ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಸ್‌ವೈ, ಶ್ರೀರಾಮುಲು ವಿರುದ್ಧ ಎಸಿಬಿಗೆ ದೂರು ನೀಡಿದ ಕಾಂಗ್ರೆಸ್

By Manjunatha
|
Google Oneindia Kannada News

ಬೆಂಗಳೂರು, ಮೇ 24: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಶಾಸಕ ಶ್ರೀರಾಮುಲು, ಜನಾರ್ದನ ರೆಡ್ಡಿ, ಮುರಳಿಧರ ರಾವ್, ವಿಜಯೇಂದ್ರ ಅವರುಗಳ ವಿರುದ್ಧ ಕರ್ನಾಟಕ ಕಾಂಗ್ರೆಸ್‌ನ ಕಾನೂನು ವಿಭಾಗ ಎಸಿಬಿಗೆ ದೂರು ನೀಡಿದೆ.

ಚುನಾವಣಾ ಫಲಿತಾಂಶದ ಬಳಿಕ ಬಹುಮತ ಸಾಬೀತು ಪಡಿಸಿ ಅಧಿಕಾರ ಹಿಡಿಯಲು ಜೆಡಿಎಸ್ ಹಾಗೂ ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯ ಈ ಎಲ್ಲ ಮುಖಂಡರು ಕೋಟ್ಯಂತರ ಹಣದ ಆಮೀಷ ಒಡ್ಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ರೆಡ್ಡಿ 'ಕುದುರೆ ವ್ಯಾಪಾರ'ದ ಆಡಿಯೋ ಬಿಡುಗಡೆ ಮಾಡಿದ ಉಗ್ರಪ್ಪರೆಡ್ಡಿ 'ಕುದುರೆ ವ್ಯಾಪಾರ'ದ ಆಡಿಯೋ ಬಿಡುಗಡೆ ಮಾಡಿದ ಉಗ್ರಪ್ಪ

ದೂರಿನ ಜೊತೆಗೆ ಬಿಜೆಪಿ ಮುಖಂಡರು ಆಮೀಷ ಒಡ್ಡಿದ ಆಡಿಯೋ ಕ್ಲಿಪ್‌ಗಳನ್ನು ಎನ್ನಲಾದ ಧ್ವನಿ ನಮೂನೆಗಳನ್ನು ದೂರಿನೊಂದಿಗೆ ಎಸಿಬಿಗೆ ಕಾಂಗ್ರೆಸ್ ಕಾನೂನು ವಿಭಾಗ ನೀಡಿದೆ.

KPCC law section gives complaint to ACB against BJP top leaders

ಬಿಜೆಪಿಯು ಅಧಿಕಾರ ಹಿಡಿಯಲು ಅಡ್ಡದಾರಿಯನ್ನು ತುಳಿದಿದ್ದು, ಕುದುರೆ ವ್ಯಾಪಾರಕ್ಕೆ ಇಳಿದಿತ್ತು, ಅದರ ದಾಖಲೆ ಸಹ ಇದ್ದು ಇದನ್ನು ಪರಿಗಣಿಸಿ ಬಿಜೆಪಿಯ ಯಡಿಯೂರಪ್ಪ ಹಾಗೂ ಶಾಸಕ ಶ್ರೀರಾಮುಲು, ಜನಾರ್ದನ ರೆಡ್ಡಿ, ಮುರಳಿಧರ ರಾವ್, ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದ ರಾಜ್ ಹೇಳಿದ್ದಾರೆ.

ವೈರಲ್ ಆಡಿಯೋ : ರಾಮುಲು, ಮುರಳೀಧರ ರಾವ್‌ ರಿಂದ ಬಿಸಿ ಪಾಟೀಲ್‌ಗೆ ಆಮಿಷವೈರಲ್ ಆಡಿಯೋ : ರಾಮುಲು, ಮುರಳೀಧರ ರಾವ್‌ ರಿಂದ ಬಿಸಿ ಪಾಟೀಲ್‌ಗೆ ಆಮಿಷ

ಬಿಜೆಪಿ ವಿಶ್ವಾಸಮತ ಯಾಚನಗೆ ಕೆಲವು ದಿನಗಳಿದ್ದಂತೆ ಕಾಂಗ್ರೆಸ್‌ ಮುಖಂಡ ವಿ.ಎಸ್.ಉಗ್ರಪ್ಪ ಅವರು ಯಡಿಯೂರಪ್ಪ ಅವರು ಬಿ.ಸಿ.ಪಾಟೀಲ್ ಅವರೊಂದಿಗೆ ಮಾತನಾಡಿದ ಆಡಿಯೋ ಕ್ಲಿಪ್, ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್ ಶಾಸಕರೊಂದಿಗೆ ಮಾತನಾಡಿದ ಆಡಿಯೋ ಕ್ಲಿಪ್, ಶ್ರೀರಾಮುಲು ಹಾಗೂ ಮುರಳಿಧರ ರಾವ್ ಬಿ.ಸಿ.ಪಾಟೀಲ್ ಅವರೊಂದಿಗೆ ಮಾತನಾಡಿದ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದರು.

English summary
KPCC law section gives complaint against BJP state president BS Yeddyurappa, BJP leader Sriramulu, Janardhan Reddy, Muralidhar Rao, BSY son Vijyendra to the ACB for giving lure to congress MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X