ಕೆಂಪೇಗೌಡರ ಕನಸಿನ ಬೆಂಗಳೂರು ಮರು ನಿರ್ಮಾಣವಾಗಬೇಕು: ಸಂಸದ ರಾಜೀವ್
ಬೆಂಗಳೂರು. ಜೂನ್ 27: ನಾಡಪ್ರಭು ಕೆಂಪೇಗೌಡರ ಜನ್ಮ ದಿನಾಚರಣೆಯಾದ ಬುಧವಾರ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ನಾಡಪ್ರಭು ಕೆಂಪೇಗೌಡರ ಕನಸಿನಂತೆ ಬೆಂಗಳೂರು ನಗರವನ್ನು ಮರುನಿರ್ಮಾಣ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಈ ಕುರಿತು ಟ್ವಿಟ್ಟರ್ನಲ್ಲಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನು ಉಲ್ಲೇಖಿಸಿ ನಾಡಪ್ರಭು ಕೆಂಪೇಗೌಡರ ಕನಸಿನಂತೆ ಸ್ವಚ್ಛ, ಸುಂದರ, ಪಾರದರ್ಶಕ ಆಡಳಿತವುಳ್ಳ ಬೆಂಗಳೂರು ನಗರವನ್ನು ಮರು ನಿರ್ಮಾಣ ಮಾಡಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಾಡಪ್ರಭು ಕೆಂಪೇಗೌಡರ ಜಯಂತಿಗೆ ಶುಭ ಕೋರಿದ ಬಳಿಕ ಕನಸಿನಂತೆ ಬೆಂಗಳೂರು ಮತ್ತೆ ಮರು ನಿರ್ಮಾಣಗೊಳ್ಳುವ ಅವಶ್ಯಕತೆ ಇದ್ದು ನಾಗರಿಕರ ಮೂಲಸೌಕರ್ಯ ಹಾಗೂ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವಂತೆ ರಾಜೀವ್ ಚಂದ್ರಶೇಖರ್ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
On #KempegowdaJayanti, I urge @CMofKarnataka @hd_kumaraswamy & DCM @DrGParameshwara to rebuild #Namma #Bengaluru with good governance, transparency, accountability & involvng citizens in planning & restoring land of #Kempegowda's dreams. #KempeGowdaJayanthi pic.twitter.com/j7qc8hO38w
— Rajeev Chandrasekhar (@rajeev_mp) June 27, 2018












Click it and Unblock the Notifications