ಆನೆಗುಂದಿ ವ್ಯಾಸರಾಯರ ಬೃಂದಾವನ ಧ್ವಂಸ: ಆನ್‌ಲೈನ್ ಪೆಟಿಷನ್

ಬೆಂಗಳೂರು, ಜುಲೈ 18: ಆನೆಗುಂದಿ ವ್ಯಾಸರಾಯರ ಬೃಂದಾವನ ನಾಶಕ್ಕೆ ಸಂಬಂಧಿಸಿದಂತೆ ಚೇಂಜ್ ಡಾಟ್ ಆರ್ಗ್ ಆನ್‌ಲೈನ್ ಪೆಟಿಷನ್ ಆರಂಭಿಸಿದೆ.

ವ್ಯಾಸರಾಯರ ಬೃಂದಾವನಕ್ಕೆ ನ್ಯಾಯದೊರಕಿಸಿಕೊಡಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆನ್‌ಲೈನ್ ಪಿಟಿಷನ್ ಆರಂಭಿಸಲಾಗಿದೆ.

ನಿಧಿಗಳ್ಳರು ಮಾಡಿದ ಹೇಯ ಕೃತ್ಯ ಎನ್ನುವುದು ತಿಳಿದುಬಂದಿದೆ. ಇದೊಂದು ರಾಷ್ಟ್ರೀಯ ದುರಂತ. ಏಕೆಂದರೆ, ವ್ಯಾಸರಾಜರು ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಗುರುಗಳಲ್ಲ. ಹಿಂದೂ ಸಾಮ್ರಾಜ್ಯದ ಗುರುಗಳು. ದಕ್ಷಿಣ ಭಾರತದ ಚಕ್ರವರ್ತಿ ಶ್ರೀಕೃಷ್ಣದೇವರಾಯನನ್ನೇ ರಕ್ಷಿಸಿದವರು. ಮಧ್ಯಯುಗೀನ ಭಾರತದ ಇತಿಹಾಸದಲ್ಲಿ ಸಾಮ್ರಾಜ್ಯವೊಂದನ್ನು ಕೆಲ ಕಾಲ ಆಳಿದ ಏಕೈಕ ಬ್ರಾಹ್ಮಣ ಸನ್ಯಾಸಿ ಇವರು.

Online petition for Brindavan demolision

ವ್ಯಾಸಕೂಟ, ದಾಸಕೂಟಗಳನ್ನು ರಚಿಸಿ, ಅತ್ತ ಸಂಸ್ಕೃತ ಸಂಪ್ರದಾಯ ಉಳಿಸಿ, ಬೆಳೆಸಿ ಇತ್ತ ಕನ್ನಡ ಕ್ರಾಂತಿ ಮೊಳಗಿಸಿದವರು. ಪುರಂದರ ದಾಸರು, ಕನಕದಾಸರು ಉಚ್ಛ್ರಾಯ ಸ್ಥಿತಿಗೆ ಬರಲು ಇವರೇ ಕಾರಣ.

ಇಂಥ ಮಹಾತ್ಮರ ಮೂಲವೃಂದಾವನ ಧ್ವಂಸ ಒಂದು ದುರಂತ. ಸಮಸ್ತ ಬ್ರಾಹ್ಮಣ ಸಮುದಾಯ ಹಾಗೂ ಇತರರು ಒಕ್ಕೊರಲಿನಿಂದ ಈ ಕೃತ್ಯವನ್ನು ಖಂಡಿಸಲೇ ಬೇಕು. ಪ್ರಕರಣ ಯಾವ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದೆ. ಚೇಂಜ್ ಡಾಟ್ ಆರ್ಗ್(change.org) ವೆಬ್‌ಸೈಟ್‌ಗೆ ಹೋದರೆ ಅಲ್ಲಿಯೇ ನೀವು ರುಜು ಮಾಡಬಹುದು.ವ್ಯಾಸರಾಯರು ಜೀವಿಸಿದ್ದ ಕಾಲ 1447-1539 ಎಂದು ಹೇಳಲಾಗುತ್ತದೆ. ವ್ಯಾಸರಾಯರು 1548 , ಫಾಲ್ಗುಣ ಮಾಸದ ಚತುರ್ಧಿ ದಿನದಂದು, ಹಂಪೆ ಯಲ್ಲಿ ಕಾಲವಾದರು. ಇವರ ಬೃಂದಾವನವು ಆನೆಗೊಂದಿಯ ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು ನವ ಬೃಂದಾವನ ಎಂದು ಕರೆಯಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+