ಇನ್ ದಿ ಫೀಲ್ಡ್: ಬೆಂಗಳೂರು ಹುಡುಗಿಯರ ವಿನೂತನ ಯೋಜನೆ
ಬೆಂಗಳೂರು, ನವೆಂಬರ್ 15: ಭಾರತ ಎದುರಿಸುತ್ತಿರುವ ಸಮಸ್ಯೆಗಳು ಹಲವು. ಅವುಗಳನ್ನು ಪರಿಹರಿಸುವುದಕ್ಕಾಗಿ ಸ್ವಇಚ್ಛೆಯಿಂದಲೇ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಸಂಸ್ಥೆಗಳು ಕೆಲವು. ಅವುಗಳಲ್ಲಿ ಇನ್ ದಿ ಫೀಲ್ಡ್ ಕೂಡ ಒಂದು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇನ್ ದಿ ಫೀಲ್ಡ್ ಎಂಬುದು ಭಾರತ ಮತ್ತು ಅಭಿವೃದ್ಧಿಯ ಕುರಿತ ಒಂದು ಪೋಡ್ ಕಾಸ್ಟ್. ಅಂದರೆ ಲೇಖನ ಮತ್ತು ಆಡಿಯೋಗಳ ಮೂಲಕ ಭಾರತಕ್ಕೆ ಸಂಬಂಧಿಸಿದ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಮತ್ತು ಅವುಗಳಿಗೆ ಪರಿಹಾರ ಸೂಚಿಸುವ ಪ್ರಯತ್ನ ಇದು. ಇದನ್ನು ಆರಂಭಿಸಿದ್ದು, ಬೆಂಗಳೂರಿಗರೇ ಆದ ರಾಧಿಕಾ ವಿಶ್ವನಾಥ್ ಮತ್ತು ಸಂಯುಕ್ತಾ ವರ್ಮಾ.

ಬೇರೆ ಬೇರೆ ಸಂಸ್ಥೆಗಳಲ್ಲಿ, ಸಾಮಾಜಿಕ ರಂಗದಲ್ಲಿ, ಸಂಶೋಧನೆ, ಸರ್ಕಾರ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಸಂಯುಕ್ತ ಮತ್ತು ರಾಧಿಕಾ ಅವರಿಗೆ ಭಾರತದ ಅಭಿವೃದ್ಧಿ ಮತ್ತು ತಾಯ್ನಾಡಿನ ಮೇಲಿದ್ದ ಅಭಿಮಾನವೇ ಇನ್ ದಿ ಫೀಲ್ಡ್ ಸ್ಥಾಪನೆಗೆ ನಾಂದಿಹಾಡಿತು.
ಲೇಖನ ಮತ್ತು ಆಡಿಯೋ ಜೊತೆ ಈಗಾಗಲೇ ಹಲವು ಎಪಿಸೋಡ್ ಗಳನ್ನು ಆರಂಭಿಸಿರುವ ಇನ್ ದಿ ಫೀಲ್ಡ್ ಕುರಿತು ಸಂಯುಕ್ತಾ ವರ್ಮಾ ಹೇಳಿದ್ದಿಷ್ಟು;

"ಇನ್ ದಿ ಫೀಲ್ಡ್ ಅನ್ನೋದು ಒಂದು ಪೋಡ್ ಕಾಸ್ಟ್. ಸಾಮಾಜಿಕ ಕ್ಷೇತ್ರಗಳಲ್ಲಿ ಆಗಬೇಕಾದ ಬದಲಾವಣೆ ಮತ್ತು ಪ್ರಗತಿಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಇದು ಮಾಡುತ್ತಿದೆ. ಬೇರೆ ಬೇರೆ ಕಾರ್ಪೋರೇಟ್ ಕಂಪೆನಿಗಳನ್ನೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸುವಲ್ಲಿ ಪ್ರಯತ್ನಿಸುತ್ತಿದೆ."
"ಕಳೆದ ಒಂದು ದಶಕಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಮಗೆ ದೇಶದ ಹಲವು ಸಮಸ್ಯೆಗಳ ಪರಿಚಯವಾಯ್ತು. ಆದರೆ ಆ ಎಲ್ಲ ಸಮಸ್ಯೆಗಳ ಕುರಿತು ದೇಶದ ಬಹುಪಾಲು ಜನರಿಗೆ ಗೊತ್ತೇ ಇಲ್ಲ ಎಂಬ ಸತ್ಯವೂ ಅರಿವಾಯ್ತು. ಅದಕ್ಕೆಂದೇ ಅವನ್ನು ಇನ್ ದಿ ಫೀಲ್ಡ್ ಮೂಲಕ ಒಂದಷ್ಟು ಜನರಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ. ಬೇರೆ ಬೇರೆ ಸ್ಥಳಗಳಲ್ಲಿ, ಸಂಸ್ಥೆಗಳಲ್ಲಿ, ಕಂಪೆನಿಗಳಲ್ಲಿ ಸಂವಾದ ಕಾರ್ಯಕ್ರಮಗಳನ್ನೂ ಮಾಡಿ, ಮತ್ತಷ್ಟು ಜನ ನಮ್ಮೊಂದಿಗೆ ಕೈಜೋಡಿಸುವಂತೆಯೂ ಮಾಡುತ್ತಿದ್ದೇವೆ. ಸೇವಾಮನೋಭಾವನೆಯ ಸಾಕಷ್ಟು ಜನ ನಮ್ಮೊಂದಿಗೆ ಸ್ವ ಇಚ್ಛೆಯಿಂದ ಕೈಜೋಡಿಸಿರುವುದು ನಮ್ಮ ಸುಯೋಗ"

"ಕೇವಲ ಲೇಖನ ಬರೆಯುವುದಕ್ಕಿಂತ, ಅವುಗಳಲ್ಲಿಂದ ಕಾಳಜಿಯ 'ಧ್ವನಿ'ಯನ್ನು ಪರಿಚಯಿಸಿದರೆ ಜನರಿಗೆ ಸಮಸ್ಯೆಯ ತೀವ್ರತೆ, ಮತ್ತಷ್ಟು ಜನರ ನೋವು ಅರ್ಥವಾದೀತು ಎಂಬ ದೃಷ್ಟಿಯಿಂದ ಆಡಿಯೋ ಕೂಡ ಇದರಲ್ಲಿ ಜೊತೆಯಾಗಿದೆ. ಇದರಿಂದ ದೇಶದಲ್ಲಿ ಒಂದಷ್ಟಾದರೂ ಧನಾತ್ಮಕ ಬದಲಾವಣೆಯಾದರೆ ನಮ್ಮ ಶ್ರಮವೂ ಸಾರ್ಥಕ"
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ










Click it and Unblock the Notifications