ಪ್ರವಾಹ ಪೀಡಿತ ಜಿಲ್ಲಾಧಿಕಾರಿಗಳ ಜತೆ ಸಿಎಂ ಸಭೆ
ಬೆಂಗಳೂರು, ಜು.8: ಮಳೆಯಿಂದ ಹಾನಿ ಸಂಭವಿಸಿದ ಜಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿಗಳ ಇನ್ನಿತರ ಕಾರ್ಯಕ್ರಮಗಳ ಸಹಿತ ಇಂದಿನ (08-07-2022) ನಗರದಲ್ಲಿರುವ ವಿದ್ಯಾಮಾನಗಳು, ರಾಜಕೀಯ ನಾಯಕರ ಕಾರ್ಯಕ್ರಮ ಕುರಿತು ಇಲ್ಲಿ ತಿಳಿದುಕೊಳ್ಳಿ..
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:
ಬೆಳಗ್ಗೆ 10.45: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಆಯೋಜಿಸಿರುವ 'ಸುವರ್ಣ ಮಹೋತ್ಸವ ಸಮಾರಂಭ' ಉದ್ಘಾಟನೆ, ಸ್ಥಳ: ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣ, ಹೊಸಹಳ್ಳಿ ಮೆಟ್ರೋ ನಿಲ್ದಾಣ ಬಳಿ, ಎಂ.ಸಿ.ಬಡಾವಣೆ, ವಿಜಯನಗರ, ಬೆಂಗಳೂರು.
ಬೆಳಗ್ಗೆ 11.30: ಕರ್ನಾಟಕದಲ್ಲಿ ಎಥೆನಾಲ್ ಉತ್ಪಾದನೆ ಕುರಿತು ವಿಚಾರ ಸಂಕೀರಣಕ್ಕೆ ಚಾಲನೆ, ಸ್ಥಳ: ತಾಜ್ ಹೋಟೆಲ್ ಎಂ. ಜಿ. ಮಾಲ್ ಎದುರು, ಟ್ರಿನಿಟಿ ವೃತ್ತ, ಎಂ. ಜಿ. ರಸ್ತೆ, ಬೆಂಗಳೂರು.
ಮಧ್ಯಾಹ್ನ 12.15: ಸಫ್ರಾನ್ ಎಚ್ಎಎಲ್ ಎಂಜಿನ್ ಏರ್ಕ್ರಾಫ್ಟ್ ಎಂಜಿನ್ ಸೌಲಭ್ಯಕ್ಕೆ ಚಾಲನೆ, ಸ್ಥಳ: ಸಫ್ರಾನ್ ಎಚ್ಎಎಲ್ ಏರ್ಕ್ರಾಫ್ಟ್ ಎಂಜಿನ್ಸ್ ಪ್ರೈವೇಟ್ ಲಿಮಿಟೆಡ್, ಪ್ಲಾಟ್ ನಂ.93ರಿಂದ 96 ಮತ್ತು 47ರಿಂದ 52, ಕೆಐಎಡಿಬಿ ಕೈಗಾರಿಕಾ ಪ್ರದೇಶ, ಎಸ್ಇಝಡ್ ಏರೋಸ್ಪೇಸ್ ಪಾರ್ಕ್, ದೇವನಹಳ್ಳಿ, ಬೆಂಗಳೂರು.
ಮಧ್ಯಾಹ್ನ 2.30: ರಾಜ್ಯದಲ್ಲಿ ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳ ಜತೆಗೆ ವಿಡಿಯೋ ಸಂವಾದ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಸಂಜೆ 4: ದ್ರಾಕ್ಷಿ ಮತ್ತು ವೈನ್ ಬೋರ್ಡ್ ರೂಪು ರೇಷೆಗಳ ರಚಿಸುವ ಕುರಿತು ಚರ್ಚಿಸಲು ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಸಂಜೆ 5: ಕನ್ನಡ ಅಭಿವೃದ್ಧಿ ಪ್ರಾಧಿಕಾರ-3 ದಶಕ ಸಮಾರಂಭ ಉದ್ಘಾಟನೆ ಹಾಗೂ ಕನ್ನಡ ರಥ-ಕಾಯಕಪಥ (ಕ.ಅ.ಪ್ರಾ-30) ಪುಸ್ತಕ ಲೋಕಾರ್ಪಣೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು,
ಕಾಂಗ್ರೆಸ್
ಬೆಳಗ್ಗೆ 10: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೊಳ್ಳೇಗಾಲ ಪ್ರವಾಸ, ಶ್ರೀಸಿದ್ದಪ್ಪಾಜಿ ಶಿವಪಾರ್ವತಿ ಜಾತ್ರಾ ಮಹೋತ್ಸವದಲ್ಲಿ ಭಾಗಿ.
Recommended Video