ಬಸವನಗುಡಿ ಗಣೇಶ ಉತ್ಸವಕ್ಕೆ 53, ವಿಶೇಷಗಳು ಹಲವಾರು
ಬೆಂಗಳೂರು, ಸೆಪ್ಟೆಂಬರ್, 09 : ಗಣೇಶ ಹಬ್ಬದಂದು ಮಡಿ, ಭಕ್ತಿ, ಪೂಜೆಯಲ್ಲಿ ಮಗ್ನರಾದವರಿಗೆ ಸಂಗೀತದಲ್ಲಿಯೂ ತಲ್ಲೀನವಾಗುವ ಅವಕಾಶವನ್ನು ಬೆಂಗಳೂರು ಗಣೇಶ ಉತ್ಸವ ಸಮಿತಿ ನೀಡಿದ್ದು, ಸಂಗೀತ ಕಾರ್ಯಕ್ರಮದ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ.
ಬೆಂಗಳೂರು ಗಣೇಶ ಉತ್ಸವ ಕಾರ್ಯಕ್ರಮವು ಸುಮಾರು 11 ದಿನಗಳ ಕಾಲ ನಗರದ ಬಸವನಗುಡಿಯ ಎಪಿಎಸ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಸಂಗೀತದ ಸುಮಧುರತೆಯಲ್ಲಿ ಮಿಂದೇಳುವ ಅವಕಾಶ ಸೆಪ್ಟೆಂಬರ್ 17ರ ಗುರುವಾರದಿಂದ 27ರವರೆಗೆ ಸಂಗೀತ ಪ್ರಿಯರಿಗೆ ಲಭಿಸಲಿದೆ.
ಬೆಂಗಳೂರು ಗಣೇಶ ಉತ್ಸವ ಕಾರ್ಯಕ್ರಮವು 53ನೇ ವರ್ಷಕ್ಕೆ ಕಾಲಿಟ್ಟಿದೆ. ಇದರಲ್ಲಿ ವಾಣಿ ಜಯರಾಮ್, ಪಿ ಸುಶೀಲ, ವಿಜಯ ಪ್ರಕಾಶ್, ಶ್ರೇಯಾ ಘೋಷಾಲ್, ಕಾರ್ತಿಕ್ ಇನ್ನು ಹಲವಾರು ಸಂಗೀತ ಲೋಕದ ದಿಗ್ಗಜರು ಭಾಗವಹಿಸಲಿದ್ದಾರೆ. ಈ ಸಂಗೀತ ಮಹಾಮಣಿಗಳ ಕಂಠಸಿರಿಯಲ್ಲಿ ಜನಪದ, ಕನ್ನಡ ಸಿನಿಮಾ ಗೀತೆಗಳು ಮೂಡಿ ಬರಲಿದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.[ಪಂಡಿತ್ ಗೋಡ್ಖಿಂಡಿರಿಂದ ವಿಶಿಷ್ಟ ಸಂಗೀತ ಸಾಹಸ ಘೋಷಣೆ]

ಕಾರ್ಯಕ್ರಮದ ವಿವರ :
17ನೇ ಗುರುವಾರ - ರಾಮಚಂದ್ರ ಆಚಾರ್ಯ - ಕನ್ನಡದ ಭಕ್ತಿ ಗೀತೆಗಳ ಗಾಯನ - ಸಂಜೆ 7ರಿಂದ ರಾತ್ರಿ 10
18ನೇ ಶುಕ್ರವಾರ - ಗಾಯಕ ಇಳಯರಾಜ - ಕನ್ನಡ ಸಿನಿಮಾ ಗೀತೆಗಳು - ಸಂಜೆ 7ರಿಂದ ರಾತ್ರಿ 10
19ನೇ ಶನಿವಾರ - ಮಿಮಿಕ್ರಿ ಕಲಾವಿದ ದಯಾನಂದ - ಮಿಮಿಕ್ರಿ, ಹಾಸ್ಯ ಕಾರ್ಯಕ್ರಮ - ಸಂಜೆ 7ರಿಂದ ರಾತ್ರಿ 10
20ನೇ ಭಾನುವಾರ - ಕನ್ನಡ ಸಿನಿಮಾ ಗೀತೆಗಳು - ಅರ್ಜುನ್ ಜನ್ಯ ಮತ್ತು ತಂಡ - ಸಂಜೆ 7ರಿಂದ ರಾತ್ರಿ 10
21ನೇ ಸೋಮವಾರ - ಕ್ಲಾಸಿಕಲ್ ಜುಗಲ್ ಬಂದಿ- ವಿಶ್ವ ಮೋಹನ್ ಭಟ್,ಮೈಸೂರು ನಾಗರಾಜ್,ಮಂಜುನಾಥ್- ಸಂಜೆ 7ರಿಂದ ರಾತ್ರಿ 10
22ನೇ ಮಂಗಳವಾರ - ಕನ್ನಡ, ತಮಿಳು, ಹಿಂದಿ ಸಿನಿಮಾ ಗೀತೆ - ಕಾರ್ತಿಕ್ ಮತ್ತು ತಂಡ- ಸಂಜೆ 7ರಿಂದ ರಾತ್ರಿ 10
23ನೇ ಬುಧವಾರ - ಗಾಯಕರ ಸಮ್ಮೀಲನ - ಮಂಡೋಲಿನ್ ರಾಜೇಶ್, ಬಾಲಾ ಭಾಸ್ಕರ,ಗಿರಿಧರ, ಮೋಹಿನಿ ಡೇ, ಅರ್ಜುನ್ ಕುಮಾರ್
24ನೇ ಗುರುವಾರ - ಹಿಂದಿ ಮತ್ತು ಕನ್ನಡ ಸಿನಿಮಾ ಗೀತೆಗಳು - ಕುನಾಲ್ ಗಂಜವಾಲಾ - ಸಂಜೆ 7ರಿಂದ ರಾತ್ರಿ 10
25ನೇ ಶುಕ್ರವಾರ - ಭಾರತೀಯ ಜನಪದ ಗೀತೆಗಳು - ರಘು ದೀಕ್ಷಿತ್ ಮತ್ತು ತಂಡ - ಸಂಜೆ 7ರಿಂದ ರಾತ್ರಿ 10
26ನೇ ಶನಿವಾರ - ಹಳೆಯ ಪ್ರಸಿದ್ಧ ಕನ್ನಡ ಸಿನಿಮಾ ಗೀತೆ -ಪಿ. ಸುಶೀಲ,ವಾಣಿ ಜಯರಾಮ್,ವಿಜಯ ಪ್ರಕಾಶ್- ಸಂಜೆ 7ರಿಂದ ರಾತ್ರಿ 10
27ನೇ ಭಾನುವಾರ -ಕನ್ನಡ ಮತ್ತು ಹಿಂದಿ ಸಿನಿಮಾ ಗೀತೆಗಳು- ಶ್ರೇಯಾ ಘೋಷಾಲ್ ಮತ್ತು ತಂಡ- ಸಂಜೆ 7ರಿಂದ ರಾತ್ರಿ 10
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?












Click it and Unblock the Notifications