Bengaluru: ಬೇಸಿಗೆಯ ಬಿಸಿಲಿನೊಂದಿಗೆ ಹೆಚ್ಚಾದ ಸೊಳ್ಳೆಗಳು- ಚಿಂತೆಗೀಡಾದ ಜನ
ಬೆಂಗಳೂರು ಏಪ್ರಿಲ್ 8: ಬೆಂಗಳೂರಿನಲ್ಲಿ ಬೇಸಿಗೆ ಬಿಸಿಲು ಹೆಚ್ಚಾಗುತ್ತಿದೆ. ಇದರೊಂದಿಗೆ ಸೊಳ್ಳೆಗಳು ಕೂಡ ಅಧಿಕವಾಗಿದ್ದು ನಿವಾಸಿಗಳು ಕಂಗಾಲಾಗಿದ್ದಾರೆ. ಕಳೆದ ಕೆಲವು ವಾರಗಳಿಂದ ಹೊರವರ್ತುಲ ರಸ್ತೆಯ ಕೋರ್ ಪ್ರದೇಶಗಳು ಮತ್ತು ಹೊರವಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ಸೊಳ್ಳೆಗಳು ಲಕ್ಷಾಂತರ ನಿವಾಸಿಗಳನ್ನು ಕೊರಗುವಂತೆ ಮಾಡಿವೆ. ಹೀಗಾಗಿ ಹಲವಾರು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಆತಂಕಕ್ಕೊಳಗಾಗಿವೆ.
ಮಾನ್ಸೂನ್ ತಿಂಗಳುಗಳ ಮುಂಚೆ ಸೊಳ್ಳೆಗಳು ಹೆಚ್ಚಾಗುವುದು ಸಾಮಾನ್ಯ ವಿದ್ಯಮಾನವಾಗಿದ್ದರೂ, ಈ ಬಾರಿ ನಿರೀಕ್ಷೆಗಿಂತ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್ಗುನ್ಯಾದಂತಹ ರೋಗಗಳು ಹರಡುವ ಸಾಧ್ಯತೆ ಇದೆ. ಇದರಿಂದ ಅನೇಕ ನಾಗರಿಕರನ್ನು ಚಿಂತೆಗೀಡಾಗಿದ್ದಾರೆ.

ಸೊಳ್ಳೆಗಳ ಹಠಾತ್ ಉಲ್ಬಣಕ್ಕೆ ಕಾರಣವೇನು?
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ (IIHR) ಮತ್ತು ಇತರ ಸಂಸ್ಥೆಗಳ ಕೀಟಶಾಸ್ತ್ರಜ್ಞರು ಬೆಂಗಳೂರು ಮತ್ತು ಸುತ್ತಮುತ್ತಲಿನ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು ಇದಕ್ಕೆ ಕಾರಣವೆಂದು ಹೇಳಿದ್ದಾರೆ.
ನಗರ ಮತ್ತು ಅಕ್ಕಪಕ್ಕದ ಪ್ರದೇಶಗಳು ಸೊಳ್ಳೆಗಳ ಸಂತಾನೋತ್ಪತ್ತಿಗೆ ಪರಿಪೂರ್ಣ ಸ್ಥಳವಾಗಿ ಪರಿವರ್ತನೆಗೊಂಡಿವೆ. ಹಲವಾರು ಯೋಜನೆಗಳ ಅಡಿಯಲ್ಲಿ ನಗರದ ಒಳಗೆ ಮತ್ತು ಸುತ್ತಮುತ್ತಲಿನ ಕೆರೆಗಳನ್ನು ತುಂಬಿಸುವುದರಿಂದ ವಿವಿಧ ರೀತಿಯ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲು ಅನುಕೂಲವಾಗಿದೆ ಎನ್ನುತ್ತಾರೆ ಐಐಎಚ್ಆರ್ನ ಕೀಟಶಾಸ್ತ್ರಜ್ಞ ಡಾ ಎನ್ ಆರ್ ಪ್ರಸನ್ನ ಕುಮಾರ್.
ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಈ ಬಗ್ಗೆ ಮಾತನಾಡಿ, ಇದು ಬೆಂಗಳೂರು ಹೆಚ್ಚಾಗಿ ಸೊಳ್ಳೆಗಳ ಸಾಂದ್ರತೆಗೆ ಸಾಕ್ಷಿಯಾಗುವ ಕಾಲವಾಗಿದೆ ಎಂದು ಒಪ್ಪಿಕೊಂಡರು. "ಪ್ರಸ್ತುತ, ನಾವು ಇನ್ನೂ ಸಾಂದ್ರತೆಯನ್ನು ಅಂದಾಜು ಮಾಡಬೇಕಾಗಿದೆ ಮತ್ತು ನಮ್ಮ ವಾರ್ಡ್ ಅಧಿಕಾರಿಗಳು ಮೌಲ್ಯಮಾಪನವನ್ನು ನಡೆಸುತ್ತಿದ್ದಾರೆ. ಮೂಲೆ, ಪ್ಲಾಸ್ಟಿಕ್, ಕೊಳಕು ಪ್ರದೇಶ ತುಂಬಿರುವ ಜಲಮೂಲಗಳು ಸೊಳ್ಳೆಗಳು ಹೆಚ್ಚುತ್ತಿರುವುದಕ್ಕೆ ಕಾರಣವಾಗಿರಬಹುದು" ಎಂದು ಅವರು ಹೇಳಿದರು.

ಕಾಯಿಲೆ ಹರಡುವ ಆತಂಕದಲ್ಲಿ ಜನ
ಈ ಬಗ್ಗೆ ಮಾತನಾಡಿದ ನಾಗವಾರದ ನಿವಾಸಿ, ಸ್ಥಳೀಯ ಆರ್ಡಬ್ಲ್ಯುಎ ಸದಸ್ಯ ಆನಂದನ್ ಎಸ್, "ಸಂಜೆ ಸೊಳ್ಳೆಗಳ ಕಾಟ, ಹಗಲಿನಲ್ಲಿಯೂ ಅದು ಸಾಮಾನ್ಯವಾಗಿದೆ. ಖಾಲಿ ನಿವೇಶನಗಳು, ಚರಂಡಿಗಳು ಮತ್ತು ಬಿಬಿಎಂಪಿ ಉದ್ಯಾನವನಗಳಲ್ಲಿ ಸೊಳ್ಳೆ ಹೆಚ್ಚಾಗಿದೆ. ಅಪಾರ್ಟ್ಮೆಂಟ್ಗಳ ಬೇಸ್ಮೆಂಟ್ಗಳು, ಗ್ಯಾರೇಜ್ ಪ್ರದೇಶಗಳು ಮತ್ತು ಕತ್ತಲ ಪ್ರದೇಶಗಳು ಸೊಳ್ಳೆಗಳಿಂದ ತುಂಬಿ ತುಳುಕುತ್ತಿವೆ'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ಸಾಮಾನ್ಯವಾಗಿ ನವೆಂಬರ್ ಆರಂಭದವರೆಗೆ ಮಳೆಯಾಗುತ್ತದೆ ಮತ್ತು ಮೂರು ತಿಂಗಳ ಚಳಿಗಾಲದ ನಂತರ ತಾಪಮಾನವು ಏರುತ್ತದೆ. ಆದರೆ ಕಳೆದೆರಡು ವರ್ಷಗಳಿಂದ ನಗರದಲ್ಲಿ ಡಿಸೆಂಬರ್ ವರೆಗೆ ಮಳೆ ಬೀಳುತ್ತದೆ. ಇದರಿಂದ ಕೆರೆಗಳು ತುಂಬಿ ತುಳುಕಿದವು. ಮಳೆಯ ನಂತರ ತಕ್ಷಣವೇ ತೇವಾಂಶದ ಮಟ್ಟವು ಹೆಚ್ಚಿದೆ. ಇದು ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲಕರವಾಗಿದೆ. ಸಾಮಾನ್ಯವಾಗಿ ಸೊಳ್ಳೆಗಳು ಮೊಟ್ಟೆಯಿಂದ ಇಮಾಗೊ ಮಟ್ಟಕ್ಕೆ 26 ಡಿಗ್ರಿ ಸೆಲ್ಸಿಯಸ್ನಿಂದ 30 ಡಿಗ್ರಿಗಳಿಗೆ ಸಂತಾನೋತ್ಪತ್ತಿ ಮಾಡಲು 10-14 ದಿನಗಳನ್ನು ತೆಗೆದುಕೊಳ್ಳುತ್ತಿದ್ದರೆ, 32 ಡಿಗ್ರಿ ಮತ್ತು 35 ಡಿಗ್ರಿಗಳ ನಡುವಿನ ತಾಪಮಾನದಲ್ಲಿ ಬದಲಾವಣೆಯಾಗಿದೆ. ಸಂತಾನೋತ್ಪತ್ತಿ ಅವಧಿಯನ್ನು 8-10 ದಿನಗಳವರೆಗೆ ಕಡಿಮೆಗೊಳಿಸಿದೆ'' ಎಂದು ಪ್ರಸನ್ನ ಕುಮಾರ್ ಮಾತನಾಡಿ ಹೇಳಿದರು.

ಕನಕಪುರ ರಸ್ತೆ ಅಪಾರ್ಟ್ಮೆಂಟ್ಗಳ ಸಂಘದ ಚೇಂಜ್ ಮೇಕರ್ಸ್ನ ಸಂಚಾಲಕ ಅಬ್ದುಲ್ ಅಲೀಂ ಮಾತನಾಡಿ, ನಮ್ಮ ವಾರ್ಡ್ ಸಮಿತಿ ಸಭೆಗಳಲ್ಲಿ ಸೊಳ್ಳೆಗಳ ಕಾಟವೇ ಪ್ರಮುಖ ಅಜೆಂಡಾವಾಗಿದ್ದು, ಹೊರ ವಾರ್ಡ್ಗಳಿಗೆ ಹೊಗೆ ಅಥವಾ ಔಷಧಿ ಹಾಕುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ದೂರಿದೆ.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ -
ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ











Click it and Unblock the Notifications