ಮಡಿಲ ನೂಲಿನ ಕೌದಿ & ಕಂಡಷ್ಟು ಬೆರಗಿದೆ ಪದ್ಯ ಪುಸ್ತಕಗಳ ಬಿಡುಗಡೆ
ಬೆಂಗಳೂರು, ಮಾ. 03: ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾಗಲು ಇಬ್ಬರು ಯುವ ಕವಿಗಳ ಪದ್ಯ ಪುಸ್ತಕಗಳು ಸಜ್ಜಾಗಿವೆ . "ಮಡಿಲ ನೂಲಿನ ಕೌದಿ" ಮತ್ತು " ಕಂಡಷ್ಟು ಬೆರಗಿದೆ" ಈ ಎರಡು ಕವನ ಸಂಕಲನಗಳು ಭಾನುವಾರ (ಮಾರ್ಚ್ 06) ಲೋಕಾರ್ಪಣೆಗೊಳ್ಳಲಿದೆ.
ಗೋರವಿ ಆಲ್ದೂರು (ಮಡಿಲ ನೂಲಿನ ಕೌದಿ ) ಮತ್ತು ಸತೀಶ್ ನಾಯ್ಕ ಭದ್ರಾವತಿ (ಕಂಡಷ್ಟು ಬೆರಗಿದೆ ) ಅವರ ಚೊಚ್ಚಲ ಸಂಕಲನಗಳನ್ನು ಕವಿ ಡಾ. ಎಚ್ ಎಸ್ ವೆಂಕಟೇಶ್ ಮೂರ್ತಿ ಯವರ ಅಧ್ಯಕ್ಷತೆಯಲ್ಲಿ, ಕವಯಿತ್ರಿ ಪ್ರತಿಭಾ ನಂದಕುಮಾರ್ ಮತ್ತು ಸಾಹಿತಿ, ಪತ್ರಕರ್ತ ಜೋಗಿ ಯವರ ಸಮ್ಮುಖದಲ್ಲಿ ನಾದಬ್ರಹ್ಮ ಹಂಸಲೇಖ ಅವರು ಬಿಡುಗಡೆ ಮಾಡಲಿದ್ದಾರೆ.

ಕವಿ ಪರಿಚಯ :
ಗೋರವಿ ಆಲ್ದೂರು : ಕನ್ನಡ ಚಿತ್ರರಂಗದಲ್ಲಿ ಸಹ ನಿರ್ದೇಶನ ಇವರ ವೃತ್ತಿಯಾಗಿದೆ. ಕವಿತೆ ಬರೆಯುವುದು ಇವರ ಪ್ರವೃತ್ತಿ. ಕನ್ನಡವನ್ನು, ಕನ್ನಡ ಸಾಹಿತ್ಯವನ್ನು, ಕಾವ್ಯವನ್ನು ಗೌರವಿಸುವ, ಪ್ರೀತಿಸುವ ಇವರು ಈ ಪುಸ್ತಕದ ಮೂಲಕ ಪ್ರಕಟಿತ ಕವಿಯಾಗುವ ನಿಟ್ಟಿನಲ್ಲಿ ಹೊರಟಿದ್ದಾರೆ.
ಸತೀಶ್ ನಾಯ್ಕ ಭದ್ರಾವತಿ : ಇವರು ಪ್ರಸ್ತುತ ಭಾರತದ ಪ್ರವಾಸಿ, ತಮಿಳುನಾಡಿನ ನಿವಾಸಿ ಮತ್ತು ಕನ್ನಡ ಕಾವ್ಯಕೃಷಿಯ ಹವ್ಯಾಸಿ. ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಸರ್ಕಾರಿ ಸಂಸ್ಥೆಯಲ್ಲಿ ವೃತ್ತಿಪರರಾಗಿರುವ ಇವರು ಕವಿತೆ ಬರೆಯುವುದರ ಮೂಲಕ ಕನ್ನಡ ಸಾಹಿತ್ಯ ಸೇವೆಯನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ.
ಇವರು ಕಂಡ ಬೆರಗಿನ ಪ್ರಪಂಚಕ್ಕೆ ಎಲ್ಲರನ್ನು ಪರಿಚಯಿಸುವ ಪ್ರಯತ್ನವನ್ನು ಈ ಸಂಕಲನದ ಮೂಲಕ ಮಾಡುವ ಉದ್ದೇಶ ಇವರದ್ದಾಗಿದೆ.

ಇದೇ ಭಾನುವಾರ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಂಡು ಇಬ್ಬರು ಯುವ ಕವಿಗಳನ್ನ ಪ್ರೋತ್ಸಾಹಿಸೋಣ ..
* ಗೋರವಿ ಆಲ್ದೂರು ( ಮಡಿಲ ನೂಲಿನ ಕೌದಿ )
* ಸತೀಶ್ ನಾಯ್ಕ ಭದ್ರಾವತಿ ( ಕಂಡಷ್ಟು ಬೆರಗಿದೆ )
ದಿನಾಂಕ : 06 / 03/2016
ಸಮಯ : ಬೆಳಗ್ಗೆ 9.30 ಕ್ಕೆ
ಸ್ಥಳ : ಸಮುಚ್ಛಯ ರಂಗಮಂದಿರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು
(ಒನ್ಇಂಡಿಯಾ ಕನ್ನಡ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications