'ಒನ್ ಇಂಡಿಯಾ'ಕ್ಕಾಗಿ ಮಾತೆ ಮಹದೇವಿ ನೀಡಿದ ವಿಶೇಷ ಸಂದರ್ಶನ
ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಬೇಕು ಎಂದು ಮಾತೆ ಮಹದೇವಿ ಆಗ್ರಹ. ಅಲ್ಲದೆ, ವೀರಶೈವ ಲಿಂಗಾಯತರಿಗೆ ವೀರಶೈವ ಪದವನ್ನು ಕೈಬಿಟ್ಟು ಲಿಂಗಾಯತ ಎಂಬ ಪದವನ್ನಷ್ಟೇ ಬಳಸಬೇಕೆಂದು ಮನವಿ.
ಬೆಂಗಳೂರು, ಆಗಸ್ಟ್ 2: ಲಿಂಗಾಯತ ಧರ್ಮದ ಪ್ರತ್ಯೇಕ ಸ್ಥಾನಮಾನ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ವೀರಶೈವರ ಮಠಗಳ ವಿರುದ್ಧ ಲಿಂಗಾಯತರು, ಲಿಂಗಾಯತ ಮಠಗಳ ವಿರುದ್ಧ ವೀರಶೈವರು ಕಿಡಿ ಕಾರುತ್ತಿದ್ದು, ಇದೀಗ ಇಡೀ ಜಗಳ ಹಾದಿಬೀದಿಯ ರಂಪಾಟವಾಗಿದೆ. ಆಗಸ್ಟ್ 1ರಂದು ನಡೆದ ಪ್ರತಿಭಟನೆಗಳಂತೂ ನಾಗರಿಕ ಸಮಾಜ ತಲೆತಗ್ಗಿಸುವಂಥ ಮಟ್ಟಕ್ಕೂ ಇಳಿದಿವೆ.
ಬೆಂಗಳೂರು ಸೇರಿ, ಹಲವಾರು ಜಿಲ್ಲೆಗಳಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರತಿಭಟನೆಗಳು ಬಿರುಸು ಪಡೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ, 'ಒನ್ ಇಂಡಿಯಾ' ನಡೆಸಿದ ಸಂದರ್ಶನದಲ್ಲಿ ಲಿಂಗಾಯತ ಧರ್ಮದ ಏಕೈಕ ಮಹಿಳಾ ಗುರುಗಳಾದ ಮಾತೆ ಮಹದೇವಿ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

- ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ದಶಕಗಳ ಹಿಂದಿನಷ್ಟು ಹಳೆಯದ್ದು. ಆಗಿನಿಂದ ಈವರೆಗೆ ಅದು ಯಾಕೆ ಸಾಧ್ಯವಾಗಲಿಲ್ಲ?
ಇಂದಿರಾಗಾಂಧಿ ಕಾಲದಿಂದಲೂ ಪ್ರಯತ್ನ ಮಾಡಿದ್ದು ವೀರಶೈವ ಮಹಾಸಭಾ. ಮೂರು ಸಲ. ವೀರಶೈವ ಲಿಂಗಾಯತ ಪದಗಳನ್ನಿಟ್ಟುಕೊಂಡು ಹೋಗಿದ್ದರಿಂದ ಬೇಡಿಕೆ ನಿರಾಕರಿಸಲ್ಪಟ್ಟಿತು. ಲಿಂಗಾಯತ ಎಂಬ ಒಂದೇ ಪದವನ್ನು ಇಟ್ಟುಕೊಂಡು ಹೋದರೆ, ಆದೀತು. ಇಲ್ಲವಾದರೆ, ಸಾವಿರ ವರ್ಷಗಳಾದರೂ ಪ್ರತ್ಯೇಕ ಸ್ಥಾನಮಾನ ಸಿಗುವುದಿಲ್ಲ ಎಂಬುದು ನಮ್ಮ ನಿಲುವು.
- ಲಿಂಗಾಯತ ಎಂಬ ಪದದ ಜತೆಗೆ ವೀರಶೈವ ಪದ ಬಳಕೆ ಬೇಡವೆಂದು ಆಗ್ರಹಿಸುತ್ತಿರುವುದೇಕೆ?
ವೀರಶೈವ ಎಂಬುದು ಭಾರತದಲ್ಲಿ ಇರುವ ಶಿವನನ್ನು ಆರಾಧಿಸುವ ಶೈವ ಧರ್ಮದ ಒಂದು ಪಂಥ ಅಷ್ಟೆ. ಆದರೆ, ಆ ವೀರಶೈವರು 12ನೇ ಶತಮಾನದಲ್ಲಿ ಲಿಂಗಾಯತರಾದ ನಂತರ, ಲಿಂಗಾಯತರೆಂದೇ ಕರೆದುಕೊಳ್ಳಬೇಕೆಂದರೇ ತಮ್ಮನ್ನು ಹಳೆಯ ಜಾತಿಯಿಂದ ಕರೆದುಕೊಳ್ಳುವುದು ಸರಿಯಲ್ಲ. ಬಣಜಿಗ ಲಿಂಗಾಯತರು, ಗೌಡ ಲಿಂಗಾಯತರು ಎಂದೆಲ್ಲಾ ಇದ್ದಾರೆ ನಿಜ. ಆದರೆ, ಒಟ್ಟಾರೆಯಾಗಿ ನಾವೆಲ್ಲಾ ಲಿಂಗಾಯತರು ಅಲ್ಲವೇ? ಹಾಗಾಗಿ, ವೀರಶೈವ ಲಿಂಗಾಯತರು ಎಂಬ ಪದ ಬಳಕೆ ಬೇಡ ಎಂಬುದು ನಮ್ಮ ನಿಲುವು.
- ಹೆಸರಾಂತ ಸಂಶೋಧಕರಾದ ಚಿ.ಮೂ. ಅವರು ಬಸವಣ್ಣ ವೀರಶೈವನಾಗಿದ್ದಾರೆ ಒಪ್ಪಿಕೊಂಡಿದ್ದಾರೆಂದು ಹೇಳಿದ್ದಾರಲ್ಲ?
ಬಸವಣ್ಣ ಎಲ್ಲೂ ಹಾಗೆ ಹೇಳಿಲ್ಲ. 1454 ವಚನಗಳು- ಸಮಗ್ರ ವ್ಯಾಖ್ಯಾನ ಕೊಟ್ಟಿದ್ದೇನೆ. ಸಂಪೂರ್ಣ ವಚನ ಅಧ್ಯಯನ ಮಾಡಿದ್ದೇನೆ. ಅವರು ಹೇಳುವಂಥ ವಾಕ್ಯ ಎಲ್ಲೂ ಇಲ್ಲ.
- ಹಾಗಾದರೆ, ಚಿ.ಮೂ. ಹೇಳಿರುವುದು ಸುಳ್ಳೇ?
ನೋಡಿ, ಬಸವಣ್ಣನವರು ವಿವಿಧ ಜಾತಿಗಳಿಗೆ ಲಿಂಗಧಾರಣೆ ಮಾಡಿದಾಗ ಯಾವುದೇ ಮೇಲು ಕೀಳು ಭಾವವಿರಲಿಲ್ಲ. ಆದರೆ, ಪುರೋಹಿತಶಾಹಿ ವರ್ಗದವರು ಲಿಂಗಧಾರಣೆ ಪಡೆದ ನಂತರ, ಅವರು ಜಂಗಮ ಹಾಗೂ ಭಕ್ತರು ಎಂದು ಲಿಂಗಾಯತರನ್ನು ವರ್ಗೀಕರಿಸಿದರು. ಸಾಧನೆಯಿಂದ ಜಂಗಮ ಎಂಬ ಪಟ್ಟ ಬರಬೇಕೇ ಹೊರತು ಅದನ್ನೇ ಜಾತಿ ಮಾಡಿಕೊಂಡಿದ್ದು ಸರಿಯಲ್ಲ. ಬಸವಣ್ಣ ಹೇಳುವಂತೆ, ಹುಟ್ಟಿನಿಂದ ಯಾರೂ ಮೇಲೂ ಅಲ್ಲ, ಕೀಳೂ ಅಲ್ಲ. ಈ ತತ್ವಕ್ಕೆ ವಿರುದ್ಧವಾಗಿ ನಾವೇ ಶ್ರೇಷ್ಠ ಎಂದು ಹೇಳುತ್ತಾರೆ ಜಂಗಮರು. ಇದೇ ಸಮಸ್ಯೆಯಾಗಿದೆ.
- ಅಂದರೆ, ವಚನಗಳು ತಿದ್ದುಪಡಿ ಆಗಿವೆಯೆಂದು ನಿಮ್ಮ ಮಾತಿನ ಅರ್ಥವೇ?
ಬಸವಣ್ಣನವರ ವಚನಗಳನ್ನು ತಿದ್ದುಪಡಿ ಮಾಡಲಾಗಿಲ್ಲ. ಶಿವ ಶರಣರಾದ ಚನ್ನ ಮಲ್ಲಿಕಾರ್ಜುನ ಅವರ ವಚನಗಳಲ್ಲಿ ಭಾರೀ ತಿದ್ದುಪಡಿ ಮಾಡಲಾಗಿದೆ. ಹಾಗೆ, ತಿದ್ದುಪಡಿ ಮಾಡುವಾಗ ಬಸವ ಧರ್ಮದ ಸಿದ್ಧಾಂತಗಳಿಗೆ ವಿರುದ್ಧವಾದ ಅಂಶಗಳನ್ನು ಸೇರಿಸಿದ್ದಾರೆ.
- ಶ್ಯಾಮನೂರು ಶಿವಶಂಕರಪ್ಪ ಅವರು ಮಾತಾಜಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಹೇಳಿದ್ದಾರಲ್ಲ?
ಇಲ್ಲಿಯವರೆಗೆ ಎಲ್ಲಾ ಮಠಾಧಿಪತಿಗಳು ಎಲ್ಲರೂ ಮೌನವಾಗಿದ್ದರು. ನಾವು ನೇರವಾಗಿ ಸತ್ಯವನ್ನು ಹೊರಗೆ ತರಲೇಬೇಕು ಎಂದು ನಿರ್ಧರಿಸಿದ್ದೇವೆ. ಹಾಗಾಗಿ, ನಾವು ಈ ಬಗ್ಗೆ ನೇರವಾಗಿ, ದಿಟ್ಟವಾಗಿ ಹೇಳುತ್ತಿದ್ದೇವೆ. ಇದು ವೀರಶೈವ ಮಹಾಸಭೆಯ ಕೋಪಕ್ಕೆ ಕಾರಣವಾಗಿದೆ. ನಿಮಗೆ ತಿಳಿದಿರಲಿ, ನಾನೂ ಒಂದು ಕಾಲದಲ್ಲಿ ವೀರಶೈವ ಮಹಾಸಭೆಯ ಸದಸ್ಯಳೇ. ಆಗ ಅರಿವಿನ ಅಭಾವದಿಂದಾಗಿ ನಾನು ಅಲ್ಲಿ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿದ್ದೆ. ಆದರೆ, ಕಾಲ ಕಳೆದಂತೆ ವಚನಗಳನ್ನು ಹೆಚ್ಚೆಚ್ಚು ಅಭ್ಯಾಸಿಸುತ್ತಾ ಸಾಗಿದಾಗ, ಶೈವ ಸಂಸ್ಕೃತಿಗೂ, ಬಸವಣ್ಣನವರ ವಚನಗಳಿಗೂ ವ್ಯತ್ಯಾಸವಿದೆ ಎಂದು ತಿಳಿದು ನಾನು ಅದರಿಂದ ಹೊರಬಂದೆ.
- ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ನಿಮ್ಮ ಸಲಹೆಯೇನು?
ಸಿಎಂ ಸಿದ್ದರಾಮಯ್ಯನವರು ಒಮ್ಮತದಿಂದ ಬನ್ನಿ ಎಂದು ವೀರಶೈವರಿಗೂ, ಲಿಂಗಾಯತರಿಗೂ ಕರೆ ನೀಡಿದ್ದಾರೆ. ಆದರೆ, ಬಹುಮತ ನೋಡಬೇಕೇ ಹೊರತು ಒಮ್ಮತವನ್ನು ನಿರೀಕ್ಷೆ ಮಾಡಬೇಡಿ ಎಂದು ಕೇಳಿದ್ದೇವೆ. ಪ್ರತ್ಯೇಕ ಧರ್ಮ ಸ್ಥಾನಮಾನದ ವಿಚಾರವು ಲೋಕಸಭೆಯಲ್ಲಿ ಚರ್ಚೆಗೆ ಬಂದು ಅಲ್ಲಿ ಒಪ್ಪಿಗೆ ಸಿಕ್ಕು, ಆನಂತರ ರಾಜ್ಯಸಭೆಯ ಒಪ್ಪಿಗೆಯೂ ಸಿಗಬೇಕು. ಆಗಲೇ ಪ್ರತ್ಯೇಕ ಧರ್ಮ ಸಾಧ್ಯ. ಹಾಗಾಗಿ, ರಾಜ್ಯ ಸರ್ಕಾರವು ಈ ಬಗ್ಗೆ ಮುತುವರ್ಜಿ ವಹಿಸಿ, ಕೇಂದ್ರ ಸರ್ಕಾರಕ್ಕೆ ಲಿಂಗಾಯರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂದು ಶಿಫಾರಸು ಮಾಡಬೇಕೆಂದು ನಾವು ಮನವಿ ಮಾಡಿದ್ದೇವೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications