Get Updates
Get notified of breaking news, exclusive insights, and must-see stories!

ಲಿಂಗಾಯಿತ ಶ್ರೀಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ

ಬೆಂಗಳೂರು, ಮೇ 26: ಲಿಂಗಾಯಿತ ಶ್ರೀಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಲಾಗಿದೆ. ಇಂದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಶ್ರೀಗಳು ಚೆಕ್ ನೀಡಿದ್ದಾರೆ.

ಕೂಡಲ ಸಂಗಮದ ಬಸವ ಜಯ ಮೃತ್ಯಂಜಯ ಸ್ವಾಮೀಜಿ, ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಠಾಧೀಶರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ತಮ್ಮ ಮಠಗಳಿಂದ ಕೊರೊನಾ ಹೋರಾಟಕ್ಕೆ ಸಹಾಯ ಆಗುವಂತೆ ಪರಿಹಾರ ನಿಧಿಗೆ ಹಣ ನೀಡಿದ್ದಾರೆ.

ಈಗಾಗಲೇ ಅನೇಕ ಮಠಗಳು ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವ ಮೂಲಕ ಸರ್ಕಾರ ಜೊತೆಗೆ ಕೈಜೋಡಿಸಿವೆ. ಶ್ರೀ ಸಿದ್ಧಗಂಗಾ ಮಠದಿಂದ 50 ಲಕ್ಷ ರೂಪಾಯಿ ದೇಣಿಗೆ ನೀಡಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಕೂಡ 50 ಲಕ್ಷ ರೂಪಾಯಿ ಪರಿಹಾರ ನಿಧಿಗೆ ನೀಡಿದೆ. ಸುತ್ತೂರು ಮಠವೂ 50 ಲಕ್ಷವನ್ನು ದೇಣಿಗೆ ಕೊಟ್ಟಿದೆ.

Lingayat Seers handover a cheque to CM BS Yediyurappa for Covid Relief Fund

ಉಳಿದಂತೆ, ಮೂರು ಸಾವಿರ ಮಠ, ಶ್ರವಣಬೆಳಗೊಳ ಜೈನ ಮಠ ಹೀಗೆ ಸಾಕಷ್ಟು ಮಠಗಳು ಪರಿಹಾರ ನಿಧಿಗೆ ಹಣ ನೀಡಿವೆ.

ಅಂದಹಾಗೆ, ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು 2000 ಗಡಿ ದಾಟಿವೆ. ನಿನ್ನೆ ಒಂದೇ ದಿನ 93 ಮಂದಿಗೆ ಕೊರೊನಾ ಸೋಂಕು ತಗುಲಿದೆ . ಭಾರತದಲ್ಲಿ ಒಟ್ಟು 1,38,845 ಕೊರೊನಾ ಸೋಂಕಿತ ಪ್ರಕರಣಗಳಾಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+