ಬೆಂಗಳೂರು, ಮಂಗಳೂರು, ಗೋವಾದಲ್ಲಿ ಐಟಿ ದಾಳಿ
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು, ಮಂಗಳೂರು ಹಾಗೂ ಗೋವಾದಲ್ಲಿ ಕಾಳಧನಿಕರ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಶುಕ್ರವಾರ ಸಂಜೆ ನಡೆದ ದಾಳಿಯಲ್ಲಿ ಕೋಟ್ಯಂತರ ರುಪಾಯಿ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು, ನವೆಂಬರ್ 18: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು, ಮಂಗಳೂರು ಹಾಗೂ ಗೋವಾದಲ್ಲಿ ಕಾಳಧನಿಕರ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಶುಕ್ರವಾರ ಸಂಜೆ ನಡೆದ ದಾಳಿಯಲ್ಲಿ ಕೋಟ್ಯಂತರ ರುಪಾಯಿ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ
ಯಲಹಂಕದ
ಫೈನಾಶ್ಶಿಯರ್
ರೊಬ್ಬರ
ಮನೆ
ಹಾಗೂ
ಕಚೇರಿ
ಮೇಲೆ
ದಾಳಿ
ನಡೆಸಲಾಗಿದ್ದು,
ಸುಮಾರು
16
ಕೋಟಿ
ರುಪಾಯಿ
ಪತ್ತೆಯಾಗಿದೆ.
ಇದಲ್ಲದೆ
ಮೂರು
ಪ್ರತಿಷ್ಠಿತ
ಜ್ಯುವೆಲ್ಲರಿಯ
ಮೂರು
ಮಳಿಗೆಗಳ
ಮೇಲೆ
ದಾಳಿ
ನಡೆಸಲಾಗಿದೆ
ಎಂದು
ಆದಾಯ
ತೆರಿಗೆ
ಇಲಾಖೆ
ಪ್ರಧಾನ
ಆಯುಕ್ತ
ಅಲೆಕ್ಸ್
ಮಾಥ್ಯೂ
ಹೇಳಿದ್ದಾರೆ.[ಚೆನ್ನೈ:
ಆಭರಣ
ಮಳಿಗೆಗಳ
ಮೇಲೆ
ಆದಾಯ
ತೆರಿಗೆ
ದಾಳಿ]
ಜ್ಯುವೆಲ್ಲರಿ ಮಳಿಗೆಯಲ್ಲಿ ಅತಿ ಹೆಚ್ಚಿನ ಬೆಲೆಗೆ ಚಿನ್ನಾಭರಣ ಮಾರಾಟ ಮಾಡುತ್ತಿದ್ದದ್ದು ಕಂಡು ಬಂದಿದೆ. ಇನ್ನೊಂದು ಪ್ರಕರಣದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 100 ಗ್ರಾಂನ 2 ಚಿನ್ನದ ಬಿಸ್ಕತ್ ಗಳನ್ನು ಕೊಂಡೊಯ್ಯುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರಿನಲ್ಲಿ ಐದು ಸಹಕಾರಿ ಬ್ಯಾಂಕ್ ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಹಣ ವಿನಿಯಮ ಮಾಡುತ್ತಿದ್ದ ಸುಮಾರು 8 ಕೋಟಿ ರುಪಾಯಿಯಷ್ಟು ಹಣವನ್ನು ಜಪ್ತಿ ಮಾಡಲಾಗಿದೆ. ಪಣಜಿ ಹೋಟೆಲ್ ವೊಂದರ ಮೇಲೆ ದಾಳಿ ನಡೆಸಿ ವ್ಯಕ್ತಿಯೊಬ್ಬರ ಬಳಿ ಇದ್ದ 96 ಲಕ್ಷ ರುಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.