ಬೆಂಗಳೂರು ರೋಡ್ಗಳನ್ನು ನೋಡಿ ವಾಹನ ಸವಾರರಿಗೆ ಖುಷಿ, ಯಾಕೆ
ಬೆಂಗಳೂರಲ್ಲಿ ಗುರುವಾರ ಸೂರ್ಯ ಕಣ್ಣು ಬಿಟ್ಟಿದ್ದಾನೆ. ಕಳೆದ ಮೂರು ದಿನಗಳಿಂದ ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ ಇತ್ತು. ಹೀಗಾಗಿ ಸೂರ್ಯನೇ ಕಾಣಿಸಿರಲಿಲ್ಲ. ಗುರುವಾರ ಮಳೆರಾಯ ತುಸು ಬಿಡುವು ಕೊಟ್ಟಿದ್ದಾರೆ. ಆದರೆ, ಸದಾ ಟ್ರಾಫಿಕ್ಜಾಮ್ನಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರಲ್ಲಿ ಗುರುವಾರ ರೋಡ್ಗಳು ಖಾಲಿ.. ಖಾಲಿ ಇದ್ದವು.
ಹೌದು ಗುರುವಾರ ಬೆಂಗಳೂರಲ್ಲಿ ಮಳೆ ಬಿಡುವು ಕೊಟ್ಟಿದ್ದರಿಂದ ಸಾಮಾನ್ಯವಾಗಿಯೇ ಟ್ರಾಫಿಕ್ ಜಾಮ್ ಜಾಸ್ತಿ ಇರಲಿದೆ ಎಂದು ಜನ ಅಂದಾಜಿಸಿದ್ದರು. ಆದರೆ, ಜನರ ಲೆಕ್ಕಾಚಾರ ತಲೆಕೆಳಗಾಗಿದೆ. ಬೆಂಗಳೂರಲ್ಲಿ ಗುರುವಾರ ವಿರಳ ಟ್ರಾಫಿಕ್ ಜಾಮ್ ಇತ್ತು. ರಸ್ತೆಗೆ ಇಳಿದ ಜನ ಇದನ್ನು ನೋಡಿ ಫೂಲ್ ಖುಷಿ ಆಗುವುದರ ಜೊತೆಗೆ ಶಾಕ್ ಸಹ ಆಗಿದ್ದಾರೆ. ಮಳೆ ನಿಂತ ಮೇಲೂ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಆಗದೆ ಇರುವುದಕ್ಕೆ ಕಾರಣ ಇದೆ. ಬೆಂಗಳೂರಲ್ಲಿ ಈ ವಾರ ಪೂರ್ತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಇದೇ ಕಾರಣಕ್ಕೆ ಬೆಂಗಳೂರಿನ ಹಲವು ಐಟಿ - ಬಿಟಿ ಕಂಪನಿಗಳು ಹಾಗೂ ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ಫ್ರಮ್ ಹೋಮ್ ನೀಡಿವೆ. ಅಲ್ಲದೇ ಕಳೆದ ಒಂದುವಾರದಿಂದ ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರಿನ ಹೊರ ವಲಯ, ಸರ್ಜಾಪುರ, ಮಾನ್ಯತಾ ಟೆಕ್ ಪಾರ್ಕ್ ಹಾಗೂ ಮಹದೇವಪುರ ಸೇರಿದಂತೆ ವಿವಿಧ ಭಾಗದಲ್ಲಿ ಮಳೆ ನೀರು ಅಲ್ಲಲ್ಲಿ ನಿಂತಿದೆ. ಕೆಲವು ಕಡೆ ಕೃತಕ ಪ್ರವಾಹವೂ ಸೃಷ್ಟಿಯಾಗಿದೆ. ಈ ಭಾಗಗಳಲ್ಲಿ ಸಂಚರಿಸುವುದು ಸವಾಲಾಗಿದೆ. ಹೀಗಾಗಿ, ಹಲವು ಕಂಪನಿಗಳು ವರ್ಕ್ಫ್ರಮ್ ಹೋಮ್ ನೀಡಿದ್ದು ವಾಹನ ಸಂಚಾರ ವಿರಳವಾಗಿದ್ದು, ಟ್ರಾಫಿಕ್ ಜಾಮ್ ಇಲ್ಲ.
ಖಾಸಗಿ ಶಾಲೆಗಳಲ್ಲಿ ರಜೆ: ಇನ್ನು ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳು ಸಹ ರಜೆ ನೀಡಿವೆ. ಅಲ್ಲದೇ ದಸರಾ ರಜೆಯೂ ಮುಂದುವರಿದಿದೆ. ಮಳೆಯಿಂದಾಗಿ ಸಣ್ಣ ಮಕ್ಕಳನ್ನು (ಎಲ್ಕೆಜಿ, ಯುಕೆಜಿ ಹಾಗೂ ಬೆಬಿಕೇರ್) ಶಾಲೆಗಳಿಗೆ ಮುಂದಿನ ಒಂದು ವಾರದ ವರೆಗೆ ಕಳುಹಿಸಬೇಡಿ ಎಂದು ಹೇಳಿವೆ. ಹೀಗಾಗಿ, ಈ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಇದೇ ಕಾರಣಕ್ಕೆ ಬೆಂಗಳೂರಲ್ಲಿ ಶಾಲಾ ಬಸ್ಗಳ ಸಂಖ್ಯೆ ವಿರಳವಾಗಿದೆ. ಸಾಮಾನ್ಯವಾಗಿ ಬೆಂಗಳೂರಲ್ಲಿ ಬೆಳಿಗ್ಗೆ ಸಮಯದಲ್ಲಿ ಶಾಲಾ ಬಸ್ಗಳ ಸಂಖ್ಯೆ ಹೆಚ್ಚಾಗಿ ಇರುತ್ತಿತ್ತು. ಅಲ್ಲದೇ ಕೆಲವು ಖಾಸಗಿ ಶಾಲೆಯ ಬಸ್ಗಳನ್ನು ರಸ್ತೆ ಸೈಡ್ ನಿಲ್ಲಿಸುತ್ತಿದ್ದರಿಂದ, ಟ್ರಾಫಿಕ್ ಜಾಮ್ ಸೃಷ್ಟಿಯಾಗುತ್ತಿತ್ತು. ಹೀಗಾಗಿ, ಗುರುವಾರ ಈ ಯಾವ ದೃಶ್ಯಗಳೂ ಪ್ರಮುಖ ರಸ್ತೆಗಳಲ್ಲಿ ಅಷ್ಟಾಗಿ ಕಂಡುಬರಲಿಲ್ಲ.
ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ: ಬೆಂಗಳೂರಲ್ಲಿ ಮಳೆ ತುಸು ಬಿಡುವು ನೀಡಿರುವುದು ನಿಜ. ಆದರೆ, ಬೆಂಗಳೂರಿನ ಬಹುತೇಕ ಭಾಗದಲ್ಲಿ ಗುರುವಾರವೂ ದಟ್ಟ ಮೋಡ ಕವಿದ ವಾತಾವರಣ ಇದೆ. ಹೀಗಾಗಿ, ಯಾವಾಗ ಬೇಕಾದರೂ ನಗರದಲ್ಲಿ ಮಳೆಯಾಗಬಹುದು ಎನ್ನುವ ವಾತಾವರಣ ಇದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಗುರುವಾರವೂ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಒಟ್ಟಾರೆ ಗುರುವಾರ ಬೆಳಿಗ್ಗೆ ಫೀಕ್ ಅವರ್ (ದಟ್ಟಣೆಯ ಅವಧಿ)ನಲ್ಲೂ ಟ್ರಾಫಿಕ್ ಇಲ್ಲದೆ ರಸ್ತೆಗಳು ಖಾಲಿಯಾಗಿದ್ದು, ಅಚ್ಚರಿ ಮೂಡಿಸಿದೆ.
ಹಲವು ದಿನಗಳ ನಂತರ ಬೆಂಗಳೂರು ರಸ್ತೆಗಳಲ್ಲಿ ವಿರಳ ಸಂಚಾರ ಕಂಡುಬಂದಿದ್ದು, ಟ್ರಾಫಿಕ್ ಸಿಗ್ನಲ್ಗಳು ಸಹ ಬೇಗ ಬಿಡ್ತಿದ್ವು. ಕೆಲವೊಂದು ರಸ್ತೆಗಳಲ್ಲಿ ಎರೆಡೆರು ಸಿಗ್ನಲ್ಗಳಲ್ಲೂ ಗ್ರೀನ್ ಸಿಗ್ನಲ್ಗಳು ಸಿಕ್ಕಿದ್ದು ನೋಡಿ ವಾಹನ ಸವಾರರು ಒಳಗೊಳಗೆ ಖುಷಿಯಾಗಿದ್ದರು.
-
Bengaluru Weather: ಬೆಂಗಳೂರಲ್ಲಿ ಬೇಸಿಗೆ ಆರಂಭದಲ್ಲೇ 40 ಡಿಗ್ರಿಯತ್ತ ತಾಪಮಾನ: ಉರಿ ಬಿಸಿಲು, ಸೆಕೆಯಿಂದ ಹೈರಾಣಾದ ಜನ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು












Click it and Unblock the Notifications