ಪೊಲೀಸರನ್ನು ಕೊಲೆಗಾರರಿದ್ದಲ್ಲಿಗೆ ಕೊಂಡೊಯ್ದ ಒಂದು ಟಿ ಶರ್ಟ್
ಬೆಂಗಳೂರು, ಏ.11: ದಿನಗೂಲಿ ನೌಕರ ಸತ್ಯಶೀಲನ್ ಬಾಣಸವಾಡಿಯಲ್ಲಿರುವ ಮುಖ್ಯ ರಸ್ತೆಯಲ್ಲಿರುವ ಕೊಳವೊಂದರಲ್ಲಿ ಬಿದ್ದು ಮೃತಪಟ್ಟಿದ್ದರು.
ಮೊದ ಮೊದಲು ಆತ ಕುಡಿದ ಮತ್ತಿನಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಎದೆಯ ಹಿಂಬದಿ ಇರಿತದಿಂದಾಗಿ ಆತ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು.
ಎಲ್ ಮಾರ್ಕ್ ಇರುವ ಬಿಳಿ ಬಣ್ಣದ ಟಿ ಶರ್ಟ್ ಒಂದು ಕೊಲೆಗಾರರವರೆಗೆ ಪೊಲೀಸರನ್ನು ಸುಲಭವಾಗಿ ಕರೆದೊಯ್ದಿತ್ತು. ಆ ಕೊಳದ ಸುತ್ತಮುತ್ತಲಿರುವ ಸಿಸಿಟಿವಿಯನ್ನು ಪರೀಕ್ಷಿಸಿದಾಗ ಬೈಕಿನಲ್ಲಿ ಹೋಗುತ್ತಿದ್ದ ದುಷ್ಕರ್ಮಿಗಳು ಸತ್ಯಶೀಲನ್ ಅವರ ಬಳಿ ಮದ್ಯದ ಬಾಟಲಿ ಕೊಡುವಂತೆ ಕೇಳಿದ್ದಾರೆ, ಅದನ್ನು ನೀಡದ ಕಾರಣ ಸತ್ಯಶೀಲನ್ ಅವರ ಎದೆಯ ಹಿಂಬದಿಗೆ ಇರಿದು ಅಲ್ಲಿಂದ ಪರಾರಿಯಾಗಿದ್ದು ತಿಳಿದುಬಂದಿತ್ತು.

ಕೊಲೆಗಾರರ ಪೈಕಿ ಓರ್ವ ಅಂದು ಬಿಳಿ ಬಣ್ಣದ ಟಿ ಶರ್ಟ್ ಧರಿಸಿದ್ದ ಎನ್ನುವುದು ಗೊತ್ತಾಗಿತ್ತು. ಬಳಿಕ ಆ ಬಿಳಿ ಟಿ ಶರ್ಟ್ ಧರಿಸುವ ವ್ಯಕ್ತಿ ಎಲ್ಲೆಲ್ಲಿ ಹೋಗಿದ್ದ ಕೊಲೆಗಾರರ ಜಾಡು ಹಿಡಿದು ಪೊಲೀಸರು ತೆರಳಿ ಕೊಲೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications