ಯಜ್ಞ, ಪಕ್ಷಕ್ಕಾಗಿ ಅಲ್ಲ ಗೋವಿಗಾಗಿ: ಸಿದ್ದಾರ್ಥ್ ಗೋಯೆಂಕಾ
Recommended Video

ಬೆಂಗಳೂರು, ಫೆಬ್ರವರಿ 02: ಗೋ ಹತ್ಯೆ ತಡೆ ಹಾಗೂ ಗೋವಿನಿಂದಾಗುವ ವಿವಿಧ ಉಪಯೋಗಗಳ ಕುರಿತು ಜಾಗೃತಿ ಮೂಡಿಸಲು ಬಿಜೆಪಿಯ ಗೋ ಸಂರಕ್ಷಣಾ ಪ್ರಕಾಷ್ಠದ ವತಿಯಿಂದ ಜೆ.ಪಿ.ನಗರದ ಪುಟ್ಟೇನಹಳ್ಳಿಯಸತ್ಯ ಗಣಪತಿ ದೇವಾಲಯ ಮೈದಾನದಲ್ಲಿ 'ಗೋ ಸಂರಕ್ಷಣಾ ಅಷ್ಟಯಾಮ ಮಹಾಯಜ್ಞ' ಆಯೋಜಿಸಲಾಗಿದೆ.
24 ಗಂಟೆ ಸತತವಾಗಿ ಯಜ್ಞ ನಡೆಯಲಿದ್ದು ನಾಳೆ ಬಿಜೆಪಿಯ ರಾಜ್ಯನಾಯಕರುಗಳು ಯಜ್ಞದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಪುರೋಹಿತರ ತಂಡ ಯಜ್ಞವನ್ನು ನಡೆಸಿಕೊಡುತಿದ್ದು, ಹೋಮ ಈಗಾಗಲೇ ಪ್ರಾರಂಭವಾಗಿದೆ. ಅದರ ಜೊತೆಗೆ ಸತ್ಯನಾರಾಯಣ ಸ್ವಾಮಿ ಪೂಜೆಯನ್ನೂ ಮಾಡಲಾಗುತ್ತಿದೆ. ಜೊತೆಗೆ ಭಜನೆ ಸಹ ಆಯೋಜಿಸಲಾಗಿದೆ.
ಯಜ್ಞದ ಪ್ರಮುಖ ಆಯೋಜಕ ಬಿಜೆಪಿ ಗೋ ಸಂರಕ್ಷಣಾ ಪ್ರಕಾಷ್ಠದ ಅಧ್ಯಕ್ಷ ಸಿದ್ದಾರ್ಥ್ ಗೋಯೆಂಕಾ ಮಾತನಾಡಿ 'ಗೋವು ನಮ್ಮ ಸಂಸ್ಕೃತಿಯ ಪ್ರಮುಖ ಭಾಗ. ಅದನ್ನು ಉಳಿಸುವುದು ನಮ್ಮ ಹೊಣೆ, ಗೋವಿನ ಜೀವದ ಮೇಲೆ ಆಗುತ್ತಿರುವ ನಿರಂತರ ದಬ್ಬಾಳಿಕೆ ವಿರುದ್ಧ ಈ ಮಹಾಯಜ್ಞವನ್ನು ಆಯೋಜಿಸಲಾಗಿದೆ ಎಂದರು.

ಪ್ರತಿದಿನ ಉಲ್ಲಂಘನೆ
1964 ರಲ್ಲಿ ಕರ್ನಾಟಕದಲ್ಲಿ ಗೋವು ಹತ್ಯೆ ತಡೆಗೆಂದು ವಿಧೇಯಕವೊಂದನ್ನು ತರಲಾಯಿತು ಆದರೆ ಆ ವಿಧೇಯಕ ಕೇವಲ ಮೂಲೆಗುಂಪಾಗಿದೆ. ಕಾಯ್ದೆಗೆ ಅನುಗುಣವಾಗಿ ಯಾವುದೂ ನಡೆಯುತ್ತಿಲ್ಲ, ಕಾಯ್ದೆಯನ್ನು ಕಾಪಾಡಬೇಕಾದವರೆ ಮುರಿಯುತ್ತಿದ್ದಾರೆ ಎಂದು ಯಜ್ಞದ ಪ್ರಮುಖ ಆಯೋಜಕ ಗೋ ಸಂರಕ್ಷಣಾ ಪ್ರಕಾಷ್ಠದ ಅಧ್ಯಕ್ಷ ಸಿದ್ದಾರ್ಥ್ ಗೋಯೆಂಕಾ ಹೇಳಿದರು.

ಅಕ್ರಮ ಕಸಾಯಿ ಖಾನೆಯಿಂದ ಪರಿಸರಕ್ಕೂ ಹಾನಿ
ಬೆಂಗಳೂರೊಂದರಲ್ಲೇ 200-300 ಅಕ್ರಮ ಕಸಾಯಿ ಖಾನೆ ಇವೆ. ಅಕ್ರಮವಾಗಿ, ಅವೈಜ್ಞಾನಿಕವಾಗಿ, ಕಾನೂನಿನ ವಿರುದ್ಧವಾಗಿ ಹಸುಗಳನ್ನು ಕೊಲ್ಲುವ ಈ ಕಸಾಯಿ ಖಾನೆಗಳು ಅಳಿದುಳಿದ ಭಾಗಗಳನ್ನು, ಗೋವಿನ ತ್ಯಾಜ್ಯವನ್ನು ಜಲ ಮೂಲಗಳಿಗೆ ಸೇರಿಸುವ ಮೂಲಕ ಪರಿಸರವನ್ನೂ ಹಾಳು ಮಾಡುತ್ತಿದ್ದಾರೆ ಎಂದರು.

ಅನಂಕುರ್ ಹೆಗಡೆ, ಸಿಟಿ ರವಿ ಕೂಡ ಭಾಗಿ
ನಾಳೆ ಯಾಗದ ಅಂತಿಮ ಘಟ್ಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ, ಸಂಸದ ಅನಂತಕುಮಾರ ಹೆಗಡೆ, ಶಾಸಕ ಸಿಟಿ ರವಿ, ಅಶೋಕ್ ಮುಂತಾದ ಪ್ರಮುಖ ಬಿಜೆಪಿ ನಾಯಕರು ಆಗಮಿಸಲಿದ್ದಾರೆ. ಯಾಗದ ನಂತರ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.

ಮೋದಿ ಆಗನಕ್ಕೂ ಇದಕ್ಕೂ ಸಂಬಂಧ ಇಲ್ಲ
ಬಿಜಪಿ ಗೋ ಸಂರಕ್ಷಣಾ ಪ್ರಕಾಷ್ಠವೇ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರೂ ಕೂಡ ಪಕ್ಷಕ್ಕೂ ಯಾಗಕ್ಕೂ ಸಂಬಂಧವಿಲ್ಲ ಎಂದು ಸಿದ್ದಾರ್ಥ್ ಗೋಯೆಂಕಾ ಹೇಳಿದರು. ಇದು ಸಾರ್ವಜನಿಕ ಕಾರ್ಯಕ್ರಮ ಪಕ್ಷದ ಕಾರ್ಯಕ್ರಮ ಅಲ್ಲ ಎಂದ ಅವರು ಇದು ಗೋವಿನ ಉಳಿವಿಗಾಗಿ ಮಾಡುತ್ತಿರುವ ಕಾರ್ಯಕ್ರಮ ಎಂದರು.

ನಾಳೆ ಬಹಿರಂಗ
ಆಯೋಜಕರೂ ಏನೇ ಹೇಳಿದರು ಕಾರ್ಯಕ್ರಮದ ಹಿಂದೆ ಚುನಾವಣೆ ಉದ್ದೇಶ ಇರುವುದು ಎಂತಹವರಿಗೂ ಸುಲಭಕ್ಕೆ ತಿಳಿಯುವ ವಿಷಯವೇ ಆಗಿದೆ. ನಾಳೆ ಯಡಿಯೂರಪ್ಪ ಸೇರಿ ಬಿಜೆಪಿ ನಾಯಕರು ವೇದಿಕೆಯಲ್ಲಿ ಭಾಷಣಕ್ಕೆ ನಿಂತಾಗ ಈ ವಿಷಯ ಬಹಿರಂಗ ವಾಗಲಿದೆ. ಬಿಜೆಪಿಯು ಗೋ ವಿಷಯ ಆಧರಿಸಿ ಮತ ಕೇಳುವ ಮಾಮೂಲಿ ಪರಿಪಾಠದ ಹೊಸ ಉದಾಹರಣೆ ಈ ಯಾಗ ಎನ್ನಲಾಗುತ್ತಿದೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
By Election: ಒಬ್ಬರಿಂದ ಪಕ್ಷ ಗೆಲ್ಲಲ್ಲ, ಇದು ಕಾಂಗ್ರೆಸ್ ಸಿದ್ಧಾಂತಕ್ಕೆ ಸಿಗುವ ಜಯ: ಸಲೀಂ ಅಹ್ಮದ್ ಟಾಂಗ್ ಕೊಟ್ಟಿದ್ಯಾರಿಗೆ? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ












Click it and Unblock the Notifications