ಮೋದಿ, ಮುಸ್ಲಿಂ ಹಾಗೂ ಮಾಧ್ಯಮ: ಸಂವಾದ
ಬೆಂಗಳೂರು, ಮಾ.20: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಸಾಮಾಜಿಕ ಕಾರ್ಯಕರ್ತೆ ಮಧು ಕಿಶ್ವಾರ್ ಅವರೊಡನೆ ಸಂವಾದ ನಡೆಸುವ ಅವಕಾಶವನ್ನು ನಮೋ ಬ್ರಿಗೇಡ್ ಒದಗಿಸಿದೆ.
ಭಾರತದ ಸಮಕಾಲೀನ ಸಾಮಾಜಿಕ-ರಾಜಕೀಯ ಪರಿಸ್ಥಿತಿಯ ಬಗ್ಗೆ ಸ್ಥೂಲ ಸೂಕ್ಷ್ಮ ಚಿತ್ರಣ ನೀಡುವ 'ಮೋದಿ, ಮುಸ್ಲಿಂ ಹಾಗೂ ಮಾಧ್ಯಮ ವಾಯ್ಸ್ ಫ್ರಂ ನರೇಂದ್ರ ಮೋದಿಸ್ ಗುಜರಾತ್' ಹೆಸರಿನ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಮಾನುಷಿ ಭಾರತ.ಆರ್ಗ್ ಸಂಸ್ಥೆ ಸ್ಥಾಪಕರಾದ ಮಧು ಪೂರ್ಣಿಮಾ ಕಿಶ್ವಾರ್ ಅವರು ಈ ಪುಸ್ತಕದ ಲೇಖಕಿಯಾಗಿದ್ದು ಅವರೊಟ್ಟಿಗೆ ನೇರವಾಗಿ ಸಂವಾದ ನಡೆಸಬಹುದಾಗಿದೆ.
ನವಚೇತನ ಸಂಸ್ಥೆ ಆಯೋಜನೆಯ ಪುಸ್ತಕ ಅನಾವರಣ ಕಾರ್ಯಕ್ರಮ ವಿವರ:
* ಶುಕ್ರವಾರ ಮಾರ್ಚ್ 21, 2014, ಸಂಜೆ 6.30ಕ್ಕೆ
* ಸ್ಥಳ: ಭಾರತೀಯ ವಿದ್ಯಾ ಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು.

ಉಪಸ್ಥಿತಿ: ಪ್ರೊ. ಆರ್ ವೈದ್ಯನಾಥನ್, ಐಐಎಂ, ಬೆಂಗಳೂರು,
* ಅನ್ವರ್ ಮಾಂಪಡಿ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಮಾಜಿ ಮುಖ್ಯಸ್ಥ,
* ಡಾ. ಅಶ್ವಿನಿ ಮಹೇಶ್, ಲೋಕಸತ್ತಾ ಪಕ್ಷದ ಅಧ್ಯಕ್ಷರು,
* ಪ್ರೊ. ಕೆ ಗೋಪಿನಾಥ್, ಐಐಎಂ, ಬೆಂಗಳೂರು
ಸಂವಾದ ಕಾರ್ಯಕ್ರಮ ವಿವರ:
* ಶನಿವಾರ 4 ಗಂಟೆಯಿಂದ 7 ಗಂಟೆ
* ಸ್ಥಳ: ನ್ಯೂ ಹೊರೈಜನ್ ಕಾಲೇಜ್ ಆಫ್ ಇಂಜಿನಿಯರಿಂಗ್, ಕಾಡುಬೀಸನಹಳ್ಳಿ, ಔಟರ್ ರಿಂಗ್ ರಸ್ತೆ, ಮಾರತ್ ಹಳ್ಳಿ, ಬೆಂಗಳೂರು
ಹೆಚ್ಚಿನ ವಿವರಗಳಿಗೆ ಫೇಸ್ ಬುಕ್ ಇವೆಂಟ್ ಪುಟಕ್ಕೆ ಭೇಟಿ ಕೊಡಿ












Click it and Unblock the Notifications