ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಆಭರಣ ಅಂಗಡಿ ದರೋಡೆ
ಬೆಂಗಳೂರು, ಆಗಸ್ಟ್ 05 : ಬೆಂಗಳೂರಿನ ಯಲಹಂಕದಲ್ಲಿ ಶುಕ್ರವಾರ ಮುಂಜಾನೆ ಜ್ಯುವೆಲ್ಲರಿ ಶಾಪ್ ದರೋಡೆ ಮಾಡಲಾಗಿದೆ. ಬಾಗಲೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಯಲಹಂಕ
ಬಳಿಯ
ದ್ವಾರಕಾನಗರದ
ರಾಜಲಕ್ಷ್ಮೀ
ಜ್ಯುವೆಲರ್ಸ್ನಲ್ಲಿ
ಮುಂಜಾನೆ
7.30ರ
ಸುಮಾರಿಗೆ
ಈ
ಘಟನೆ
ನಡೆದಿದೆ.
ಬ್ಲಾಕ್
ಪಲ್ಸರ್ನಲ್ಲಿ
ಬಂದ
ಮೂವರು
ದುಷ್ಕರ್ಮಿಗಳು
ಭದ್ರತಾ
ಸಿಬ್ಬಂದಿ
ಮೇಲೆ
ಹಲ್ಲೆ
ಮಾಡಿ,
ಸುಮಾರು
50
ಲಕ್ಷ
ಮೌಲ್ಯದ
ಚಿನ್ನಾಭರಣ
ದೋಚಿದ್ದಾರೆ.[ಇಂದಿನ
ಚಿನ್ನದ
ದರ
ತಿಳಿದುಕೊಳ್ಳಿ]
ಭದ್ರತಾ ಸಿಬ್ಬಂದಿ ಶುಕ್ರವಾರ ಬೆಳಗ್ಗೆ 7ಗಂಟೆಗೆ ಜ್ಯುವೆಲ್ಲರ್ಸ್ ಬಾಗಿಲು ತೆರೆದಿದ್ದರು. ಈ ಸಮಯದಲ್ಲಿ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ, ಒಳಗೆ ನುಗ್ಗಿ ಬಂಗಾರವಿದ್ದ ಮೂರು ಬಾಕ್ಸ್ಗಳನ್ನು ಎತ್ತಿಕೊಂಡು ಪರಾರಿಯಾದರು.[ಗಂಡ-ಹೆಂಡತಿ ಅಂತ ಬಂದ್ರು, 18 ಲಕ್ಷ ದೋಚಿದ್ರು!]
ಜ್ಯುವೆಲರ್ಸ್ ಮುಂದಿದ್ದ ಸಿಸಿಟಿವಿಯನ್ನು ದುಷ್ಕರ್ಮಿಗಳು ಜಖಂಗೊಳಿಸಿದ್ದಾರೆ. ಬಾಗಲೂರು ಠಾಣಾ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.