ಬೆಂಗಳೂರು : ಮುಷ್ಕರ ವಾಪಸ್ ಪಡೆದ ಲಾರಿ ಮಾಲೀಕರು
ಬೆಂಗಳೂರು, ಜ.16 : ಬೆಂಗಳೂರು ನಗರದೊಳಗೆ ಬೆಳಗಿನ ಹೊತ್ತು ಲಾರಿಗಳ ಸಂಚಾರಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿ ಲಾರಿ ಮಾಲೀಕರ ಸಂಘ ನಡೆಸಬೇಕಿದ್ದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ. ಲಾರಿಗಳ ಸಂಚಾರಕ್ಕೆ ಅನುಮತಿ ನೀಡುವುದಾಗಿ ಪೊಲೀಸರು ಭರವಸೆ ನೀಡಿರುವ ಹಿನ್ನಲೆಯಲ್ಲಿ ಮುಷ್ಕರ ವಾಪಸ್ ಪಡೆಯಲಾಗಿದೆ.
ಬೆಂಗಳೂರಿನಲ್ಲಿ
ಈ
ಕುರಿತು
ಮಾಹಿತಿ
ನೀಡಿರುವ
ರಾಜ್ಯ
ಲಾರಿ
ಮಾಲೀಕರ
ಸಂಘದ
ಅಧ್ಯಕ್ಷ
ಜಿ.ಆರ್
ಷಣ್ಮುಗಪ್ಪ
ಅವರು,
ಜನವರಿ
16ರಿಂದ
ಲಾರಿ
ಮಾಲೀಕರು
ಮುಷ್ಕರ
ನಡೆಸಲು
ತೀರ್ಮಾನಿಸಿದ್ದರು.
ಆದರೆ,ಮುಷ್ಕರವನ್ನು
ವಾಪಸ್
ಪಡೆಯಲಾಗಿದೆ
ಎಂದು
ಹೇಳಿದ್ದಾರೆ.
[ಜ.16ರಿಂದ
ಬೆಂಗಳೂರಿನಲ್ಲಿ
ಲಾರಿ
ಮುಷ್ಕರ]
ಶುಕ್ರವಾರ ಹೆಚ್ಚುವರಿ ಪೊಲೀಸ್ ಆಯುಕ್ತರೊಂದಿಗೆ ಲಾರಿ ಮಾಲೀಕರು ಮತ್ತು ಏಜೆಂಟ್ಸ್ ಒಕ್ಕೂಟಗಳ ಸಂಘದ ಪದಾಧಿಕಾರಿಗಳು ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ನಗರ ಪ್ರದೇಶಿಸಲು ಲಾರಿಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಸಡಿಲಗೊಳಿಸಲು ಪೊಲೀಸರು ಒಪ್ಪಿಗೆ ನೀಡಿದ್ದಾರೆ. [ಲಾರಿಗಳು ಹಗಲು ಬೆಂಗಳೂರು ಪ್ರವೇಶಿಸುವಂತಿಲ್ಲ]
ಬೆಳಗ್ಗೆ 11 ರಿಂದ ಸಂಜೆ 4ರ ವರೆಗೆ ನಗರ ಪ್ರದೇಶಕ್ಕೆ ಲಾರಿಗಳು ಪ್ರವೇಶಿಸಲು ಅನುಮತಿ ನೀಡುವುದಾಗಿ ಪೊಲೀಸರು ಮಾಲೀಕರಿಗೆ ಭರವಸೆ ನೀಡಿದ್ದಾರೆ. ಆದ್ದರಿಂದ ಇಂದು ಮಧ್ಯರಾತ್ರಿಯಿಂದ ನಡೆಸಬೇಕಿದ್ದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ.
ಡಿ.22ರಂದು ಆದೇಶ ಹೊರಡಿಸಿದ್ದ ಬೆಂಗಳೂರು ನಗರ ಪೊಲೀಸರು, ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಮೂರು ಟನ್ಗಿಂತ ಹೆಚ್ಚು ಭಾರದ ಸರಕು ಸಾಗಿಸುವ ವಾಹನಗಳ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದರು. ರಾತ್ರಿ 10ರ ನಂತರ ಬೆಳಗ್ಗೆ 6 ಗಂಟೆಯೊಳಗೆ ನಗರದೊಳಗೆ ಲಾರಿಗಳು ಸಂಚರಿಸಬಹುದಾಗಿದೆ ಎಂದು ಹೇಳಿದ್ದರು. ಇದನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು.