ಸಿದ್ದರಾಮಯ್ಯ ಹಿಂದೂ ವಿರೋಧಿ ನೀತಿಗೆ ಜನರ ತಕ್ಕ ಪಾಠ: ಶೋಭಾ ಕರಂದ್ಲಾಜೆ
ಬೆಂಗಳೂರು, ಮೇ 15: ಬಹಳಷ್ಟು ಕಡೆ ಬಿಜೆಪಿ ಜಯ ಸಾಧಿಸಿದೆ. ಇದಕ್ಕೆ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ಅವರ ತ್ರಿವಳಿ ಜೋಡಿ ಬಿಜೆಪಿಯನ್ನು ಗೆಲುವಿನತ್ತ ಕರೆದುಕೊಂಡು ಹೋಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ರಾಜ್ಯಾದ್ಯಂತ ವಿಧಾನಸಭಾ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಈ ಕುರಿತು ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರು ಎಲ್ಲಾ ವಿಚಾರದಲ್ಲೂ ಅವರ ಅಪ್ಪನ ಮೇಲೆ ಆಣೆ ಹಾಕಿರುವ ಕಾರಣ ಸಿದ್ದರಾಮಯ್ಯ ಅವರ ಅಪ್ಪನ ಆತ್ಮ ಕೂಡ ಚಡಪಡಿಸಿರುತ್ತದೆ ಎಂದರು.
ಸಿದ್ದರಾಮಯ್ಯ ಅವರ ಕೋಮುವಾದಿ ರಾಜಕಾರಣ, ಹಿಂದು ವಿರೋಧಿ ನೀತಿ ಅವರು ಮಾಡಿದ ಜಾತಿವಾದ ರಾಜಕಾರಣಕ್ಕೆ ಬೇಸತ್ತು ಜನ ಸರಿಯಾದ ಪಾಠವನ್ನೇ ಕಲಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಫಲಿತಾಂಶ ನನಗೆ ಸಂತಶ ತಂದಿದೆ ಎಂದರು.













Click it and Unblock the Notifications