ಬೆಂಗಳೂರಲ್ಲಿ ಸೈಕಲ್ ಸವಾರಿಗೆ ಪ್ರತ್ಯೇಕ ಪಥ ಸಿದ್ಧ
ಬೆಂಗಳೂರು, ಫೆಬ್ರುವರಿ 02: ಸದಾ ಬ್ಯುಸಿಯಾಗಿರುವ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಈಗ ಆರಾಮಾಗಿ ಸೈಕಲ್ ಸವಾರಿ ಮಾಡಬಹುದಾಗಿದೆ. ಸೈಕಲ್ ಗೆಂದೇ ಪ್ರತ್ಯೇಕ ಲೇನ್ ರೆಡಿಯಾಗಿದ್ದು, ಸವಾರಿಗೆ ಸಿದ್ಧವಾಗಿದೆ.
ಆರ್ ಸಿ ಕಾಲೇಜಿನಿಂದ ಟರ್ಫ್ ಕ್ಲಬ್ ವರೆಗೆ ಹಾಗೂ ರಾಜ ಭವನ ರಸ್ತೆಯಲ್ಲಿ ಈ ಸೈಕಲ್ ಲೇನ್ ಆರಂಭವಾಗಿದ್ದು, ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಮಿಂಕ್ ಸ್ವ್ಕಾರ್, ರಾಜಭವನ ರಸ್ತೆ, ಬಸವೇಶ್ವರ ಸರ್ಕಲ್ ಯೋಜನೆಯಡಿಯಲ್ಲಿ ಸೈಕಲ್ ಲೇನ್ ರೂಪಿಸಲಾಗಿದೆ.
ಬಿಎಸ್ ಸಿಎಲ್ 30 ಕಿ.ಮೀ ವ್ಯಾಪ್ತಿಯ ಸೈಕಲ್ ಲೇನ್ ಗೆ ಯೋಜನೆ ರೂಪಿಸಿದ್ದು, ಸೈಕಲ್ ಲೇನ್ ಗೆ ಸೂಕ್ತ ರಸ್ತೆಗಳ ಕುರಿತು ಸ್ಥಳ ಸಮೀಕ್ಷೆಗೆ ಮುಂದಾಗಿದೆ. ನಗರ ಭೂ ಸಾರಿಗೆ ಇಲಾಖೆಯು ಈಗಾಗಲೇ ಹದಿನಾಲ್ಕು ರಸ್ತೆಗಳನ್ನು ಸೂಚಿಸಿರುವುದಾಗಿ ತಿಳಿದುಬಂದಿದೆ. ಇದರ ನಡುವೆ ಬಿಬಿಎಂಪಿ ಕೂಡ 35 ಕಿ.ಮೀ ಉದ್ದ ಮಾರ್ಗದ ಸಿಲ್ಕ್ ಬೋರ್ಡ್ ಹಾಗೂ ಲೋರಿ ಜಂಕ್ಷನ್ ನಡುವೆ ಸೈಕಲ್ ಲೇನ್ ರೂಪಿಸುವತ್ತ ಚಿಂತನೆ ನಡೆಸಿದೆ. ಲೋರಿ ಜಂಕ್ಷನ್ ನಿಂದ ಮಹದೇವಪುರದವರೆಗೆ ಐದು ಕಿ.ಮೀ ವ್ಯಾಪ್ತಿಯಲ್ಲಿ ಸೈಕಲ್ ಲೇನ್ ಸಿದ್ಧವಾಗಿದ್ದು, ಸಿಲ್ಕ್ ಬೋರ್ಡ್ ಹಾಗೂ ಇಬಲೂರು ಜಂಕ್ಷನ್ ನಡುವೆ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದೆ.

ಸುಮಾರು ಒಂದೂವರೆ ಲಕ್ಷ ಸೈಕಲ್ ಸವಾರರು ನಗರದಲ್ಲಿದ್ದು, ಈ ಸೈಕಲ್ ಲೇನ್ ಗಳು ಅನುಕೂಲ ಮಾಡಿಕೊಡಲಿರುವ ನಿರೀಕ್ಷೆ ವ್ಯಕ್ತವಾಗಿದೆ.
Recommended Video
-
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್












Click it and Unblock the Notifications