Namma Metro 2025ಕ್ಕೆ ಬೆಂಗಳೂರಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಪೂರ್ಣ
ಬೆಂಗಳೂರು, ನವೆಂಬರ್ 18: ಸಂಚಾರವನ್ನು ಸುಗಮ ಮತ್ತಷ್ಟು ವೇಗಗೊಳಿಸಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷ್ ಕಂಪನಿ (ಬಿಎಂಆರ್ಸಿಎಲ್) ವ್ಯಾಪ್ತಿಯಲ್ಲಿ 2025ರ ಜೂನ್ ಹೊತ್ತಿಗೆ 175 ಕಿ.ಮೀ. ಉದ್ದದ ಮಾರ್ಗ ನಿರ್ಮಾಣವು ಪೂರ್ಣಗೊಳ್ಳಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಶೃಂಗಸಭೆ (ಬಿಟಿಎಸ್ 22)ಯಲ್ಲಿ 'ಸಂಚಾರ ವ್ಯವಸ್ಥೆಯ ಭವಿಷ್ಯ' ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೆಂಗಳೂರಲ್ಲಿ 'ನಮ್ಮ ಮೆಟ್ರೋ' ಎರಡು ಮತ್ತು ಮೂರನೇ ಹಂತದ ಕಾಮಗಾರಿಗಳು ಸದ್ಯ ಪ್ರಗತಿಯಲ್ಲಿವೆ. ಇವುಗಳು ಸಂಪೂರ್ಣವಾಗಿ ಮುಗಿದರೆ ಬೆಂಗಳೂರು 2041ರ ವೇಳೆಗೆ ನಾವು ಒಟ್ಟು 314 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಹೊಂದಿರುವ ನಗರವಾಗಲಿದೆ. ಸದ್ಯಕ್ಕೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಮೆಟ್ರೋ ನಿಲ್ದಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ ಸ್ವಂತ ವಾಹನಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆಯ ಕಡೆಗೆ ಜನರನ್ನು ಕರೆತರುವುದೇ ದೊಡ್ಡ ಸವಾಲಾಗಿದೆ ಎಂದು ಹೇಳಿದರು.
ನವೋದ್ಯಮಗಳ
ಜೊತೆ
ಬಿಎಂಆರ್ಸಿಎಲ್
ಒಪ್ಪಂದ
ಕಳೆದ
1990ರ
ವರೆಗೆ
ದೇಶದಲ್ಲಿ
ನಗರ
ಪ್ರದೇಶಗಳ
ಕಡೆಗೆ
ಹೆಚ್ಚಿನ
ಗಮನ
ಹರಿಸುತ್ತಿರಲಿಲ್ಲ.
ಹೀಗಾಗಿ
ನಮ್ಮ
ನಗರಾಭಿವೃದ್ಧಿ
ಯೋಜನೆಗಳು
ಬಹುಕಾಲ
ವೈಜ್ಞಾನಿಕವಾಗಿರಲಿಲ್ಲ.
ಈಗ
ನವೋದ್ಯಮಗಳಿಂದ
ಮೆಟ್ರೋ
ವ್ಯವಸ್ಥೆಗೆ
ಸಾಕಷ್ಟು
ಅನುಕೂಲಗಳು
ಸಿಗುತ್ತಿವೆ.
ಹೀಗಾಗಿ
ಜನರು
ಮೆಟ್ರೋ
ರೈಲುಗಳ
ಮೂಲಕ
ತಮ್ಮ
ಕಾರ್ಯಸ್ಥಳಗಳನ್ನು
ತಲುಪುವಂತೆ
ಮಾಡಲು
ಹಲವು
ನವೋದ್ಯಮಗಳೊಂದಿಗೆ
ಬಿಎಂಆರ್ಸಿಎಲ್
ಒಡಂಬಡಿಕೆ
ಮಾಡಿಕೊಳ್ಳುತ್ತಿದೆ
ಎಂದರು.
ಮೆಟ್ರೋ ನಿಲ್ದಾಣಗಳಲ್ಲೇ ಬಸ್ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಜತೆ ಮಾತುಕತೆ ನಡೆಯುತ್ತಿದೆ. ಇನ್ನೂ ಯಾವ ತಿರ್ಮಾನ ಕೈಗೊಂಡಿಲ್ಲ. ಈ ಯೋಜನೆಯಿಂದ ಬಿಎಂಟಿಸಿಗೂ ಲಾಭವಾಗಲಿದೆ. ಕಾರು ಮತ್ತು ಬೈಕ್ ಪೂಲಿಂಗ್ ವ್ಯವಸ್ಥೆಯನ್ನು ಉತ್ತೇಜಿಸಬೇಕಿದೆ. ಇದಲ್ಲದೇ ಮೆಟ್ರೋ ನಿಲ್ದಾಣಗಳ ಒಳಗೆ ಮತ್ತು ಹೊರಗೆ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಬಿಎಂಆರ್ಸಿಎಲ್ ಚಿಂತನೆ ನಡೆಸಿದೆ ಎಂದು ವಿವರಿಸಿದರು.
ಶೇ.66ರಷ್ಟು ನಗರೀಕರಣ ಬಾಕಿ ಇದೆ
ನಂತರ ಅಂತಾರಾಷ್ಟ್ರೀಯ ಸಾರಿಗೆ ಕೌನ್ಸಿಲ್ನ ಸದಸ್ಯ ಅಮಿತ್ ಭಟ್ ಮಾತನಾಡಿ, ಪಾಶ್ಚಾತ್ಯ ಜಗತ್ತಿನಲ್ಲಿ ಶೇ. 85ರಷ್ಟು ನಗರೀಕರಣವಾಗಿದೆ. ಭಾರತದಲ್ಲಿ ಈ ಪ್ರಮಾಣ ಶೇ. 33 ರಷ್ಟಿದೆ. ಆದರೆ ನಮ್ಮಲ್ಲಿ ಇನ್ನೂ ಶೇ.66ರಷ್ಟು ಮೂಲಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಬೇಕಾದ ಅವಶ್ಯಕತೆ ಇದೆ. ಏಕೆಂದರೆ ಭಾರತದಲ್ಲಿ ಹೊಸದಾಗಿ ಹಲವು ನಗರಗಳು ತಲೆ ಎತ್ತಲಿವೆ ಎಂದರು.
ಸುಗಮ ಮತ್ತು ಅತ್ಯಾಧುನಿಕ ಸಾರಿಗೆ ಸೌಲಭ್ಯವನ್ನು ಜನರಿಗೆ ನೀಡುವಾಗ ಅಧಿಕ ವಾಯುಮಾಲಿನ್ಯ ಆಗದಂತೆ ನೋಡಿಕೊಳ್ಳಬೇಕು. ಎಲ್ಲರನ್ನೂ ಒಳಗೊಂಡು ಯೋಜನೆ ರೂಪಿಸುವುದ ಮುಖ್ಯವಾಗಿ ಯಾವುದೇ ಅಪಘಾತಗಳಿಗೆ ಆಸ್ಪದವಿಲ್ಲದಂತೆ ಖಾತ್ರಿಪಡಿಸುವುದು ದೊಡ್ಡ ಸವಾಲುಗಳಾಗಿವೆ ಎಂದು ತಿಳಿಸಿದರು.
ಬಾಶ್ ಕಂಪನಿಯ ಉಪಾಧ್ಯಕ್ಷ ವಾದಿರಾಜ್ ಕೃಷ್ಣಮೂರ್ತಿ, ಚಲೋ ಕಂಪನಿಯ ಸಹ ಸಂಸ್ಥಾಪಕ ವಿನಾಯಕ್ ಭಾವ್ನಾನಿ ಮತ್ತಿತರರು ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.