ಶಾಪಿಂಗ್ ಪ್ರಿಯರಿಗೆ ಸಿಹಿ ಸುದ್ದಿ: ಮಂತ್ರಿ ಮಾಲ್ ಪುನರಾರಂಭ
ಕಳೆದ ತಿಂಗಳ 16ರಂದು ಮಾಲ್ ನ ಹಿಂಬದಿಯ ಗೋಡೆ ಉರುಳಿದ್ದರಿಂದಾಗಿ ಮಾಲ್ ಅನ್ನು ಮುಚ್ಚಲಾಗಿತ್ತು. ಇದೀಗ, ಕೆಲವಾರು ಷರತ್ತುಗಳನ್ವಯ ಮಾಲ್ ಪುನರಾರಂಭಿಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು, ಫೆಬ್ರವರಿ 25: ಹಿಂಬದಿಯ ಗೋಡೆ ಕುಸಿತದ ಕಾರಣದಿಂದಾಗಿ ಕೆಲ ದಿನಗಳಿಂದ ಮುಚ್ಚಿದ್ದ ಮಂತ್ರಿ ಮಾಲ್ ಶುಕ್ರವಾರ ಪುನರಾರಂಭಗೊಂಡಿದೆ.
ಕಳೆದ ತಿಂಗಳ 16ರಂದು ಮಾಲ್ ನ ಹಿಂಬದಿಯ ಗೋಡೆಯೊಂದು ಕುಸಿದುಬಿದ್ದು, ಲಕ್ಷ್ಮಮ್ಮ ಎಂಬ ಮಾಲ್ ನ ಹೌಸ್ ಕೀಪಿಂಗ್ ಸಿಬ್ಬಂದಿ ಗಾಯಗೊಂಡಿದ್ದರು. ಅಂದಿನಿಂದ ಭದ್ರತೆಯ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಮಾಲ್ ಮುಚ್ಚುವಂತೆ ಆದೇಶ ನೀಡಿತ್ತು.[ಬೆಂಗಳೂರು ಮಂತ್ರಿ ಮಾಲ್ ನಲ್ಲಿ ಗೋಡೆ ಕುಸಿತ: ಕೆಲವರಿಗೆ ಗಾಯ]

ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಮಂತ್ರಿ ಮಾಲ್ ಪುನರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಸಂಪರ್ಕಿಸಿದ ಒನ್ ಇಂಡಿಯಾಕ್ಕೆ ವಿವರಣೆ ನೀಡಿರುವ ಮಾಲ್ ನ ಸಿಬ್ಬಂದಿ, ''ಶನಿವಾರ ಸಂಜೆ ಮಾಲ್ ಆರಂಭವಾಗಿದ್ದು, ಎಂದಿನಂತೆ ಮುಂದೆಯೂ ಕಾರ್ಯ ನಿರ್ವಹಿಸಲಿದೆ. ಶನಿವಾರ ಮಾಲ್ ನಲ್ಲಿರುವ ಸುಮಾರು ಅರ್ಧಕ್ಕರ್ಧ ಮಳಿಗೆಗಳು ಮಾತ್ರ ತೆರೆದಿವೆ. ಭಾನುವಾರದಿಂದ (ಫೆ. 26) ಎಲ್ಲಾ ಮಳಿಗೆಗಳೂ ಎಂದಿನಂತೆ ಕಾರ್ಯಾರಂಭ ಮಾಡಲಿವೆ'' ಎಂದು ಹೇಳಿದ್ದಾರೆ.
ಹಲವಾರು ಶಾಪಿಂಗ್ ಪ್ರಿಯರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಯುವ ಪ್ರೇಮಿಗಳಿಗೆ ಟೈಮ್ ಪಾಸ್ ಮಾಡುವ ಅತ್ಯುತ್ತಮ ತಾಣವೆಂದೇ ಪರಿಗಣಿಸಲ್ಪಟ್ಟಿರುವ ಮಂತ್ರಿ ಮಾಲ್ ಬಂದ್ ಆಗಿದ್ದು ಹಲವರಲ್ಲಿ ಬೇಸರ ತರಿಸಿದ್ದೂ ಉಂಟು. ಅಲ್ಲದೆ, ಅಲ್ಲಿನ ಶಾಪ್ ಮಾಲೀಕರು ವ್ಯಾಪಾರವಿಲ್ಲದೆ ಕೊಂಚ ಕಷ್ಟಪಟ್ಟಿದ್ದೂ ಉಂಟು.
ಈಗ, ಈ ಮಾಲ್ ಆರಂಭವಾಗಿದ್ದು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ












Click it and Unblock the Notifications