರ್ಲಕ್ಷಯದಿಂದ ಮೂರು ತಿಂಗಳ ಮಗುವೊಂದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂ ಸಮೀಪವಿರುವ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಸೋಮವಾರ (ನ.೧೩) ರಾತ್ರಿ ನಡೆದಿದೆ.
ಇಂದಿರಾ ಕ್ಯಾಂಟೀನ್ ಮ್ಯಾನೇಜರ್ ರಾಜಾಜಿನಗರ ನಿವಾಸಿಯಾದ ವಿನೋದ್ ರಾವ್ ಮತ್ತು ದಿವ್ಯ ಬಾಯಿ ದಂಪತಿಯ ಮಗುವಾಗಿದ್ದು ಕಫಾ ಕಟ್ಟಿದೆ ಎಂದು ಮಗುವನ್ನು ಆಸ್ಪತ್ರೆಗೆ ಕರೆ ತಂದಿದ್ದರು. ಮಗುವಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಔಷಧ ಬರೆದುಕೊಟ್ಟಿದ್ದರು. ಔಷಧ ಹಾಕಿದ ಅರ್ಧಗಂಟೆಯೊಳಗೆ ಮಗು ಸಾವನ್ನಪ್ಪಿದೆ. ಇದಕ್ಕೆ ಕೆ.ಸಿ. ಜನರಲ್ ಆಸ್ಪತ್ರೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಪೋಷಕರು ಪ್ರತಿಭಟನೆ ಮಾಡಿದರು.












Click it and Unblock the Notifications