ಸಂಕಷ್ಟದ ನಡುವೆ ಸಂತೋಷದ ದಿನ ನೆನೆದ ಸದಾನಂದ ಗೌಡ

ಬೆಂಗಳೂರು, ಮೇ 23: ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಕೊರೊನಾ ಸಂಕಷ್ಟದ ನಡುವೆ ಸಂತೋಷದ ದಿನದ ನೆನಪನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Recommended Video

      ಅವನಿಗೆ ಇರೋ ಅಷ್ಟು ಬುದ್ಧಿ ನನಗಿಲ್ಲ ಎಂದ GT DeveGowda

      ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಲೋಕಸಭೆ ಚುನಾವಣೆ ನಡೆದಿತ್ತು. ಬಿಜೆಪಿ ಮತ್ತೆ ತನ್ನ ವಿಜಯ ಪತಾಕೆ ಹರಿಸಿತ್ತು. ಈ ಸಂಭ್ರಮದ ಕ್ಷಣವನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸದಾನಂದ ಗೌಡ ನೆನೆದಿದ್ದಾರೆ.

      Minister Sadananda Gowda Shared His Sweet Memory Of Lok Sabha Election 2019

      ''ಕಳೆದ ವರ್ಷ ಇದೇ ದಿನ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿತ್ತು. ಎಲ್ಲಡೆ ಕೇಸರಿ ಗುಲಾಬಿ ಚೆಲ್ಲಿತ್ತು. ಕಾರ್ಯಕರ್ತ ಮಿತ್ರರೆ, ಮತದಾರ ಬಂಧುಗಳೆ ಅಂದು ನೀವೆಲ್ಲ ಸೇರಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಚಂಡ ಬಹುಮತದಿಂದ ನನ್ನನ್ನು ಮರು ಆಯ್ಕೆ ಮಾಡಿದ್ದೀರಿ. ಎಂದೆಂದಿಗೂ ನಿಮಗೆ ನಾನು ಋಣಿ'' ಎಂದು ಸದಾನಂದ ಗೌಡ ಸಂತಸ ಹಂಚಿಕೊಂಡಿದ್ದಾರೆ.

      ''ನಾನೇನಾದರೂ ರಾಜ್ಯಕ್ಕೆ, ದೇಶಕ್ಕೆ ಅಲ್ಪಸ್ವಲ್ಪ ಸೇವೆ ಮಾಡಲು ಸಾಧ್ಯವಾಗಿದ್ದರೆ ಅದಕ್ಕೆ ನಿಮ್ಮ ಆಶೀರ್ವಾದವೇ ಕಾರಣ. ನಿಮ್ಮ ಪ್ರೀತಿ, ಬೆಂಬಲ ಹಾಗೆಯೇ ಇರಲಿ. ನಿಮ್ಮ ಸಲಹೆ ಸೂಚನೆಗೆ ಯಾವತ್ತೂ ಸ್ವಾಗತ. ನಿಮ್ಮ ನಿರೀಕ್ಷೆಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಎಲ್ಲವೂ ಒಳಿತಾಗಲಿ'' ಎಂದು ಟ್ವೀಟ್ ಮಾಡಿದ್ದಾರೆ.

      ಕಳೆದ ವರ್ಷ ಸದಾನಂದ ಗೌಡ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ವಿಜಯ ಸಾಧಿಸಿದ್ದರು. ಸದ್ಯ, ರಾಸಾಯನಿಕ ಹಾಗೂ ರಸಗೊಬ್ಬರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+