Mahalakshmi Layout Constituency: ಮತ್ತೆ ಗೆಲ್ಲುವ ಉಮೇದಿನಲ್ಲಿ ಗೋಪಾಲಯ್ಯ
ಮೂಲ ವಸತಿ ಪ್ರದೇಶಗಳು, ಕೈಗಾರಿಕಾ ಪ್ರದೇಶಗಳು ಮತ್ತು ಕೊಳೆಗೇರಿಗಳ ಮಿಶ್ರಣವನ್ನು ಹೊಂದಿರುವ ಮಹಾಲಕ್ಷ್ಮೀ ಲೈಔಟ್ ವಿಧಾನಸಭಾ ಕ್ಷೇತ್ರವು ಪ್ರಧಾನವಾಗಿ ನಗರ ಪ್ರದೇಶವಾಗಿದೆ.
ಬೆಂಗಳೂರು, ಫೆಬ್ರವರಿ 23: ಬೆಂಗಳೂರು ನಗರದ ವಿಧಾನಸಭಾ ಕ್ಷೇತ್ರಗಳಲ್ಲಿ 2008ರಲ್ಲಿ ರಚನೆಯಾದ ಮಹಾಲಕ್ಷ್ಮೀ ಲೈಔಟ್ ಕೇತ್ರ ಬಹಳ ಪ್ರಮುಖವಾದ ಕ್ಷೇತ್ರವಾಗಿದೆ. ಇಲ್ಲಿ ಸತತ ಮೂರು ಬಾರಿಯಿಂದಲೂ ಗೋಪಾಲಯ್ಯ ಅವರು ಗೆಲ್ಲುತ್ತಾ ಬಂದಿದ್ದಾರೆ. ಇದು ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಗೆ ಬರುತ್ತದೆ.
ಮೂಲ ವಸತಿ ಪ್ರದೇಶಗಳು, ಕೈಗಾರಿಕಾ ಪ್ರದೇಶಗಳು ಮತ್ತು ಕೊಳೆಗೇರಿಗಳ ಮಿಶ್ರಣವನ್ನು ಹೊಂದಿರುವ ಕ್ಷೇತ್ರವು ಪ್ರಧಾನವಾಗಿ ನಗರ ಪ್ರದೇಶವಾಗಿದೆ. ಇದು ಪಶ್ಚಿಮ ಬೆಂಗಳೂರಿನ ಉತ್ತರ ಭಾಗಗಳಾದ ಮಹಾಲಕ್ಷ್ಮೀ ಲೇಔಟ್, ನಂದಿನಿ ಲೇಔಟ್, ಯಶವಂತಪುರ ಎಪಿಎಂಸಿ ಯಾರ್ಡ್, ಗೊರಗುಂಟೆಪಾಳ್ಯ, ಕಂಠೀರವ ನಗರ, ಶಂಕರ್ ನಗರ, ಸರಸ್ವತಿಪುರ, ನಾಗಾಪುರ, ಕುರುಬರಹಳ್ಳಿ, ಕಮಲಾನಗರ, ವೃಷಭಾವತಿ ನಗರ ಮತ್ತು ಬಸವೇಶ್ವರನಗರ ಮತ್ತು ಕಾಮಾಕ್ಷಿಪಾಳ್ಯ ಭಾಗಗಳನ್ನು ಒಳಗೊಂಡಿದೆ.
ಅಲ್ಲದೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿಯ) ಯ ಕೆಳಗಿನ 7 ವಾರ್ಡ್ಗಳನ್ನು ಒಳಗೊಂಡಿದೆ. 2008ರಲ್ಲಿ ಕಾಂಗ್ರೆಸ್ನ ಎನ್ಎಲ್ ನಾಗೇಂದ್ರ ಬಾಬು ಅವರು ಇಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 2013ರಿಂದ 2018, 2019ರಲ್ಲಿ ಗೋಪಾಲಯ್ಯನವರು ಆಯ್ಕೆಯಾಗುತ್ತಾ ಬಂದಿದ್ದಾರೆ. ಮೊದಲು ಜೆಡಿಎಸ್ನಲ್ಲಿ ಇದ್ದ ಗೋಪಾಲಯ್ಯ ಅವರು ಬಳಿಕ ಬಿಜೆಪಿಯಿಂದ ಆಯ್ಕೆಯಾಗುತ್ತಾ ಬಂದಿದ್ದಾರೆ, ಇಲ್ಲಿ ಒಕ್ಕಲಿಗರ ಮತಗಳು ಅಧಿಕವಾಗಿದೆ.
2019ರ ವಿಧಾನಸಭಾ ಉಪ ಚುನಾವಣೆಯಲ್ಲಿ ಕೆ. ಗೋಪಾಲಯ್ಯನವರಿಗೆ 85,889 ಮತಗಳು ಬಂದಿದ್ದವು. ಅವರ ಸಮೀಪ ಸ್ಪರ್ಧಿ ಕಾಂಗ್ರೆಸ್ನ ಎಂ ಶಿವರಾಜು ಅವರಿಗೆ 31,503 ಮತಗಳು ಬಂದಿದ್ದವು. ಇದೇ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಗೋಪಾಲಯ್ಯ ಅವರು 88,218 ಮತಗಳು ಬಂದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಎನ್ಎಲ್ ನಾಗೇಂದ್ರ ಬಾಬು ಅವರಿಗೆ 47,118 ಮತಗಳು ಬಂದಿದ್ದವು. ಕಾಂಗ್ರೆಸ್ಮ ಮಂಜುನಾಥ್ ಎಚ್ಎಸ್ ಅವರಿಗೆ 20,496 ಮತಗಳು ಸಿಕ್ಕಿದ್ದವು.

ಜೆಡಿಎಸ್ನಿಂದ ಬಿಜೆಪಿಗೆ ಪಕ್ಷಾಂತರ
ಇನ್ನೂ 2013ರ ವಿಧಾನಸಭಾ ಚುನಾವಣೆಯಲ್ಲಿ ಗೋಪಾಲಯ್ಯ ಅವರಿಗೆ 66,127 ಮತಗಳು, ಕಾಂಗ್ರೆಸ್ನಲ್ಲಿದ್ದ ಎನ್ಎಲ್ ನಾಗೇಂದ್ರ ಬಾಬು ಅವರಿಗೆ 50,757 ಮತಗಳು ಹಾಗೂ ಬಿಜೆಪಿಯ ಎಚ್ ಹರೀಶ್ ಅವರಿಗೆ 23,545 ಮತಗಳು ಬಂದಿದ್ದವು. ಈಗ ಬಿಜೆಪಿಯಲ್ಲಿರವ ಕೆ. ಗೋಪಾಲಯ್ಯನವರಿಗೆ ಬಿಜೆಪಿ ಟಿಕೆಟ್ ಮತ್ತೆ ಸಿಗುವ ಸಾಧ್ಯತೆ ಇದೆ. ಆದರೆ ಶಂಕರ ಮಠದ ವಾರ್ಡಿನ ಎನ್ ಶಿವರಾಜು ಅವರು 2019 ರ ಡಿಸೆಂಬರ್ನಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಕೆ ಗೋಪಾಲಯ್ಯ ವಿರುದ್ಧ ಸೋತಿದ್ದ ಮಹಾಲಕ್ಷ್ಮೀ ಲೇಔಟ್ನಿಂದ ಟಿಕೆಟ್ಗಾಗಿ ಲಾಬಿ ನಡೆಸುತ್ತಿದ್ದಾರೆ.

ಹಿರಿಯರ ಸ್ಥಾನಗಳನ್ನು ಬದಲಾಯಿಸಲು ಮಾತು
ಈ ಮಧ್ಯೆ ಬಿಜೆಪಿಯಲ್ಲಿ ಆರ್ ಅಶೋಕ (ಪದ್ಮನಾಭನಗರ), ಎಸ್ಆರ್ ವಿಶ್ವನಾಥ್ (ಯಲಹಂಕ), ಸಿಎನ್ ಅಶ್ವಥ್ ನಾರಾಯಣ (ಮಲ್ಲೇಶ್ವರಂ), ಅರವಿಂದ ಲಿಂಬಾವಳಿ (ಮಹದೇವಪುರ), ಕೆ ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್) ಅವರಂತಹ ಹಿರಿಯರ ಸ್ಥಾನಗಳನ್ನು ಬದಲಾಯಿಸಲು ಪಕ್ಷದ ನಾಯಕತ್ವ ಯೋಜಿಸುತ್ತಿದೆ ಎಂಬ ಮಾತುಗಳು ಇವೆ.

ಒಕ್ಕಲಿಗ ಮತದಾರರು ಹೆಚ್ಚಿರುವ ಪ್ರದೇಶ
ಅಭಿವೃದ್ಧಿ ಹೊಂದಿದ, ಕೊಳಗೇರಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳ ಮಿಶ್ರಣವಾಗಿರುವ ಇಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಬಿಸಿ ಏರಿದೆ. ಮೊದಲೇ ಹೇಳಿದಂತೆ ಒಕ್ಕಲಿಗ ಮತದಾರರು ಹೆಚ್ಚಿರುವ ಪ್ರದೇಶ. ಅವರೇ ಇಲ್ಲಿ ನಿರ್ಣಯಕ ಮತದಾರರು. ಇಲ್ಲಿ ಸಾಮಾನ್ಯವಾಗಿ ಜಾತಿ ವಿಚಾರ ಚುನಾವಣಾ ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಜನರ ಜೊತೆಗಿನ ಸಂಪರ್ಕವು ಪ್ರಮುಖ ಪಾತ್ರ ವಹಿಸಲಿದೆ.

ಡಾ. ನಾರಾಯಣಸ್ವಾಮಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ
ಮಹಾಲಕ್ಷ್ಮೀಯಲ್ಲಿ ಈಗ ಮತ್ತೊಮ್ಮೆ ಕೆ. ಗೋಪಾಲಯ್ಯ ಅವರು ಕಣಕ್ಕೆ ಇಳಿಯಲು ಉತ್ಸುಹಕರಾಗಿದ್ದಾರೆ. ಇಲ್ಲಿ 2019ರ ಉಪಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಕಾರ್ಪೊರೇಟರ್ ಎಂ ಶಿವರಾಜು ಅವರು ಹಾಗೂ ಜೆಡಿಎಸ್ನ ಡಾ. ಗಿರೀಶ್ ಕೆ. ನಾಶಿ ಇಬ್ಬರೂ ಈ ಬಾರಿ ಕಣಕ್ಕೆ ಇಳಿಯವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಗೋಪಾಲಯ್ಯಗೆ ಸ್ಪರ್ಧಿಯಾಗಿ ಕಾಂಗ್ರೆಸ್ನಿಂದ ಒಕ್ಕಲಿಗ ಸಂಘದ ನಿರ್ದೇಶಕರು ಆಗಿರುವ ಮಲ್ಲೇಶ್ವರದ ವೇಗಸ್ ಆಸ್ಪತ್ರೆಯ ವೈದ್ಯ ಡಾ. ನಾರಾಯಣಸ್ವಾಮಿ ಅವರು ಕಾಂಗ್ರೆಸ್ನಿಂದ ಟಿಕೆಟ್ ಕೋರಿ ಅರ್ಜಿ ಹಾಕಿದ್ದಾರೆ. ಜೆಡಿಎಸ್ನಿಂದ ಸಿ. ರಾಜಣ್ಣ ಮತ್ತು ಬಿಬಿಎಂಪಿ ಮಾಜಿ ಉಪ ಮೇಯರ್ ಭದ್ರೇಗೌಡ ಆಕಾಂಕ್ಷಿಗಳಾಗಿದ್ದಾರೆ. ಎಎಪಿಯಿಂದ ಶಾಂತಾಲಾ ದಾಮ್ಲೆ ಅವರು ತಯಾರಿ ನಡೆಸಿದ್ದಾರೆ.
-
ಮಾರ್ಚ್ 15ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
KAS ಅಭ್ಯರ್ಥಿಗಳಿಗೆ ಬಿಗ್ ಶಾಕ್ ನೀಡಿದ KPSC: 384 ಗೆಜೆಟೆಡ್ ಪ್ರೊಬೇಷನರ್ಸ್ ಸಂದರ್ಶನ ಮುಂದೂಡಿಕೆ -
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
ಮಾರ್ಚ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications