ಸ್ಮಶಾನದಲ್ಲಿ ಶಿವರಾತ್ರಿ ಆಚರಿಸುತ್ತಿರುವ ಯುವಾ ಬ್ರಿಗೆಡ್
ಬೆಂಗಳೂರು, ಫೆಬ್ರವರಿ 13: ದೇಶದಾದ್ಯಂತ ಇಂದು(ಫೆ.13) ಮಹಾ ಶಿವರಾತ್ರಿಯ ಸಂಭ್ರಮ ಮನೆ ಮಾಡಿದೆ. ಮಸಣವಾಸಿಯಾದ ಶಿವನನ್ನು ಆರಾಧಿಸಲು ಯುವಾ ಬ್ರಿಗೇಡ್ ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.
ಫೆ.13 ಮಂಗಳವಾರದಂದು ರಾಜಾಜಿನಗರದ ಹರಿಶ್ಚಂದ್ರ ಘಾಟ್ ಸ್ಮಶಾನದಲ್ಲಿ ಅಪರಾಹ್ನ 4 ಗಂಟೆಗೆ 'ವೀರಬಾಹು' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಖರ ವಾಗ್ಮಿ, ಯುವಾ ಬ್ರಿಗೆಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಶಿವ ಸ್ಮಶಾನವಾಸಿ. ನಮ್ಮ ಬದುಕಿನ ಯಾತ್ರೆಯ ಆರಂಭಕ್ಕೆ ಅವನೇ ಕಾರಣ. ಹೀಗಾಗಿ ಅಂತ್ಯವು ಕೂಡ ಅವನೊಳಗೇ. ಹಾಗೆಂದೇ ಸ್ಮಶಾನ ಯಾತ್ರೆ ಅತ್ಯಂತ ಮಹತ್ವವಾದದ್ದು. ನಮ್ಮೊಳಗಿನ ಭಯವನ್ನು ತೆಗೆದುಹಾಕುವಂತದ್ದು. ಅದಕ್ಕೆಂದೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯುವಾ ಬ್ರಿಗೇಡ್ ತಿಳಿಸಿದೆ.

ಕಾರ್ಯಕ್ರಮದಲ್ಲಿ ಏನೆಲ್ಲ ಇರಲಿದೆ...?
* ಅಂದು ಬೆಳಿಗ್ಗೆ ಶಿವನ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಶಿವನ ಆರಾಧಕರಾದ್ದರಿಂದ ಅವರು ಗೋಭಕ್ತರು ಆಗಿರುತ್ತಾರೆ ಆ ಮಂದಿರಗಳ ಹೊರಗೆ ನಿಂತು ಗೋವನ್ನ ಉಳಿಸುವ ಅಭಯಾಕ್ಷರ ಸಹಿಸಂಗ್ರಹಿಸಿ ಯಾವೊಬ್ಬ ಶಿವಭಕ್ತನೂ ಗೋರಕ್ಷಣೆಯ ಸಂಕಲ್ಪದಿಂದ ಹೊರಗಿಲ್ಲದಂತೆ ಮಾಡುವುದು.
* ಸಂಜೆ ಸುಮಾರು ನಾಲ್ಕು ಗಂಟೆಯ ವೇಳೆಗೆ ಆಯ್ಕೆಮಾಡಿದ ಸ್ಮಶಾನದಲ್ಲಿ ಸ್ವಚ್ಛತಾ ಕಾರ್ಯ.
* ಸ್ವಚ್ಛತಾ ಕಾರ್ಯ ನಂತರ ಶಿವ ಪಟವನ್ನಿಟ್ಟು ಪೂಜೆ, ಭಜನೆ, ಸಾಧ್ಯವಾದರೆ ರುದ್ರಪಠಣದಂತ ಕಾರ್ಯಕ್ರಮ, ಉಪನ್ಯಾಸ, ವೀರಬಅಹುವಿಗೆ ನೃತ್ಯ, ಪ್ರಸಾದ ವಿತರಣೆ. ಪೂಜೆ ಮುಗಿಸಿ ಭಕ್ತರು ಮನೆಗೆ ಹೊರಡಬಹುದು. ಅಥವಾ ಯಾವುದಾದರು ಮಂದಿರದ ಹೊರಗೆ ಅಭಯಾಕ್ಷರದ ಸಂಗ್ರಹಕ್ಕೆ ನಿಲ್ಲಬಹುದು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications