ವಿಚಾರಣೆ ವೇಳೆ ಮಸಾಲೆ ದೋಸೆ, ಕರಬೂಜ ಬೇಡಿಕೆಯಿಟ್ಟ ಯಾಸಿನ್
ಭಯೋತ್ಪಾದಕರು ಮಾಹಿತಿಯನ್ನು ನೀಡುವಾಗ ಸತ್ಯದಲ್ಲಿ ಸುಳ್ಳನ್ನು, ಸುಳ್ಳಿನಲ್ಲಿ ಸತ್ಯವನ್ನು ತುಂಬಿಸಿ ಹೇಳುವುದು ಉಗ್ರರು ಸಾಂಪ್ರದಾಯಿಕವಾಗಿ ಮಾಡುವ ತಂತ್ರ ಅದರೊಂದೆಗೆ ಯಾಸೀನ್ ಭಟ್ಕಳ್ ಬಾಯಿರುಚಿಯ ಬೇಡಿಕೆ ಇಟ್ಟಿರುವುದು ವಿಶೇಷ.
ಬೆಂಗಳೂರು, ಡಿಸೆಂಬರ್ 15: 2013ರಲ್ಲಿ ದಿಲ್ ಕುಶ್ ನಗರದ ಬ್ಲಾಸ್ಟ್ ಸಂಬಂಧಿಸಿದಂತೆ ಅನೇಕ ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಇಂಡಿಯನ್ ಮುಜಾಯುದ್ದೀನ್ ಮುಖ್ಯಸ್ಥ ಯಾಸಿನ್ ಭಟ್ಕಳ್ ವಿಚಾರಣೆಯ ವೇಳೆ ಜೈಲಿನಲ್ಲಿ ಕರಬೂಜ, ಮಸಾಲೆದೋಸೆ ಬೇಡಿಕೆ ಇಟ್ಟು ತನಿಖೆ ನಡೆಸುವವರನ್ನು ಸತಾಯಿಸಿರುವ ವಿಷಯ ಬಹಿರಂಗವಾಗಿದೆ.
ಅನೇಕ ರಾಷ್ಟ್ರದ್ರೋಹಿ ಚುಟುವಟಿಕೆಯಲ್ಲಿ ಭಾಗಿಯಾಗಿದ್ದ ಯಾಸಿನ್ ಭಟ್ಕಳ್ ಯಾವಾಗಲು ಮಾಹಿತಿಯನ್ನು ಹೊರಹಾಕಲು ಯಾವುದಾದರೊಂದು ಬೇಡಿಕೆಯನ್ನು ಇಡುತ್ತಿದ್ದ ಅವರನ್ನು ವಿಚಾರಣಾ ಸ್ಥಳದಲ್ಲಿದ್ದ ಬೆಂಗಳೂರಿನ ಅಧಿಕಾರಿಯೊಬ್ಬರು ತಿಳಿಸಿದರು.[ಭಟ್ಕಳದ ಯಾಸಿನ್ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿ ಬೆಳೆದ ಬಗೆ]

ತನಿಖೆ ವೇಳೆ ಮೊದಲು ಪ್ರಶ್ನೆ ಕೇಳಿದರೆ ಸರಿಯಾಗಿ ಸಹಕರಿಸುತ್ತಿರಲಿಲ್ಲ ಅದರೆ ನಂತರ ಒಂದೊಂದು ಪ್ರಶ್ನೆಗೆ ಒಂದೊಂದು ಬೇಡಿಕೆಗಳನ್ನು ಇಡುತ್ತಿದ್ದ, ಮೊದಲು ಮಸಾಲೆ ದೋಸೆ ಎಂದು ಕೇಳಿದರೆ ಮತ್ತೊಂದು ವೇಳೆ ಕರಬೂಜ ಹಣ್ಣನ್ನು ಮತ್ತೆ ಕೆಲವು ವೇಳೆ ನನಗೆ ನಿಮ್ಮ ಬಳಿ ಮಾತನಾಡಲು ಮೂಡ್ ಇಲ್ಲ ಎಂದು ಹೇಳುತ್ತಿದ್ದ ಎಂದು ಅವರು ತಿಳಿಸಿದರು.[ಹೈದರಾಬಾದ್ ಸ್ಫೋಟ: ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಅಪರಾಧಿ]
ಅಲ್ಲದೆ ಯಾಸೀನ್ ಕೇಳಿದ ಬೇಡಿಕೆಗಳನ್ನು ಈಡೇರಿಸಿದ್ದು, ನನಗೆ ಈಗ ನಿದ್ದೆ ಬರುತ್ತಿದೆ ಎಂದು ತನಿಖೆ ವೇಳೆ ವಿಚಾರಣೆ ಮಾಡುವವರಿಗೆ ಸತಾಯಿಸಿದ್ದಾನೆ ಎಂದರು. ಯಾವುದೇ ವಿಚಾರಣೆಯಲ್ಲಿ ಮಾಹಿತಿ ನೀಡುವ ವ್ಯಕ್ತಿ ಖಚಿತ ಮಾಹಿತಿಯನ್ನು ನೀಡುತ್ತಾನೋ ಇಲ್ಲವೋ ಎಂಬುದರ ಪೂರ್ವಾಲೋಚನೆ ತನಿಖಾತಂಡಕ್ಕೆ ಇರುತ್ತದೆ ಆದರೆ ಯಾಸೀನ್ ವಿಚಿತ್ರ ರೀತಿಯಲ್ಲಿ ಬೇಡಿಕೆಯನ್ನು ಇಟ್ಟು ತಂತ್ರಗಾರಿಕೆ ಮಾಡಿ ಅನೇಕ ಸುಳಿವು, ಕೆಲವೊಂದು ವಿಷಯಗಳನ್ನು ತಿಳಿಸಿರುವುದಾಗಿ ಅವರು ಹೇಳಿದರು.
ಕರ್ನಾಟಕದ ಹೈಕೋರ್ಟ್ ಮೇಲೆಯೂ ಬಾಂಬ್ ದಾಳಿ ನಡೆಸುವ ಪ್ಲಾನ್ ಮಾಡಲಾಗಿತ್ತು ಎಂಬ ಮಾಹಿತಿಯನ್ನು ಹೊರಹಾಕಿದ್ದು, ಯಾಸಿನ್ ಅರ್ಧ ಸುಳ್ಳು ಮತ್ತು ಅರ್ಧ ಸತ್ಯ ಹೀಗೆ ಹೇಳಿ ವಿಚಾರಕರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾನೆ ಎಂದರು. ಇದು ಭಯೋತ್ಪಾದಕರು ಮಾಡುವ ಸಾಂಪ್ರದಾಯಿಕ ತಂತ್ರಗಾರಿಕೆಯಾಗಿದ್ದು, ಸಾಮಾನ್ಯ ಸತ್ಯದಲ್ಲಿ ಸುಳ್ಳನ್ನು ಸೇರಿಸಿ ಪೊಲೀಸರಿಗೆ ದಿಕ್ಕು ತಪ್ಪಿಸುವ ಹುನ್ನಾರ ಎಂದು ಅಧಿಕಾರಿ ಬಣ್ಣಿಸಿದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications