ಚಿತ್ರಗಳಲ್ಲಿ : ವಿಜಯನಗರದಿಂದ ಅನಂತ್ 'ವಿಜಯ ಯಾತ್ರೆ'
ಬೆಂಗಳೂರು, ಮಾ.17: ಯುಪಿಎ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆ ವಿರುದ್ಧ ಸಮಯ ಸಾರಿರುವ ಬಿಜೆಪಿಗೆ ವಿಜಯ ಸಾಧಿಸಲಿ ಎಂಬ ಉದ್ದೇಶದಿಂದ ವಿಜಯ ನಗರದಿಂದಲೇ ‘ವಿಜಯ ಯಾತ್ರೆ' ಆರಂಭಿಸಲಾಗಿದೆ ಎಂದು ಹಾಲಿ ಸಂಸದ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೇಳಿದ್ದಾರೆ.
ವಿಜಯನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಜಯ ನಗರ, ಹಂಪಿ ನಗರ ಸೇರಿ ವಿವಿಧೆಡೆ ಗಳಲ್ಲಿ ರೋಡ್ ಶೋ ನಡೆಸಿದ ಅನಂತ್ ಕುಮಾರ್ ಅವರು, 'ಈ ದೇಶವನ್ನು ರಕ್ಷಿಸಲು ಹಾಗೂ ಅಭಿವೃದ್ಧಿ ಶೀಲಗೊಳಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗೆಲುವು ಸಾಧಿಸಬೇಕಿದೆ ಎಂದರು.
ಬಿಜೆಪಿ ಗೆಲ್ಲಿಸಿ ದೇಶವನ್ನು ಉಳಿಸಿ: ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕೆಂದು ಮತದಾರರಲ್ಲಿ ಮನವಿ ಮಾಡಿದ ಅನಂತ ಕುಮಾರ್, ರಾಜ್ಯ ಮತ್ತು ದೇಶದಲ್ಲಿ ಮೋದಿಯ ಅಲೆ ಇದ್ದು, ಬಿಜೆಪಿ ಕಾರ್ಯಕರ್ತರು ಇದನ್ನು ಸದ್ಬಳಕೆ ಮಾಡಬೇಕು. [ವಿಜಯ ಯಾತ್ರೆ ಇನ್ನಷ್ಟು ಚಿತ್ರಗಳಿಗೆ ಕ್ಲಿಕ್ಕಿಸಿ]
‘ಆಮ್ ಆದ್ಮಿ ಪಕ್ಷ'ದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರೋಡ್ ಶೋ ನಡೆಸಿದರೆಂಬ ಕಾರಣಕ್ಕೆ ವಿಜಯನಗರದಲ್ಲಿ ರೋಡ್ ಶೋ ಮಾಡುತ್ತಿಲ್ಲ. ವಿಜಯ ಯಾತ್ರೆಗಾಗಿ ವಿಜಯನಗರದಿಂದ ರೋಡ್ ಶೋ ಆರಂಭಿಸಿದ್ದೇವೆ. ಮಾಧ್ಯಮವನ್ನು ಟೀಕಿಸುವ ಕೇಜ್ರಿವಾಲ್ ಗೆ ಪ್ರಜಾಪ್ರಭುತ್ವ ಮತ್ತು ಮಾಧ್ಯಮ ವಿರೋಧಿ ಎಂದು ಅವರು ಕರೆದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್ ಎನ್ ಅನಂತ್ ಕುಮಾರ್ ಹಾಗೂ ಅವರ ಪತ್ನಿ ತೇಜಸ್ವಿನಿ ಅವರು ನಡೆಸಿದ ಪಾದಯಾತ್ರೆಯ ವಿವರ ಮುಂದಿನ ಚಿತ್ರ ಸರಣಿಯಲ್ಲಿ ತಪ್ಪದೇ ವೀಕ್ಷಿಸಿ...

ಬೆಂಗಳೂರು ಜನ ಸೇವೆ ಮಾಡಿದ ಅನುಭವ
ಸುಮಾರು ಹದಿನೆಂಟು ವರ್ಷಗಳಿಂದಲೂ ಬೆಂಗಳೂರು ಜನರ ಸೇವೆ ಸಲ್ಲಿಸುತ್ತಿರುವ ನಮಗೆ ಗೆಲುವು ದೊರೆಯಲಿದೆ ಎಂದು ಅನಂತ ಕುಮಾರ್ ಭರವಸೆ ವ್ಯಕ್ತಪಡಿಸಿದರು.

ನಂದನ್ ನಿಲೇಕಣಿ ಆಧಾರ್ ಕಾರ್ಡ್ ಬಗ್ಗೆ
ಆಧಾರ್ ಕಾರ್ಡ್ ರೂವಾರಿ ನಂದನ್ ನಿಲೇಕಣಿ ಆಧಾರ್ ಕಾರ್ಡ್ ಜನರಿಗೆ ತಲುಪಿಸುತ್ತಿದ್ದೇನೆ ಎನ್ನುತ್ತಾ ಭಾರತದ ಮಾಹಿತಿಯನ್ನು ವಿದೇಶಿಗರಿಗೆ ಹಂಚಿದ್ದಾರೆಂದು ದೂರಿದರು.

ವಿಜಯನಗರದಲ್ಲಿ ಮಾಜಿ ಸಚಿವ ಸೋಮಣ್ಣ ಸಾಥ್
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್ ಅವರಿಗೆ ಮಾಜಿ ಸಚಿವ ಸೋಮಣ್ಣ ಸಾಥ್ ನೀಡಿದರು. ಈ ಹಿಂದೆ ಬಿಜೆಪಿಯಲ್ಲಿ ಉಂಟಾಗಿದ್ದ ಕೆಲ ತಪ್ಪುಗಳನ್ನು ಜನರು ಕ್ಷಮಿಸಬೇಕು. ಬಿಜೆಪಿಗೆ ಮತ ನೀಡುವ ಮೂಲಕ ಕಾಂಗ್ರೆಸನ್ನು ತೊಲಗಿಸಿ, ದೇಶ ಉಳಿಸಬೇಕು ಎಂದು ಸೋಮಣ್ಣ ಮನವಿ ಮಾಡಿದರು.

ಜಯನಗರದಲ್ಲಿ ಅನಂತ್ ಕುಮಾರ್ ಕಚೇರಿ
ವಿಜಯನಗರದಲ್ಲಿ ರೋಡ್ ಶೋ(ವಿಜಯ ಯಾತ್ರೆ) ಆರಂಭಿಸುವುದಕ್ಕೂ ಮುನ್ನ ಅನಂತಕುಮಾರ್ ಅವರು ಜಯನಗರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್, ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಉಪ ಸಭಾಪತಿ ವಿಮಲಾಗೌಡ, ಶಾಸಕ ಬಿ.ಎನ್ ವಿಜಯಕುಮಾರ್, ವಿ. ಸೋಮಣ್ಣ, ಅಶ್ವತ್ಥನಾರಾಯಣ, ಮೇಯರ್ ಕಟ್ಟೆ ಸತ್ಯನಾರಾಯಣ, ಮಹಿಳಾ ಮುಖಂಡರಾದ ಶ್ರುತಿ, ಮಾಳವಿಕಾ ಮುಂತಾದವರು ಉಪಸ್ಥಿತರಿದ್ದರು.

ತೇಜಸ್ವಿನಿ ಅನಂತ್ ಅವರಿಂದ ಹೋಳಿ ಆಚರಣೆ
ಬೆಂಗಳೂರಿನ ಭುವನೇಶ್ವರಿ ನಗರ, ಚಿಕ್ಕಲಸಂದ್ರ, ಪದ್ಮನಾಭನಗರದಲ್ಲಿ ಪಾದಯಾತ್ರೆ ನಡೆಸಿ ಅನಂತ್ ಕುಮಾರ್ ಪರ ಮತ ಯಾಚಿಸಿದರು.

ಗಣೇಶ್ ಮಂದಿರ ವಾರ್ಡ್ ನಲ್ಲಿ ತೇಜಸ್ವಿನಿ
ಬನಶಂಕರಿ ದೇಗುಲದ ಶಾಖಾಂಬರಿ ನಗರದ ಗಣೇಶ್ ಮಂದಿರ ವಾರ್ಡ್ 165 ನಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರು ಮತದಾರರ ಜತೆ ಸಮಾಲೋಚನೆ
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications