Krishna Janmashtami 2023: ಬೆಂಗಳೂರಿನ ಈ ಒಂದೇ ಮನೆಯಲ್ಲಿ 1,500 ಶ್ರೀಕೃಷ್ಣ ಮೂರ್ತಿಗಳ ಪ್ರತಿಷ್ಠಾಪನೆಬೆಂಗಳೂರಿನ ಒಂದೇ ಮನೆಯಲ
ಬೆಂಗಳೂರು, ಸೆಪ್ಟೆಂಬರ್ 07: ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹರೇ ಕೃಷ್ಣ ನಾಮಸ್ಮರಣೆ ಮುಗಿಲುಮುಟ್ಟಿತ್ತು. ಬೆಣ್ಣೆ ಕಳ್ಳ, ಗೋಪಾಲ ಕೃಷ್ಣನ ಅಂದ-ಚಂದವಾಗಿ ಅಲಂಕರಿಸಿದ ಭಕ್ತರು ಮುಕುಂದನ ದರ್ಶನ ಪಡೆದು ಪುನೀತರಾದರು.
ಜಗತ್ತಿಗೆ ಗೀತೆಯ ಸಾರವನ್ನು ಬೋಧಿಸಿದ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆಚರಿಸಲಾಯ್ತು. ಬೆಂಗಳೂರಿನ ಸಹಕಾರನಗರದ ನಿವಾಸಿಯಾಗಿರುವ ತಿರುಮಲಾಚಾರ್ ಎನ್ನುವವರು ಸುಮಾರು 1 ಸಾವಿರದ 500 ಬೊಂಬೆಗಳನ್ನು ಕೂರಿಸುವ ಮೂಲಕ ವಿಶೇಷವಾಗಿ ಅಷ್ಟಮಿ ಹಬ್ಬವನ್ನು ಆಚರಿಸಿದರು. ಒಂದೊಂದು ಬೊಂಬೆಯೂ ಒಂದೊಂದು ಕತೆಯನ್ನ ಸಾರಿ ಹೇಳುತ್ತಿದ್ದು, ಒಂದಕ್ಕಿಂತ ಒಂದು ಕಲರ್ ಫುಲ್ ಆಗಿ ಸುಂದರವಾಗಿದೆ.

ಹಲವು ವರ್ಷಗಳಿಂದ ಕೃಷ್ಣನ ಬೊಂಬೆಗಳನ್ನು ಕೂರಿಸುತ್ತಾ ಬಂದಿರುವ ಇವರು, ಕೃಷ್ಣನ ವಿವಿಧ ಅವತಾರಗಳನ್ನ ಬಿಂಬಿಸುವ ಬೊಂಬೆಗಳನ್ನು ಜೋಡಿಸಿ ಪೂಜೆ ಸಲ್ಲಿಸೋ ಮೂಲಕ ಹಬ್ಬವನ್ನ ಸಂಭ್ರಮಿಸಿದರು. ದಸರಾಗೆ ಬೊಂಬೆ ಕೂರಿಸುವ ರೀತಿಯೇ ನನಗೆ ಕೃಷ್ಣ ಪ್ರಿಯವಾಗಿ ಬಿಟ್ಟಿದ್ದಾನೆ. ಹಾಗಾಗಿ ಕೃಷ್ಣನನ್ನು ಈ ರೀತಿ ರೂಪ ನೀಡಿ ಆರಾಧಿಸ್ತಿದ್ದೇನೆ ಎಂದು ಸಂತಸ ಹಂಚಿಕೊಂಡರು.
ಸುಮಾರು 80 ವರ್ಷದ ಶ್ರೀನಿವಾಸ್ ತಿರುಮಲಾಚಾರ್ ಸ್ವತಃ ತಮ್ಮ ಮನೆಯಲ್ಲಿ ಸಾವಿರಕ್ಕೂ ಹೆಚ್ಚು ಕೃಷ್ಣನ ಮೂರ್ತಿಗಳನ್ನು ಕೂರಿಸಿ ವಿಜೃಂಭಣೆಯಿಂದ ಜನ್ಮಾಷ್ಟಮಿಯನ್ನು ಆಚರಣೆ ಮಾಡುತ್ತಾರೆ. ಇನ್ನು ಕೃಷ್ಣನ ಹುಟ್ಟಿನಿಂದ ಹಿಡಿದು, ಕೃಷ್ಣ ಕದ್ದು ಬೆಣ್ಣೆ ತಿನ್ನುವುದು, ಯಶೋಧೆ ಅವನನ್ನು ಶಿಕ್ಷಿಸುವುದು, ಸುಧಾಮ ಕೃಷ್ಣನಿಗೆ ಅವಲಕ್ಕಿ ನೀಡುವುದು, ಕೃಷ್ಣ ಹಾಗೂ ಬಲರಾಮರ ತುಂಟಾಟಗಳು, ಕೃಷ್ಣ ರಾಕ್ಷಸರನ್ನು ಸಂಹರಿಸುವುದು, ರಾಧಾಕೃಷ್ಣರ ಲೀಲೋತ್ಸವ ಹೀಗೆ ಹಲವು ರೀತಿಯ ಕೃಷ್ಣನ ತುಂಟಾಟಗಳನ್ನು ಒಂದೇ ಕಡೆ ಇರಿಸಿ ಎಲ್ಲರಿಗೂ ಕೂಡ ಕೃಷ್ಣನೇ ಸರ್ವಸ್ವ ಎಂಬುದನ್ನು ಸಾರಿದರು.

ಒಟ್ಟಾರೆ ಶ್ರೀಕೃಷ್ಣನ ಜನ್ಮದಿನವನ್ನು ಸಿಲಿಕಾನ್ ಸಿಟಿ ಜನರು ಸಂಭ್ರಮದಿಂದ ಆಚರಿಸುವ ಮೂಲಕ ಕೃಷ್ಣನ ನಾಮ ಸ್ಮರಣೆ ಮಾಡಿ ಪುನೀತರಾದರು. ಶ್ರಾವಣಮಾಸದ ಅಷ್ಟಮಿಯಂದು ಬರುವ ಈ ಹಬ್ಬಕ್ಕೆ ವಿವಿಧ ರೂಪದಲ್ಲಿ ಕೃಷ್ಣನನ್ನು ಆರಾಧಿಸೋ ಮೂಲಕ ಇಷ್ಟಾರ್ಥಗಳನ್ನು ಈಡೇರಿಸುವಂತೆ ಜಗದೋದ್ಧಾರನ ಬಳಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral









Click it and Unblock the Notifications