Get Updates
Get notified of breaking news, exclusive insights, and must-see stories!

ಸ್ಮಶಾನದಲ್ಲಿ ಶಿವರಾತ್ರಿ ಆಚರಿಸುತ್ತಿರುವ ಯುವಾ ಬ್ರಿಗೆಡ್

ಬೆಂಗಳೂರು, ಫೆಬ್ರವರಿ 13: ದೇಶದಾದ್ಯಂತ ಇಂದು(ಫೆ.13) ಮಹಾ ಶಿವರಾತ್ರಿಯ ಸಂಭ್ರಮ ಮನೆ ಮಾಡಿದೆ. ಮಸಣವಾಸಿಯಾದ ಶಿವನನ್ನು ಆರಾಧಿಸಲು ಯುವಾ ಬ್ರಿಗೇಡ್ ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.

ಫೆ.13 ಮಂಗಳವಾರದಂದು ರಾಜಾಜಿನಗರದ ಹರಿಶ್ಚಂದ್ರ ಘಾಟ್ ಸ್ಮಶಾನದಲ್ಲಿ ಅಪರಾಹ್ನ 4 ಗಂಟೆಗೆ 'ವೀರಬಾಹು' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಖರ ವಾಗ್ಮಿ, ಯುವಾ ಬ್ರಿಗೆಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ.

Maha Shivaratri in cemetery: Yuva Brigade's different programme

ಶಿವ ಸ್ಮಶಾನವಾಸಿ. ನಮ್ಮ ಬದುಕಿನ ಯಾತ್ರೆಯ ಆರಂಭಕ್ಕೆ ಅವನೇ ಕಾರಣ. ಹೀಗಾಗಿ ಅಂತ್ಯವು ಕೂಡ ಅವನೊಳಗೇ. ಹಾಗೆಂದೇ ಸ್ಮಶಾನ ಯಾತ್ರೆ ಅತ್ಯಂತ ಮಹತ್ವವಾದದ್ದು. ನಮ್ಮೊಳಗಿನ ಭಯವನ್ನು ತೆಗೆದುಹಾಕುವಂತದ್ದು. ಅದಕ್ಕೆಂದೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯುವಾ ಬ್ರಿಗೇಡ್ ತಿಳಿಸಿದೆ.

Maha Shivaratri in cemetery: Yuva Brigade's different programme

ಕಾರ್ಯಕ್ರಮದಲ್ಲಿ ಏನೆಲ್ಲ ಇರಲಿದೆ...?

* ಅಂದು ಬೆಳಿಗ್ಗೆ ಶಿವನ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಶಿವನ ಆರಾಧಕರಾದ್ದರಿಂದ ಅವರು ಗೋಭಕ್ತರು ಆಗಿರುತ್ತಾರೆ ಆ ಮಂದಿರಗಳ ಹೊರಗೆ ನಿಂತು ಗೋವನ್ನ ಉಳಿಸುವ ಅಭಯಾಕ್ಷರ ಸಹಿಸಂಗ್ರಹಿಸಿ ಯಾವೊಬ್ಬ ಶಿವಭಕ್ತನೂ ಗೋರಕ್ಷಣೆಯ ಸಂಕಲ್ಪದಿಂದ ಹೊರಗಿಲ್ಲದಂತೆ ಮಾಡುವುದು.
* ಸಂಜೆ ಸುಮಾರು ನಾಲ್ಕು ಗಂಟೆಯ ವೇಳೆಗೆ ಆಯ್ಕೆಮಾಡಿದ ಸ್ಮಶಾನದಲ್ಲಿ ಸ್ವಚ್ಛತಾ ಕಾರ್ಯ.

* ಸ್ವಚ್ಛತಾ ಕಾರ್ಯ ನಂತರ ಶಿವ ಪಟವನ್ನಿಟ್ಟು ಪೂಜೆ, ಭಜನೆ, ಸಾಧ್ಯವಾದರೆ ರುದ್ರಪಠಣದಂತ ಕಾರ್ಯಕ್ರಮ, ಉಪನ್ಯಾಸ, ವೀರಬಅಹುವಿಗೆ ನೃತ್ಯ, ಪ್ರಸಾದ ವಿತರಣೆ. ಪೂಜೆ ಮುಗಿಸಿ ಭಕ್ತರು ಮನೆಗೆ ಹೊರಡಬಹುದು. ಅಥವಾ ಯಾವುದಾದರು ಮಂದಿರದ ಹೊರಗೆ ಅಭಯಾಕ್ಷರದ ಸಂಗ್ರಹಕ್ಕೆ ನಿಲ್ಲಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+