ನಾನು ದೇಶದ್ರೋಹಿಯಲ್ಲ, ನಾನು ಕ್ಷಮೆಯಾಚಿಸಲ್ಲ : ರಮ್ಯಾ
ಬೆಂಗಳೂರು, ಆಗಸ್ಟ್ 23: ಮಂಡ್ಯದ ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ವಿರುದ್ಧ ದೇಶದ್ರೋಹದ ದೂರು ದಾಖಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ, ನಾನು ಮೋದಿ ವಿರೋಧಿಯಲ್ಲ, ದೇಶದ್ರೋಹಿಯೂ ಅಲ್ಲ, ಕ್ಷಮೆಯಾಚಿಸಲ್ಲ ಎಂದಿದ್ದಾರೆ. ರಮ್ಯಾ ಪರವಾಗಿ ಟ್ವಿಟ್ಟರ್ ನಲ್ಲಿ ಸಂದೇಶಗಳು ಹರಿದಾಡುತ್ತಿವೆ. ಪತ್ರಕರ್ತೆ ಬರ್ಖಾ ದತ್ ಕೂಡಾ ರಮ್ಯಾ ಪರ ಟ್ವೀಟ್ ಮಾಡಿದ್ದಾರೆ.
ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಅಷ್ಟೇ, ನಾನು ಪಾಕಿಸ್ತಾನದ ಪರವಾಗಿ ಮಾತನಾಡಿಲ್ಲ ಎಂದು ರಮ್ಯಾ ಅವರು ಎಎನ್ ಐ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು 'ಪಾಕಿಸ್ತಾನಕ್ಕೆ ಹೋದರೆ ನರಕಕ್ಕೆ ಹೋದಂತೆ' ಎಂಬ ಹೇಳಿಕೆಯನ್ನು ಮಾಜಿ ಸಂಸದೆ ರಮ್ಯಾ ಆಕ್ಷೇಪಿಸಿದ್ದು, ಪಾಕಿಸ್ತಾನವನ್ನು ಹೊಗಳಿದ್ದಾರೆ. ನಾನು ಮೋದಿ ಅವರನ್ನು ದ್ವೇಷಿಸುವುದಿಲ್ಲ. ಅವರ ಕೆಲವು ನಿಲುವುಗಳಿಗೆ ನನ್ನ ಸಹಮತವಿಲ್ಲ ಎಂದು ರಮ್ಯಾ ಅವರು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.[ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ: ರಮ್ಯಾ]
Don't think Im wrong. I also love Bangladesh, Sri Lanka. Of course I wont leave India, its my home & I am not going to leave my dogs: Ramya
— ANI (@ANI_news) August 23, 2016
ಆದರೆ, ರಮ್ಯಾ ಅವರ ಹೇಳಿಕೆ ಖಂಡಿಸಿ ಬಿಜೆಪಿ ಬೆಂಬಲಿತ ಸಂಘಟನೆಗಳು ವಿವಿಧೆಡೆ ಪ್ರತಿಭಟನೆ ನಡೆಸಿದ್ದು ವರದಿಯಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದೆ. ಮಂಡ್ಯದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಳಿಕ ರಮ್ಯಾ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಟ್ವಿಟ್ಟ ಮೂಲಕ ಮಾತ್ರ ಉತ್ತರ ನೀಡುತ್ತಿದ್ದಾರೆ.ಟ್ವೀಟ್ ಗಳ ಸಂಗ್ರಹ ಮುಂದಿದೆ ಓದಿ...

ನಾನು ಮೋದಿ ವಿರೋಧಿಯಲ್ಲ, ದೇಶದ್ರೋಹಿಯೂ ಅಲ್ಲ,
ನಾನು ಮೋದಿ ವಿರೋಧಿಯಲ್ಲ, ದೇಶದ್ರೋಹಿಯೂ ಅಲ್ಲ, ಕ್ಷಮೆಯಾಚಿಸಲ್ಲ ಎಂದಿದ್ದಾರೆ. ರಮ್ಯಾ ಪರವಾಗಿ ಟ್ವಿಟ್ಟರ್ ನಲ್ಲಿ ಸಂದೇಶಗಳು ಹರಿದಾಡುತ್ತಿವೆ. ಪತ್ರಕರ್ತೆ ಬರ್ಖಾ ದತ್ ಕೂಡಾ ರಮ್ಯಾ ಪರ ಟ್ವೀಟ್ ಮಾಡಿದ್ದಾರೆ. ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ. ಅಲ್ಲಿಯ ಜನ ನಮ್ಮ ರೀತಿನೇ ಇದ್ದಾರೆ. ಸಾರ್ಕ್ ಕಾನ್ಫರೆನ್ಸ್ ನಲ್ಲಿ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು ಎಂದು ರಮ್ಯಾ ಹೇಳಿದ್ದರು.
|
ಬರ್ಖಾ ಅವರು ರಮ್ಯಾ ಪರ ಟ್ವೀಟ್ ಮಾಡಿ
ಪತ್ರಕರ್ತೆ ಬರ್ಖಾ ಅವರು ರಮ್ಯಾ ಪರ ಟ್ವೀಟ್ ಮಾಡಿ ದೇಶದ್ರೋಹದ ಆರೋಪ ಹೊರೆಸುವ ಮುನ್ನ ಯೋಚಿಸುವುದು ಒಳಿತು, ಕಾನೂನನ್ನು ದುರುಪಯೋಗ ಪಡಿಸಿಕೊಂಡು ಅಪಹಾಸ್ಯಕ್ಕೀಡಾಗಬಾರದು ಎಂದಿದ್ದಾರೆ. ಟ್ವೀಟ್ ಗಳ ಸಂಗ್ರಹ ಮುಂದಿದೆ ಓದಿ...
|
ಇದೆಲ್ಲ ಆರೆಸ್ಸೆಸ್ ಬೆಂಬಲಿತರ ಕೃತ್ಯ
ಇದೆಲ್ಲ ಆರೆಸ್ಸೆಸ್ ಬೆಂಬಲಿತರ ಕೃತ್ಯ, ಪ್ರತಿ ಹೇಳಿಕೆಗಳಿಗೂ ದೇಶದ್ರೋಹದ ಲೇಬಲ್ ಹಚ್ಚುತ್ತಿದ್ದಾರೆ ಹೇಗೆ?
|
#WeStandWithRamya ಟ್ರೆಂಡ್ ಮಾಡುತ್ತಿರುವ ಫ್ಯಾನ್ಸ್
#WeStandWithRamya ಟ್ರೆಂಡ್ ಮಾಡುತ್ತಿರುವ ರಮ್ಯಾ ಫ್ಯಾನ್ಸ್
|
ಇದು ಪ್ರಚಾರ ತಂತ್ರ ಅಷ್ಟೆ ಎಂದ ಟ್ವೀಟ್ ಗಳು
ಸಿನಿಮಾದಿಂದ ರಾಜಕೀಯಕ್ಕೆ ಬಂದು ಪ್ರಚಾರ ಗಿಟ್ಟಿಸಿಕೊಳ್ಳುವ ಮಂದಿ
|
ಇದಕ್ಕೆ ಉದಾಸೀನತೆಯೇ ಮದ್ದು, ದೇಶದ್ರೋಹದ ಆರೋಪ ಏಕೆ?
ರಮ್ಯಾ ಅವರ ಹೇಳಿಕೆಗೆ ಉದಾಸೀನತೆಯೇ ಮದ್ದು, ದೇಶದ್ರೋಹದ ಆರೋಪ ಏಕೆ?
|
ದಾನೀಶ್ ಸೇಠ್ ಅವರು ಟ್ವೀಟ್ ಮಾಡಿದ್ದು ಹೀಗೆ
ದುಬೈನಲ್ಲಿ ಭಾರತ ಹಾಗೂ ಪಾಕಿಸ್ತಾನದ ಮಂದಿ ಒಟ್ಟಿಗೆ ಕಾರ್ಯನಿರ್ವಹಿಸುತ್ತಾರೆ, ಸಂತೋಷದ ಜೀವನ ನಡೆಸಿ, ದ್ವೇಷ ಬಿಡಿ
|
ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ನಲ್ಲಿ ನಂ. 1
ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ನಲ್ಲಿ ನಂ. 1 ಆಗಿದ್ದು ಹೀಗೆಲ್ಲ ಗಲಾಟೆಯಾಗುತ್ತಿದೆಯೇ? ಎಂಬ ತಮಾಷೆ ಟ್ವೀಟ್ ಇದೆ.
|
ಈ ರೀತಿ ಕೇಸ್ ಹಾಕುತ್ತಾರೆ ಎಂದರೆ ಭಯವಾಗುತ್ತೆ
ಈ ರೀತಿ ಹೇಳಿಕೆ ನೀಡಿದ್ದಕ್ಕೆಲ್ಲ ಕೇಸ್ ಹಾಕುತ್ತಾರೆ ಎಂದರೆ ಭಯವಾಗುತ್ತೆ
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications