ಇಸ್ರೋದಿಂದ ಮಾರ್ಚ್ 5ರಂದು ಜಿಐಸ್ಯಾಟ್-1 ಉಪಗ್ರಹ ಉಡಾವಣೆ
ಬೆಂಗಳೂರು, ಫೆಬ್ರವರಿ 27: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾರ್ಚ್ 5ರಂದು ಭೌಗೋಳಿಯ ಚಿತ್ರ ಉಪಗ್ರಹ 'ಜಿಐಸ್ಯಾಟ್-1' ಅನ್ನು ಉಡಾವಣೆ ಮಾಡಲಿದೆ. ಭೂಸ್ಥಾಯಿ ಉಪಗ್ರಹ ಉಡಾವಣಾ ವಾಹನ ಜಿಎಸ್ಎಲ್ವಿ ಎಫ್ 10 ಮೂಲಕ ಈ ಉಡಾವಣೆ ನಡೆಯಲಿದೆ.
ಶ್ರೀಹರಿಕೋಟಾದ ಸತೀಶ್ ದವನ್ ಬಾಹ್ಯಾಕಾಶ ಕೇಂದ್ರದಿಂದ ಮಾರ್ಚ್ 5ರ ಸಂಜೆ 5.43ಕ್ಕೆ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಉಡಾವಣೆ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.
2,275 ಕೆ.ಜಿ. ತೂಕದ ಜಿಐಸ್ಯಾಟ್-1 ಕ್ಷಿಪ್ರ ಭೂ ವೀಕ್ಷಣಾ ಗುಣವನ್ನು ಹೊಂದಿದ್ದು, ಜಿಎಸ್ಎಲ್ವಿ-10 ಉಡಾವಣಾ ವಾಹನದ ಮೂಲಕ ಭೂಸ್ಥಾಯಿ ವರ್ಗಾವಣೆ ಕಕ್ಷೆಗೆ ಸೇರ್ಪಡೆಗೊಳ್ಳಲಿದೆ.

ಭೂಸ್ಥಾಯಿ ಕಕ್ಷೆಯಿಂದ ಕಾರ್ಯಾಚರಣೆ ನಡೆಸಲಿರುವ ಜಿಐಸ್ಯಾಟ್-1 ಭಾರತ ಉಪಖಂಡದಲ್ಲಿ ಮೋಡರಹಿತ ವಾತಾವರಣದಲ್ಲಿ ಆಗಾಗ್ಗೆ ವಿರಾಮಗಳ ನಡುವೆ ರಿಯಲ್ ಟೈಮ್ ಗ್ರಹಿಕೆಯನ್ನು ಮಾಡಲಿದೆ.
4 ಮೀಟರ್ ವ್ಯಾಸದ ಚಾವಣಿಯಾಕಾರದ ಪೇಲೋಡ್ ಮೊದಲ ಬಾರಿಗೆ ಜಿಎಸ್ಎಲ್ವಿ ಮೂಲಕ ಉಡಾವಣೆಗೊಳ್ಳುತ್ತಿದೆ. ಇದು ಒಟ್ಟಾರೆಯಾಗಿ ಜಿಎಸ್ಎಲ್ವಿ ವಾಹನದ 14ನೇ ಹಾರಾಟವಾಗಿದೆ. ಜಿಐಸ್ಯಾಟ್ ಉಪಗ್ರಹವು ಏಳ ವರ್ಷಗಳ ಜೀವಿತಾವಧಿ ಹೊಂದಿದೆ. ಇದು ಬಹುವರ್ಣಪಟಲದ ಐದು ಬಗೆಯ ಕ್ಯಾಮೆರಾಗಳನ್ನು ಹೊಂದಿದ್ದು, ದೇಶದ ಬಹುತೇಕ ಭಾಗಗಳ ರಿಯಲ್ ಟೈಮ್ ಚಿತ್ರಗಳನ್ನು ರವಾನಿಸುತ್ತದೆ.
ಪ್ರತಿ ಐದು ನಿಮಿಷಕ್ಕೆ ಫೀಲ್ಡ್ ಇಮೇಜ್ಗಳನ್ನು ಕ್ಲಿಕ್ಕಿಸುವ ಕ್ಯಾಮೆರಾಗಳು, ಪ್ರತಿ 30 ನಿಮಿಷಕ್ಕೆ 50 ಮೀಟರ್ ರೆಸೊಲ್ಯೂಷನ್ನಲ್ಲಿ ಭಾರತದ ಪ್ರತಿ ಭೂ ಪ್ರದೇಶದ ಚಿತ್ರವನ್ನು ತೆಗೆಯುತ್ತದೆ. ಈ ಉಪಗ್ರಹವು ಪ್ರಾಕೃತಿಕ ವಿಕೋಪ, ಯುದ್ಧ ಮುಂತಾದ ಸಂದರ್ಭಗಳಲ್ಲಿ ಮಹತ್ವದ ಚಿತ್ರಗಳನ್ನು ರವಾನಿಸಲಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications